Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರ ವಿಮರ್ಶೆ : ಚೆಲುವಯ್ಯ ಚೆಲುವೋ 'ಅಪ್ಪಯ್ಯ'
ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರು ಈ ಬಾರಿ ಅಪ್ಪಟ ಪ್ರೇಮಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಪ್ರೇಮಕಥೆಯ ಜೊತೆಗೆ ಮಾಸ್ ಪ್ರಿಯರಿಗೆ ಇಷ್ಟವಾಗುವ ಅಂಶಗಳು ಚಿತ್ರದಲ್ಲಿವೆ. ಉತ್ತರ ಕರ್ನಾಟಕದಲ್ಲಿ ನಡೆದ ನೈಜಕಥೆಗೆ ಎಸ್ ನಾರಾಯಣ ತಮ್ಮದೇ ಆದಂತಹ ಸಿನಿಮೀಯ ಸ್ಪರ್ಶ ನೀಡಿದ್ದಾರೆ.
ನವಿರಾದ ಪ್ರೇಮಕಥೆ ಹೇಳುವಾಗ ಎಲ್ಲೋ ಒಂದು ಕಡೆ 'ಚೆಲುವಿನ ಚಿತ್ತಾರ' ನೆನಪಾಗುತ್ತದೆ. ಅನಾಥ ಅಪ್ಪಯ್ಯನನ್ನು (ಶ್ರೀನಗರಕಿಟ್ಟಿ) ಗೊರವಯ್ಯ (ಸುರೇಶ್ಚಂದ್ರ) ಸಾಕುತ್ತಾನೆ. ಸಾರಾಯಿ ಬಾಟಲಿಗಳ ನಡುವೆ ಬೆಳೆಯುವ ಅಪ್ಪಯ್ಯನಿಗೆ ಗೊರವಯ್ಯ ಅಂದ್ರೆ ತುಂಬ ಇಷ್ಟ.
ಅಕ್ಕಪಕ್ಕದೂರಿನ ದ್ವೇಷದ ದಳ್ಳುರಿಯಲ್ಲಿ ಕಥೆ ಸಾಗುತ್ತದೆ. ಗೊರವಯ್ಯನ ವಿರುದ್ಧ ತೊಡೆತಟ್ಟುವ ವಿರೋಧಿ ಗುಂಪಿನ ನಾಯಕನ ಮಗಳನ್ನೇ ಅಪ್ಪಯ್ಯ ಪ್ರೇಮಿಸುತ್ತಾನೆ. ಈ ದ್ವೇಷದ ಕಿಡಿಯಲ್ಲಿ ಇವರಿಬ್ಬರ ಪ್ರೀತಿ ಅರಳುತ್ತದೋ ಮುದುಡುತ್ತದೋ ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು.ಮಾಸ್ ಪಾತ್ರದಲ್ಲಿ ಶ್ರೀನಗರಕಿಟ್ಟಿ ಮಿಂಚಿದ್ದಾರೆ. ಚಿತ್ರದ ನಾಯಕಿ ಭಾಮಾ ಸಹ ಅಷ್ಟೇ ಬೊಂಬಾಟ್ ಅಭಿನಯ ನೀಡಿದ್ದಾರೆ. ಗೊರವಯ್ಯನಾಗಿ ಸುರೇಶ್ಚಂದ್ರ ಅವರ ಪಾತ್ರ ಗಮನಾರ್ಹ. ಇದೆಲ್ಲಕ್ಕೂ ಕಳಶವಿಟ್ಟಂತೆ ಜಗದೀಶ್ ವಾಲಿ ಅವರ ಛಾಯಾಗ್ರಹಣವಿದೆ.
ಈ ಬಾರಿಯೂ ನಾರಾಯಣ್ ಅವರು ಕತೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಂಗೀತದಲ್ಲಿ ಮಿಂಚಿದ್ದಾರೆ. ಪೋಷಕ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಆದರೆ ಮಚ್ಚಿನ ಅಬ್ಬರ ಇನ್ನು ಸ್ವಲ್ಪ ಕಡಿಮೆಯಾಗಿದ್ದರೆ ಚಿತ್ರ ಇನ್ನಷ್ಟು ಸೊಗಸಾಗಿರುತ್ತಿತ್ತು.
ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಚಿತ್ರ ಎಲ್ಲೂ ಬೋರು ಹೊಡೆಸುವುದಿಲ್ಲ. ಉತ್ತರ ಕನ್ನಡ ಭಾಷೆಯಲ್ಲಿ ಕಿಟ್ಟಿ ಗಮನಸೆಳೆಯುತ್ತಾರೆ. ಚಿತ್ರದಲ್ಲಿ ಕಾಮಿಡಿ ಅಷ್ಟಾಗಿ ಇಲ್ಲ ಅನ್ನಿಸಿದರೂ ಸ್ವತಃ ಎಸ್ ನಾರಾಯಣ್ ಅಭಿನಯಿಸಿದ್ದು ಕಚಗುಳಿ ಇಡುತ್ತಾರೆ. ಹಿರಿಯೂರಿನ ದೊಡ್ಡದಾದ ಬಯಲೇ ಇಲ್ಲಿನ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತದೆ. ಅದೂ ಒಂದು ಪಾತ್ರದಂತೆ ಭಾಸವಾಗುತ್ತದೆ.
ಚಿತ್ರ: ಅಪ್ಪಯ್ಯ
ನಿರ್ಮಾಣ: ಶ್ರೀಮತಿ ಭಾಗ್ಯವತಿ ಕಂಬೈನ್ಸ್
ನಿರ್ದೇಶನ: ಎಸ್ ನಾರಾಯಣ್
ಛಾಯಾಗ್ರಹಣ: ಜಗದೀಶ್ ವಾಲಿ
ಪಾತ್ರವರ್ಗ: ಶ್ರೀನಗರ ಕಿಟ್ಟಿ, ಭಾಮಾ, ಸುರೇಶ್ಚಂದ್ರ