Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರ ವಿಮರ್ಶೆ: ವಿಮರ್ಶಕರ ದೃಷ್ಟಿಕೋನದಲ್ಲಿ 'ಕ'
ತನ್ನ ವಿಭಿನ್ನ ಶೀರ್ಷಿಕೆಯಿಂದ ಚಿತ್ರರಸಿಕರ ಗಮನಸೆಳೆದ ಚಿತ್ರ 'ಕ'. ಆರಂಭದಿಂದಲೂ ಭಿನ್ನ ಪ್ರಚಾರ ನೀಡುತ್ತಾ ಬಂದ ಈ ಚಿತ್ರದ ಬಗ್ಗೆ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖ್ಯಾತ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರ ಪುತ್ರ ಹೆಸರಾಂತ ಡಿಸೈನರ್ ಸಾಯಿ ಕೃಷ್ಣ ಅವರ ಚೊಚ್ಚಲ ಪ್ರಯತ್ನವಿದು.
ಮೊದಲ ಪ್ರಯತ್ನದಲ್ಲಿ ಸಾಯಿ ಕೃಷ್ಣ ಅವರು ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಾಯಿ ಕೃಷ್ಣ ಅವರು ‘ಕ' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಅಲ್ಲದೆ ಸ್ವಂತ ಲಾಂಛನದಲ್ಲಿ ನಿರ್ಮಿಸಿದ ಚಿತ್ರ. ಸೆನ್ಸಾರ್ ನಲ್ಲಿ ಯು/ಎ ಅರ್ಹತಾ ಪತ್ರ ಸ್ವೀಕರಿಸಿರುವ 'ಕ' ...‘ಪ್ಯಾರ್ ರಿಸ್ಕ್ ಔರ್ ಮೋಹಬತ್...ಎಂಬ ಉಪಶೀರ್ಷಿಕೆ ಇಟ್ಟುಕೊಂಡಿದೆ. [ಕನ್ನಡ ಚಿತ್ರ ವಿಮರ್ಶೆಗಳು]
ಪಾಸ್ ರಿಸಲ್ಟು - ಉದಯವಾಣಿ
'ಕ'ನಲ್ಲಿ ಅದೆಷ್ಟೋ ಪ್ರೇಮಕಥೆಗಳಿವೆ. ಕೆಲವು ಪ್ರೇಮಕಥೆಗಳು ಸುಖಾಂತ್ಯ ಕಂಡರೆ, ಕೆಲವು ದುಖಾಂತ್ಯ ಕಾಣುತ್ತವೆ, ಇನ್ನೂ ಕೆಲವು ಕಥೆಗಳು ದಾರುಣ ಅಂತ್ಯ ಕಾಣುತ್ತವೆ. ಅಂತ್ಯ ಹೇಗಾದರೂ ಇರಲಿ, 'ಕ'ಡೆಗೂ ನಿಜವಾದ ಪ್ರೀತಿ ಮಾತ್ರ ಉಳಿಯುತ್ತದೆ ಎಂಬುದನ್ನು ಚಿತ್ರ ಸಾರುತ್ತದೆ. ಬಹುಶಃ ಕಥೆ ಮತ್ತು ಪಾತ್ರಗಳನ್ನು ಒಂದಿಷ್ಟು ಕಡಿಮೆ ಮಾಡಿದ್ದರೆ, ಸಾಯಿ ನಿಜಕ್ಕೂ ಗೆಲ್ಲುತ್ತಿದ್ದರೇನೋ.
ಸಾಯಿಪ್ರಕಾಶ್ ರಂಹ ಹಿರಿಯ ನಿರ್ದೇಶಕನ ಪುತ್ರನಾಗಿ, ಸಿನಿಮಾ ಪೋಸ್ಟರ್ ಡಿಸೈನರ್ ಆಗಿ ಬಣ್ಣದ ಲೋಕದ ಆಳ ಅಗಲ ಬಲ್ಲವರಂತೆ 'ಕ' ಕಟ್ಟಿಕೊಟ್ಟಿದ್ದಾರವರು. ಪ್ರೀತಿ ಅರಸುವಾಗ ಅದು ಕಾಲಹರಣದಂತೆ ಕಾಣುತ್ತದೆ, ಒಡಮೂಡಿದ ಮೇಲೆ ಸಿಹಿಯಾದ ಹೂರಣ. ಕ ಪ್ರಥಮಾರ್ಧ ಹಾಗೂ ದ್ವಿತೀಯಾರ್ಧಗಳೂ ಹಾಗೇ. ನಾಟಕದ ತಾಲೀಮಿನಂತೆ, ಧಾರಾವಾಹಿಯಂತೆ, ಸಾಕ್ಷ್ಯಚಿತ್ರದಂತೆ...ಸಾಗಿ ಕ್ಲೈಮ್ಯಾಕ್ಸ್ ನಲ್ಲಿ ಶೀರ್ಷಿಕೆ ಗೀತೆಗೆ ಬರುವ ಹೊತ್ತಿಗೆ ಸಿನಿಮಾ ಅನ್ನಿಸುತ್ತದೆ!
ಆನೆ ನಡೆದದ್ದೇ ದಾರಿ ಹಾದಿ ಎನ್ನುವಂತೆ ತೆರೆಯ ಮೇಲೆ ಚಿತ್ರಕಥೆ ಸಾಗುತ್ತಿದ್ದರೆ ಯವುದೇ ರಸಾನುಭವವಿಲ್ಲದಂತೆ ಪ್ರೇಕ್ಷಕ ನಿಶ್ಚಿಂತೆಯಿಂದ ಕುರ್ಚಿಗೆ ಒರಗಬಹುದು! ಎತ್ತಕಡೆಯಿಂದ ನೋಡಿದರೂ ಈ ಪ್ರೇಮಕಥೆ ಹಿತವಾಗಿ ಕಾಣಿಸುವುದಿಲ್ಲ. ಅದೇ ಹಳೆ ಬಾಟಲಿ, ಹಳೆ ಮದ್ಯ. ಹೇಳುವ ಧಾಟಿಯಲ್ಲೂ ವಿಶೇಷವೇನಿಲ್ಲ. ಇತ್ತೀಚಿನ ಪ್ರೇಮಕಥೆಗಳಲ್ಲಿ ವಿಜೃಂಭಿಸುವ ಮಚ್ಚು ಲಾಂಗುಗಳನ್ನು ಇಲ್ಲಿ ದೂರವಿಟ್ಟಿದ್ದಾರೆ ಎನ್ನುವುದೇ ಮೆಚ್ಚುವ ಅಂಶ.
ಕಥೆ ತುಂಬಾ ಸಿಂಪಲ್. ಪ್ರೇಮಿಗಳ ದಿನದಂದು ನಡೆಯುವ ಕಥೆಗೆ ಒಂದಷ್ಟು ಸಿನಿಮೀಯ ಟಚ್ ನೀಡಲಾಗಿದೆ. ಕಥೆ ಒಂದೇ ದಿನದಲ್ಲಿ ನಡೆದರೂ ಪಾತ್ರವರ್ಗ ಮಾತ್ರ ತುಂಬಾ ದೊಡ್ಡದು. ಮೊದಲ ನಿರ್ದೇಶನ ಎಂಬುದಕ್ಕೆ ಗ್ರೇಸ್ ಮಾರ್ಕ್ಸ್ ಕೊಟ್ಟರೂ, ಸಾಯಿ ಉತ್ತೀರ್ಣರಾಗಲು ಮತ್ತಷ್ಟು ಶ್ರಮಪಡುವ ಅಗತ್ಯವಿದೆ.