Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಮರ್ಶೆ: ನೋಡುಗರ ಪರಿಕಲ್ಪನೆ ಬದಲಾಯಿಸುವ 'ನಾನು ಅವನಲ್ಲ...ಅವಳು'
'ಹೆಣ್ಣಾಗಿ ಹುಟ್ಟುವುದು ಕಷ್ಟವಲ್ಲ, ಹುಟ್ಟಿದ್ಮೇಲೆ ಹೆಣ್ಣಾಗುವುದು ಕಷ್ಟ'...ಅನ್ನುವ ಮಾತಿನಿಂದ ಶುರುವಾಗುವ ಎರಡು ರಾಷ್ಟ್ರ ಪ್ರಶಸ್ತಿ ಪಡೆದಿರುವ 'ನಾನು ಅವನಲ್ಲ...ಅವಳು' ಸಿನಿಮಾ ಅಕ್ಷರಶಃ ಮಂಗಳಮುಖಿಯರ ನೋವಿನ ಕಥೆಯನ್ನ ಬಿಚ್ಚಿಟ್ಟಿದೆ.
ಮಂಗಳಮುಖಿಯರ ವಾಸ್ತವ ಬದುಕು, ಅವರ ಮಾನಸಿಕ ತುಮುಲವನ್ನು ಸೂಕ್ಷ್ಮವಾಗಿ ತೆರೆಮೇಲೆ ತಂದಿರುವ 'ನಾನು ಅವನಲ್ಲ...ಅವಳು' ನಿಜಕ್ಕೂ ಎಲ್ಲರೂ ನೋಡಲೇಬೇಕಾದ ಸಿನಿಮಾ.[ಶಿವರಾಜ್ ಕುಮಾರ್ ಮೆಚ್ಚಿದ 'ನಾನು ಅವನಲ್ಲ, ಅವಳು']
'ನಾನು ಅವನಲ್ಲ...ಅವಳು' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......
ಕಥಾಹಂದರ
ಮಂಗಳಮುಖಿ ಲಿವಿಂಗ್ ಸ್ಮೈಲ್ ವಿದ್ಯಾ ಅವರ ನಿಜ ಬದುಕಿನ ಕಥೆ 'ನಾನು ಅವನಲ್ಲ...ಅವಳು' ಸಿನಿಮಾ. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಮಾದೇಶ, ಮನಸೋಇಚ್ಛೆಯಿಂದ ವಿದ್ಯಾ ಆಗಿ ಬದಲಾಗುವ ಪ್ರಕ್ರಿಯೆಯೇ ಈ ಸಿನಿಮಾದ ಹೂರಣ.[ಆರ್.ಜಿ.ವಿ ನಿರ್ದೇಶನದಲ್ಲಿ ಕನ್ನಡದ ರಾಷ್ಟ್ರ ಪ್ರಶಸ್ತಿ ವಿಜೇತ]
ಮಂಗಳಮುಖಿಯರ ನೈಜ ಚಿತ್ರಣ
ಮಂಗಳಮುಖಿಯರ ಮನದಾಳದ ಬೇಗುದಿ, ಕುಟುಂಬ ಮತ್ತು ಸಮಾಜದ ನಿರ್ಲಕ್ಷ್ಯ, ತಮ್ಮದೇ ಆದ ಕತ್ತಲ ಬದುಕಿನ ಜೀವನವನ್ನು ತೆರೆಮೇಲೆ ನೈಜವಾಗಿ ಕಟ್ಟಿಕೊಡುವುದರಲ್ಲಿ ನಿರ್ದೇಶಕ ಬಿ.ಎಸ್.ಲಿಂಗದೇವರು ಯಶಸ್ವಿಯಾಗಿದ್ದಾರೆ. ಅಷ್ಟೇ ಸೂಕ್ಷ್ಮವಾಗಿ ಪೂನಾ, ಹೈದರಾಬಾದ್ ಮತ್ತು ಕಡಪಾದಲ್ಲಿರುವ ಮಂಗಳಮುಖಿಯರ ಅಡ್ಡಗಳಲ್ಲೇ ಚಿತ್ರೀಕರಿಸಿ, ಚಿತ್ರಕ್ಕೆ ನೈಜ ಸ್ಪರ್ಶ ನೀಡಿದ್ದಾರೆ.
ಸಂಚಾರಿ ವಿಜಯ್ ನಟನೆ ಸೂಪರ್.!
ಮಂಗಳಮುಖಿ ವಿದ್ಯಾ ಆಗಿ ನಟಿಸಿರುವ ಸಂಚಾರಿ ವಿಜಯ್ ಅಭಿನಯದ ಬಗ್ಗೆ ತುಟಿ ಬಿಚ್ಚುವಹಾಗಿಲ್ಲ. ರಾಷ್ಟ್ರ ಪ್ರಶಸ್ತಿಗೆ ಸಂಚಾರಿ ವಿಜಯ್ ನಟನೆ 100% ಅರ್ಹ.! ಉಳಿದ ಪ್ರಮುಖ ಪಾತ್ರಗಳಲ್ಲಿ ಮಂಗಳಮುಖಿಯರೇ ಕಾಣಿಸಿಕೊಂಡಿರುವುದರಿಂದ ಸಿನಿಮಾ ವಾಸ್ತವ ಜಗತ್ತಿಗೆ ಹತ್ತಿರವಾಗಿದೆ.
ಸಮಾಜಕ್ಕೆ ಉತ್ತಮ ಸಂದೇಶ
ಮಂಗಳಮುಖಿಯರೆಂದರೆ ಚಪ್ಪಾಳೆ, ಗಡುಸು ಧ್ವನಿ, ಭಿಕ್ಷಾಟನೆ, ವೇಶ್ಯಾವಾಟಿಕೆ ಅಷ್ಟೇ ಅಂತ ಕೀಳಾಗಿ ಕಾಣುವ ನಮ್ಮ ಸಮಾಜದ ಅಂಕುಡೊಂಕಿಗೆ 'ನಾನು ಅವನಲ್ಲ ಅವಳು' ಸಿನಿಮಾ ಕನ್ನಡಿ ಹಿಡಿದ ಹಾಗಿದೆ. ಈ ಚಿತ್ರವನ್ನ ಎಲ್ಲರೂ ಒಮ್ಮೆ ನೋಡಬೇಕು. ಸಮಾಜದ ಮುಖ್ಯವಾಹಿನಿಯಲ್ಲಿ ತೃತೀಯ ಲಿಂಗಿಗಳಿಗೂ ಸೂಕ್ತ ಸ್ಥಾನಮಾನ ಸಿಗಲಿ ಅನ್ನೋದು ಚಿತ್ರತಂಡದ ಆಶಯ.
'ನಾನು ಅವನಲ್ಲ...ಅವಳು' ಮಿಸ್ ಮಾಡ್ಬೇಡಿ
ಸದಾ ಕಮರ್ಶಿಯಲ್ ಸಿನಿಮಾ, ಹೊಡಿ ಬಡಿ ಚಿತ್ರಗಳನ್ನೇ ನೋಡಿ ನೋಡಿ ಬೇಸರವಾಗಿದ್ರೆ ಈ ವೀಕೆಂಡ್ ನಲ್ಲಿ 'ನಾನು ಅವನಲ್ಲ...ಅವಳು' ಚಿತ್ರವನ್ನ ಮಿಸ್ ಮಾಡ್ಬೇಡಿ. ಅನೇಕರಿಗೆ ಗೊತ್ತಿಲ್ಲದ ಕತ್ತಲೆ ಜಗತ್ತು ಈ ಚಿತ್ರದಲ್ಲಿದೆ.