Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬ್ಲ್ಯಾಕ್ ಮನಿ ಹಗರಣದಲ್ಲಿ ನಟ ಸೂರ್ಯ ಹೆಸರು
ಕಪ್ಪುಹಣವನ್ನು ವೈಟ್ ಆಗಿ ಬದಲಾಯಿಸುತ್ತಿರುವ (Money laundering) ಒಂದು ಗ್ಯಾಂಗ್ ನ ಗುಟ್ಟುರಟ್ಟು ಮಾಡಲು ತೆಲುಗು ನ್ಯೂಸ್ ಚಾನಲ್ ಎಬಿಎನ್ ಕುಟುಕು ಕಾರ್ಯಾಚರಣೆ ನಡೆಸಿತು. ಈ ಸ್ಟಿಂಗ್ ಆಪರೇಷನ್ ನಲ್ಲಿ ನಟ ಸೂರ್ಯ ಹೆಸರು ಕೇಳಿಬಂದಿದ್ದು ಅಚ್ಚರಿ ಮೂಡಿಸಿದೆ.
ಬ್ಲ್ಯಾಕ್ ಮನಿಯನು ವೈಟ್ ಮಾಡುತ್ತಿರುವ ಗ್ಯಾಂಗ್ ನ ಸದಸ್ಯನೊಬ್ಬ ಟಿವಿ ಚಾನಲ್ ಜೊತೆ ಮಾತನಾಡುತ್ತಾ, "ನಟ ಸೂರ್ಯ ತಮಗೆ ರೆಗ್ಯುಲರ್ ಕಸ್ಟಮರ್. ಅವರು ಭಾರಿ ಮೊತ್ತದಲ್ಲಿ ಆಗಾಗ ರು.50 ರಿಂದ ರು.100 ಕೋಟಿ ಕಪ್ಪುಹಣವನ್ನು ಬಿಳಿಹಣವನ್ನಾಗಿ ಬದಲಾಯಿಸಿಕೊಂಡಿದ್ದಾರೆ" ಎಂದಿದ್ದಾನೆ.
"ತಮ್ಮ ಗ್ರಾಹಕರ ಪಟ್ಟಿಯಲ್ಲಿ ಟಿಆರ್ಎಸ್ ಮುಖಂಡ ಕೆಟಿಆರ್ ಸಹ ಇದ್ದಾರೆ" ಎಂದು ಹೇಳಿರುವುದು ಗಮನಾರ್ಹ ಸಂಗತಿ. ಆದರೆ ಈ ಗ್ಯಾಂಗ್ ಸದಸ್ಯರು ಸಿನಿಮಾ, ರಾಜಕೀಯ ಮುಖಂಡರ ಹೆಸರುಗಳನ್ನು ಬಳಸಿಕೊಂಡು ಬ್ಲ್ಯಾಕ್ ಮನಿ ದಂಧೆ ನಡೆಸುತ್ತಿದ್ದಾರಾ? ಅಥವಾ ನಿಜವಾಗಿಯೂ ಅವರ ಹಸ್ತ ಇದರಲ್ಲಿ ಇದೆಯೇ ಎಂಬ ಗೊಂದಲಗಳು ಇವೆ.
ನಟ ಸೂರ್ಯ ಅವರ ಹೆಸರು ಈ ಹಗರಣದಲ್ಲಿ ಕೇಳಿಬಂದಿರುವ ಕಾರಣ ಅವರ ಅಭಿಮಾನಿಗಳು ಶಾಕ್ ಗೆ ಗುರಿಯಾಗಿದ್ದಾರೆ. ಚಾನಲ್ ನಿರ್ವಹಿಸಿದ ಸ್ಟಿಂಗ್ ಆಪರೇಷನ್ ನ್ ಬಗ್ಗೆ ಸರ್ಕಾರಿ ತನಿಖಾ ಸಂಸ್ಥೆಗಳೂ ದೃಷ್ಟಿ ಹರಿಸಿವೆ. ಕಾನೂನು ಪ್ರಕಾರ ವಿಚಾರಣೆ ನಡೆದರೆ ಈ ಹಗರಣದ ಸತ್ಯಾಸತ್ಯತೆಗಳು ಬಯಲಾಗಬಹುದು. ಕಪ್ಪುಹಣ ಹಗರಣದಲ್ಲಿ ತನ್ನ ಹೆಸರು ಕೇಳಿಬಂದಿರುವ ಬಗ್ಗೆ ನಟ ಸೂರ್ಯ ಇನ್ನೂ ಪ್ರತಿಕ್ರಿಯಿಸಿಲ್ಲ.