Don't Miss!
- News 'ಅಖಾಡಕ್ಕೆ ರಾಹುಲ್ ಗಾಂಧಿ ಎಂಟ್ರಿ: ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲು'
- Technology ನೀವು ಜಿಯೋ ಗ್ರಾಹಕರೇ?..ಹಾಗಿದ್ರೆ, ಈ ಪ್ಲ್ಯಾನಿಗೆ ಖಂಡಿತಾ ಫಿದಾ ಆಗ್ತೀರಾ!
- Automobiles 900 ಕಿ.ಮೀ ಕೇವಲ 3 ಗಂಟೆ ಪ್ರಯಾಣ: ಮತ್ತೆರಡು ನಗರಗಳಿಗೆ ಬುಲ್ಲೆಟ್ ರೈಲು, ಮುನ್ನುಗ್ಗುತ್ತಿದೆ ಭಾರತ!
- Lifestyle ಸನ್ ಟ್ಯಾನ್ ಸುಲಭವಾಗಿ ಹೋಗಲಾಡಿಸಲು ಅಡುಗೆ ಮನೆಯಲ್ಲಿರುವ ಈ ವಸ್ತುಗಳೇ ಸಾಕು
- Finance ದೀಪಿಕಾ ಪಡುಕೋಣೆಯೊಂದಿಗೆ ಅಂಬಾನಿ ಮಗಳು ಒಪ್ಪಂದ, ಇಲ್ಲಿದೆ ವಿವರ
- Sports RCB: ಇದೇ ಆರ್ಸಿಬಿ ಸಮಸ್ಯೆ ಮೂಲ; ವಿದೇಶಿ ಕೋಚಿಂಗ್ ಸ್ಟಾಫ್ ವಿರುದ್ಧ ಸಿಡಿಮಿಡಿಗೊಂಡ ವೀರೇಂದ್ರ ಸೆಹ್ವಾಗ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಸಿ ಬಾಂಬ್ ಕರೆ ಮಾಡಿದ ನಟನ ಬಂಧಿಸಿದ ಪೊಲೀಸರು
ಹುಸಿ ಬಾಂಬ್ ಕರೆ ಮಾಡಿದ ಚೆನ್ನೈ ಮೂಲದ ಕೆನಡಿ ಜಾನ್ ಗಂಗಾಧರ್ ಹೆಸರಿನ ನಟನೋರ್ವನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
Recommended Video
ವೆಬ್ ಸರಣಿ ಹಾಗೂ ಕೆಲವು ಕಿರು ಚಿತ್ರಗಳಲ್ಲಿ ನಟಿಸಿದ್ದ ನಟ ತೇನಾಂಪೇಟೆಯಲ್ಲಿನ ಐಶಾರಾಮಿ ಹೋಟೆಲ್ ಒಂದಕ್ಕೆ ನಿನ್ನೆ (ಆಗಸ್ಟ್ 26) ಹುಸಿ ಬಾಂಬ್ ಕರೆ ಮಾಡಿದ್ದ.
ತಂದೆಯ ವಿರುದ್ಧವೇ ಹತ್ಯೆ ಯತ್ನದ ದೂರು ದಾಖಲಿಸಿದ ಧಾರಾವಾಹಿ ನಟಿ
ಜಾನ್ ಗಂಗಾಧರ್ ಐಶಾರಾಮಿ ಹೋಟೆಲ್ನಲ್ಲಿ ಮಹೇಶ್ ಎಂಬುವರಿಗಾಗಿ ಕಾಯುತ್ತಿದ್ದರಂತೆ. ಅದೇ ಹೋಟೆಲ್ನಲ್ಲಿ ವೆಬ್ ಸರಣಿಯ ಚಿತ್ರೀಕರಣ ನಡೆಯುತ್ತಿದ್ದು, ಹೋಟೆಲ್ನ ಮ್ಯಾನೇಜರ್ ಮಹೇಶ್ ಅವರೇ ವೆಬ್ ಸರಣಿಯ ನಿರ್ಮಾಪಕ ಸಹ ಆಗಿದ್ದಾರೆ.
ಬಹು ಸಮಯ ಜಾನ್ ಗಂಗಾಧರ್ ಮಹೇಶ್ ಗಾಗಿ ಕಾದಿದ್ದಾರೆ. ಆದರೆ ಕೊನೆಗೆ ಮ್ಯಾನೇಜರ್ ಬಂದು ಚಿತ್ರೀಕರಣವನ್ನು ಬಂದ್ ಮಾಡಿದ್ದೇವೆ, ತಾವು ಹೊರಡಬಹುದು ಎಂದು ಜಾನ್ ಗೆ ತಿಳಿಸಿದ್ದಾರೆ.
ಇದರಿಂದ ಬೇಸರಗೊಂಡಿದ್ದ ಜಾನ್ ಗಂಗಾಧರ್ ಹೊರಗೆ ಬಂದು, ಹೋಟೆಲ್ನಲ್ಲಿ ಬಾಂಬ್ ಇರುವುದಾಗಿ ಕರೆ ಮಾಡಿದ್ದಾನೆ. ಪೊಲೀಸ್ ಕಂಟ್ರೋಲ್ ರೂಂ ಗೆ ಸಹ ಆತನೇ ಕರೆ ಮಾಡಿ ಹೋಟೆಲ್ನಲ್ಲಿ ಬಾಂಬ್ ಇರುವುದಾಗಿ ಹೇಳಿದ್ದಾನೆ.
ತಪ್ಪು ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡ ಖ್ಯಾತ ಗಾಯಕ ಬಾದ್ಶಾ
ಕೂಡಲೇ ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸುಮಾರು ಒಂದು ಗಂಟೆಗಳ ಕಾಲ ಬಾಂಬ್ಗಾಗಿ ಹುಡುಕಾಟ ನಡೆಸಿದ್ದಾರೆ. ನಂತರ ಹುಸಿ ಬಾಂಬ್ ಕರೆ ಮಾಡಿದವನಿಗಾಗಿ ಹುಡುಕಾಟ ನಡೆಸಿದ್ದಾರೆ.
ಜಾನ್ ಗಂಗಾಧರ್ ಅನ್ನು ಬಂಧಿಸಿದ ಪೊಲೀಸರ ಬಳಿ, ತಾನೇ ಹುಸಿ ಬಾಂಬ್ ಕರೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.