Don't Miss!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- News Snake Video: ವಿಮಾನದಲ್ಲಿ ಹಾವು ಬಿಟ್ಟ ವ್ಯಕ್ತಿ: ಬೆಂಗಳೂರಿನಲ್ಲಿ ಬಂಧನ- ಶಿವಪುರಿಯಲ್ಲಿ ಅಪರೂಪದ ಹಾವು ಪತ್ತೆ!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೈನಾಗೆ ದ್ವಂದ್ವಾರ್ಥದ ಟ್ವೀಟ್: ಪೊಲೀಸರ ಬಳಿ ಕ್ಷಮೆ ಕೇಳಿದ ಸಿದ್ಧಾರ್ಥ್
ಬ್ಯಾಡ್ಮಿಂಟನ್ ಆಟಗಾರ್ತಿ ಮಾಜಿ ವಿಶ್ವಚಾಂಪಿಯನ್ ಸೈನಾ ನೆಹ್ವಾಲ್ಗೆ ದ್ವಂದ್ವಾರ್ಥ ಹೊಮ್ಮುವಂತೆ ಟ್ವೀಟ್ ಮಾಡಿದ್ದ ನಟ ಸಿದ್ಧಾರ್ಥ್ ಇದೀಗ ಪೊಲೀಸರ ಬಳಿ ಕ್ಷಮೆ ಕೋರಿದ್ದಾರೆ.
ಬಿಜೆಪಿ ಸದಸ್ಯೆಯೂ ಆಗಿರುವ ಸೈನಾ ನೆಹ್ವಾಲ್ ಮಾಡಿದ್ದ ರಾಜಕೀಯ ಸಂಬಂಧಿ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದ ಸಿದ್ಧಾರ್ಥ್ ದ್ವಂದ್ವಾರ್ಥ ಹೊಮ್ಮುವಂತೆ ಟ್ವೀಟ್ ಮಾಡಿದ್ದರು. ಸಿದ್ಧಾರ್ಥ್ರ ಟ್ವೀಟ್ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಮಹಿಳಾ ಸಂಘಗಳು ಹಾಗೂ ಕೆಲವು ಖಾಸಗಿ ವ್ಯಕ್ತಿಗಳು ಸಿದ್ಧಾರ್ಥ್ ವಿರುದ್ಧ ದೂರು ದಾಖಲಿಸಿದ್ದರು.
ದೂರು ಆಧರಿಸಿ ಚೆನ್ನೈ ಪೊಲೀಸರು ಸಿದ್ಧಾರ್ಥ್ ಅವರಿಗೆ ನೊಟೀಸ್ ಜಾರಿ ಮಾಡಿ ಉತ್ತರ ನೀಡುವಂತೆ ಸೂಚಿಸಿದ್ದರು. ಇದೀಗ ಘಟನೆಗೆ ಸಂಬಂಧಿಸಿದಂತೆ ನಟ ಸಿದ್ಧಾರ್ಥ್, ಚೆನ್ನೈ ಪೊಲೀಸರ ಬಳಿ ಕ್ಷಮೆ ಕೋರಿದ್ದಾರೆ.
ಘಟನೆ ವಿವರ
ಪ್ರಧಾನಿ ಮೋದಿ ಅವರು ಪಂಜಾಬ್ಗೆ ಭೇಟಿ ನೀಡಿದ್ದಾಗ ಅವರ ವಾಹವನ್ನು ತಡೆದು ರೈತರು ಪ್ರತಿಭಟನೆ ಮಾಡಿದ್ದ ಘಟನೆ ಬಗ್ಗೆ ಟ್ವೀಟ್ ಮಾಡಿದ್ದ ಸೈನಾ ನೆಹ್ವಾಲ್, ಭದ್ರತಾ ಲೋಪವನ್ನು ಖಂಡಿಸಿದ್ದರು.
ಸೈನಾರ ಟ್ವೀಟ್ಗೆ ಪ್ರತಿಯಾಗಿ ಟ್ವೀಟ್ ಮಾಡಿದ್ದ ನಟ ಸಿದ್ಧಾರ್ಥ್, 'ಶಟಲ್ಕಾಕ್' ಎಂಬ ಪದವನ್ನು ದ್ವಂದ್ವಾರ್ಥ್ ಹೊಮ್ಮುವಂತೆ 'ಸಟಲ್' 'ಕಾಕ್' ಎಂದು ಬಳಸಿದ್ದರು. ಇದು ತೀವ್ರ ವಿವಾದ ಹುಟ್ಟುಹಾಕಿತ್ತು. ಮಹಿಳಾ ಆಯೋಗ, ಸೈನಾ ನೆಹ್ವಾಲ್ರ ತಂದೆ, ಪತಿ ಹಾಗೂ ಸ್ವತಃ ಸೈನಾ ನೆಹ್ವಾಲ್ ಸಿದ್ಧಾರ್ಥ್ರ ಟ್ವೀಟ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಬಳಿಕ ಟ್ವಿಟ್ಟರ್ನಲ್ಲಿ ಸೈನಾಗೆ ಕ್ಷಮೆ ಕೇಳಿದ ಸಿದ್ಧಾರ್ಥ್, ತಮ್ಮ ಜೋಕ್ ಕೆಟ್ಟದಾಗಿತ್ತೆಂದು, ಯಾವುದೇ ಜೋಕ್ ಅನ್ನು ವಿವರಿಸುವ ಅಗತ್ಯ ಬಿತ್ತೆಂದರೆ ಅದು ಕೆಟ್ಟ ಜೋಕ್ ಎಂದೇ ಅರ್ಥ. ನನ್ನ ಉದ್ದೇಶ ನಿಮ್ಮನ್ನು ಅವಮಾನಿಸುವುದಾಗಿರಲಿಲ್ಲ. ನನ್ನ ಟ್ವೀಟ್ನಿಂದ ಬೇಸರವಾಗಿದ್ದರೆ ಕ್ಷಮಿಸಿ ಎಂದಿದ್ದರು ಸಿದ್ಧಾರ್ಥ್. ಇದೀಗ ಪೊಲೀಸರ ಬಳಿಯೂ ಸಿದ್ಧಾರ್ಥ್ ಮತ್ತೊಮ್ಮೆ ಕ್ಷಮೆ ಕೇಳಿದ್ದಾರೆ.