ಎಂಜಿಆರ್ ಪುಣ್ಯ ಸ್ಮರಣೆ: ಅರವಿಂದ್ ಸ್ವಾಮಿಯ ಹೊಸ ಲುಕ್ ಬಿಡುಗಡೆ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಸೂಪರ್ ಸ್ಟಾರ್ ನಟ ಎಂಜಿಆರ್ ಅವರ ಪುಣ್ಯ ಸ್ಮರಣೆ ದಿನದ ವಿಶೇಷವಾಗಿ ಅರವಿಂದ್ ಸ್ವಾಮಿಯ ಹೊಸ ಲುಕ್ ರಿಲೀಸ್ ಆಗಿದೆ.
ಕಂಗನಾ ರಣಾವತ್ ನಟಿಸುತ್ತಿರುವ ತಲೈವಿ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಜೀವನ ಆಧರಿಸಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ತಮಿಳು ನಟ ಅರವಿಂದ್ ಸ್ವಾಮಿ ಎಂಜಿಆರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇಂದು ಎಂಜಿಆರ್ ಅವರ 33ನೇ ಪುಣ್ಯ ಸ್ಮರಣೆಯ ದಿನ. 1987 ಡಿಸೆಂಬರ್ 24 ರಂದು ಎಂಜಿಆರ್ ವಿಧಿವಶರಾಗಿದ್ದರು. ಈ ವಿಶೇಷ ದಿನದಂದು ತಲೈವಿ ಸಿನಿಮಾದಲ್ಲಿ ಎಂಜಿಆರ್ ಪಾತ್ರ ಮಾಡ್ತಿರುವ ಅರವಿಂದ್ ಸ್ವಾಮಿಯ ಹೊಸ ಚಿತ್ರಗಳು ಅನಾವರಣಗೊಂಡಿದೆ.

ಎಂಜಿಆರ್ ಅವರಂತೆ ತಲೆಗೆ ಟೋಪಿ ಹಾಗೂ ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಕೈ ಮುಗಿದ ಬರುತ್ತಿರುವ ಒಂದು ಫೋಟೋ ಹಾಗೂ ಮಕ್ಕಳ ಜೊತೆ ಸಾಲಿನಲ್ಲಿ ಕುಳಿತು ಊಟ ಮಾಡುತ್ತಿರುವ ಇನ್ನೊಂದು ಫೋಟೋ ಬಿಡುಗಡೆಯಾಗಿದೆ.
ಇನ್ನುಳಿದಂತೆ ಎಎಲ್ ವಿಜಯ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ವಿಷ್ಣುವರ್ಧನ ಇಂದುರಿ ಮತ್ತು ಶೈಲೆಶ್ ಆರ್ ಸಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಜಯಲಲಿತಾ ಅವರ ಆಪ್ತೆ ಶಶಿಕಲಾ ಪಾತ್ರದಲ್ಲಿ ಪೂರ್ಣ ನಟಿಸುತ್ತಿದ್ದಾರೆ.


Click it and Unblock the Notifications











