Don't Miss!
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- News
ಇಂತಹ ಅಯೋಗ್ಯರಿಗೆ ಅಧಿಕಾರ ಕೊಟ್ಟ ಜನತೆ ಈಗ ಬರುವ ಚುನಾವಣೆಗೆ ಕಾಯುತ್ತಿದ್ದಾರೆ: ಸರ್ಕಾರದ ವಿರುದ್ದ ಜೆಡಿಎಸ್ ಕಿಡಿ
- Technology
ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್ಗಳು ಬೆಸ್ಟ್!
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡ ನಟನ ತಮಿಳು ಚಿತ್ರದ ಆಡಿಯೋ ಬಿಡುಗಡೆ
'ಕರುಪಾಲಗಿ' (ಕಪ್ಪು ಸುಂದರಿ) ಹೆಸರಿನ ತಮಿಳು ಚಿತ್ರದಲ್ಲಿ ಏಕೈಕ ನಾಯಕರಾಗಿ ನಟಿಸಿರುವ ಸ್ಪುರದ್ರೂಪಿ ಆ ನಟನ ಹೆಸರು ಅಮಿತ್. ನಾಳೆ (15 ಸೆಪ್ಟೆಂಬರ್ 2012) ಆ ಚಿತ್ರದ ಆಡಿಯೋ ಬಿಡುಗಡೆ ವಡಪಾಲನಿಯಲ್ಲಿರುವ 'ಕಮಲಾ ಥಿಯೇಟರಿ'ನಲ್ಲಿ ಭಾರಿ ಅದ್ದೂರಿಯಾಗಿ ನೆರವೇರಲಿದ್ದು, ತಮಿಳು ಚಿತ್ರರಂಗದ ಘಟಾನುಘಟಿಗಳು ಅಲ್ಲಿ ಸೇರಲಿದ್ದಾರೆ.
ಅಮಿತ್ ಎಂಬ ಈ ಕನ್ನಡದ ನಟ ನಟಿಸಿರುವ ಮೊದಲ ಸಿನಿಮಾ 'ಕಾಳಿದಾಸ ಲವ್ವಲ್ ಬಿದ್ದ' ಇನ್ನೂ ಬಿಡುಗಡೆಯಾಗಿಲ್ಲ. ನಂತರ ನಟಿಸಿದ ಸಿನಿಮಾಗಳಾದ 'ಖದೀಮರು' ಹಾಗೂ 'ಮಾಗಡಿ' ಅಮಿತ್ ಲೆಕ್ಕಕ್ಕೇ ಸಿಗದೇ ಹಾಗೆ ಬಂದು ಹೀಗೆ ಹೊರಟುಹೋದವು. ಆದರೆ ಬಿಡುಗಡೆಯಾದ ಎರಡು ಸಿನಿಮಾಗಳಲ್ಲೇ ವಿಮರ್ಶಕರು ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು ಅಮಿತ್ ಅವರಿಗಿರುವ ಪ್ರತಿಭೆ ಹಾಗೂ ಸಿನಿಮಾ ಪ್ರೀತಿಗೆ ಸಾಕ್ಷಿಯಾಯ್ತು.
ನಂತರ ಕನ್ನಡದಲ್ಲಿ ತಕ್ಷಣಕ್ಕೆ ಸೂಕ್ತ ಯಾವ ಅವಕಾಶವೂ ಸಿಗಲಿಲ್ಲವಾಗಿ ಹುಡುಕಿಕೊಂಡ ಬಂದ ತಮಿಳು 'ಕರುಪಾಲಗಿ' ಚಿತ್ರದ ಅವಕಾಶವನ್ನು ಬಳಸಿಕೊಂಡಿದ್ದಾರೆ ಅಮಿತ್. ಈ ತಮಿಳು ಚಿತ್ರದ ನಾಯಕ ನಟರಾಗಿ ಮಿಂಚಿದ್ದಾರೆ ಕನ್ನಡದ ನಟ ಅಮಿತ್. 'ಪ್ರಣವ್ ಮೂವಿ ಮೇಕರ್ಸ್' ಲಾಂಛನದಲ್ಲಿ ಪಾಗೈ ಸೆಂಥಿಲ್ ನಿರ್ಮಾಣದ ಈ ಚಿತ್ರವನ್ನು ವಿಜಯ್ ಅರುಣ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಶಿಲ್ಪಾ ಮತ್ತು ವಿಕ್ಟೋರಿಯಾ ಎಂಬ ಇಬ್ಬರು ನಾಯಕಿಯರು.
ಚಿತ್ರದಲ್ಲಿ ಗೆಗೆಟಿವ್ ಶೇಡ್ ನಲ್ಲಿ ವಿವೇಕ್ ಜಂಬಗಿ ಎಂಬ ಇನ್ನೊಬ್ಬ ನಾಯಕನಟ ಕಾಣಿಸಿಕೊಂಡಿದ್ದು ಚಿತ್ರದ ವಿಲನ್ ಆಗಿ ಅಥಿಶಿವನ್ ನಟಿಸಿದ್ದಾರೆ. ವೇಲನ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಕಣ್ಣಾದಾಸನ್ ಛಾಯಾಗ್ರಹಣ ಮತ್ತು ಸಂಕಲನವಿದೆ. ರನ್ ರವಿ ಮತ್ತು ಕುಂದತ್ತೂರ್ ಬಾಬು ಸಾಹಸ ನಿರ್ದೇಶನದ ಈ ಚಿತ್ರಕ್ಕೆ ಕೆನಡಿ ಮತ್ತು ಪವರ್ ಶಿವ ನೃತ್ಯ ನಿರ್ದೇಶನವಿದೆ. ಒಟ್ಟೂ 51 ದಿನಗಳ ಕಾಲ ಚಿತ್ರಕ್ಕೆ ಶೂಟಿಂಗ್ ನಡೆಸಲಾಗಿದೆ.
ಇಂಥ 'ಕರುಪಾಲಗಿ' ತಮಿಳು ಚಿತ್ರದ ಆಡಿಯೋ ಬಿಡುಗಡೆ ವಡಪಾಲನಿಯಲ್ಲಿರುವ ಬೃಹತ್ 'ಕಮಲಾ ಥಿಯೇಟರಿ'ನಲ್ಲಿ ನಾಳೆ ಅದ್ದೂರಿಯಾಗಿ ನೆರವೇರಲಿದೆ. ಕನ್ನಡದ ನಟನ ತಮಿಳು ಸಿನಿಮಾಗೆ ತಮಿಳು ಚಿತ್ರರಂಗದ ಅತಿರಥಮಹಾರತರು ಆಗಮಿಸಿ ಶುಭ ಹಾರೈಸಲಿದ್ದಾರೆ. ನೆರೆಭಾಷೆ ತೆಲುಗಿನಲ್ಲಿ ಕನ್ನಡದ ಕಿಚ್ಚ ಗೆಲುವಿನ ಬಾವುಟ ಹಾರಿಸಿ ಬಂದ ನಂತರದ ಈ ಬೆಳವಣಿಗೆ ಸ್ಯಾಂಡಲ್ ವುಡ್ ಕಣ್ಣಲ್ಲಿ ಕುತೂಹಲ ಮೂಡಿಸಿದೆ.
ಅದಕ್ಕೂ ಮೊದಲೂ ಕೂಡ ಕನ್ನಡ ಮೂಲದ ನಟರಾದ ರಜನಿಕಾಂತ್, ಪ್ರಕಾಶ್ ರೈ ಹಾಗೂ ಅರ್ಜುನ್ ಸರ್ಜಾ ಮುಂತಾದ ನಟರು ನೆರೆಯ ಭಾಷೆಗಳಲ್ಲಿ ಮಾಡಿರುವ ಸಾಧನೆಗಳ ಸಾಕ್ಷಿಯಿದೆ. ಇಂಥ ವೇಳೆಯಲ್ಲಿ ಕನ್ನಡದ ಸ್ಪುರದ್ರೂಪಿ ನಟ ಅಮಿತ್ ಅವರ ಸ್ಟಾರ್ ನಟನಾಗುವ ಕನಸು ತಮಿಳು ಚಿತ್ರದ ಮೂಲಕ ಕೈಗೂಡಿದರೆ ಆಶ್ಚರ್ಯವಿಲ್ಲ. (ಒನ್ ಇಂಡಿಯಾ ಕನ್ನಡ)