Don't Miss!
- Finance ಭಾರತದ ಮೊದಲ ಬುಲೆಟ್ ರೈಲಿನ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಸಿಸ್ಟಮ್ ಹಳಿ ಚಿತ್ರ ಬಹಿರಂಗ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೊಂದು ಚಿತ್ರದಲ್ಲಿ ಪುನೀತ್ ಹಾಗೂ ಸಮುದ್ರ ಖಣಿ
ತಮಿಳು 'ಪೊರಾಲಿ' ನಿರ್ದೇಶಿಸಿ ಅದನ್ನೇ ಕನ್ನಡದಲ್ಲಿ ಯಾರೇ ಕೂಗಾಡಲಿ ಹೆಸರಿನಲ್ಲಿ ನಿರ್ದೇಶಿಸುತ್ತಿರುವ ನಿರ್ದೇಶಕ ಸಮುದ್ರ ಖಣಿ, ಪುನೀತ್ ಅವರಿಗೆ ಮತ್ತೊಂದು ಕಥೆಯನ್ನು ಹೇಳಿದ್ದಾರಂತೆ. ಆ ಕಥೆ ಪುನೀತ್ ಅವರಿಗೆ ಇಷ್ಟವಾಗಿದ್ದು ತಾವು ಅದರಲ್ಲಿ ನಟಿಸುವುದಾಗಿ ಪುನೀತ್ ಹೇಳಿದ್ದಾರಂತೆ. ಆದರೆ ಈ ಚಿತ್ರವು 'ಯಾರೇ ಕೂಗಾಡಲಿ' (ಪೊರಾಲಿ) ಯಂತೆ ರೀಮೇಕ್ ಅಲ್ಲ, ಹೊಸ ಕಥೆ ಎಂದಿದ್ದಾರೆ ಸಮುದ್ರ ಖಣಿ.
ಸದ್ಯಕ್ಕೆ ಪುನೀತ್ ಹಾಗೂ ಯೋಗೇಶ್ ನಟನೆಯ 'ಯಾರೇ ಕೂಗಾಡಲಿ' ಹಾಗೂ ತಮಿಳು-ತೆಲುಗು ಚಿತ್ರ 'ನಿಮಿರ್ತು ನಿಲ್' ಚಿತ್ರದ ಶೂಟಿಂಗ್ ನಲ್ಲಿ ಬಿಜಯಾಗಿರುವ ಅವರು, ನಂತರ ಪುನೀತ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ. ಆ ಚಿತ್ರವು ಲವ್ ಅಥವಾ ಆಕ್ಷನ್ ಬೇಸ್ಡ್ ಚಿತ್ರವಲ್ಲ, ಬದಲಿಗೆ ಸಂಪೂರ್ಣವಾಗಿ ಸೆಂಟಿಮೆಂಟ್ ಆಧಾರಿತ ಚಿತ್ರ ಎಂಬ ಗುಟ್ಟನ್ನೂ ಸಮುದ್ರ ಖಣಿ ಬಿಚ್ಚಿಟ್ಟಿದ್ದಾರೆ.
ಅಂದಹಾಗೆ, ಸಮುದ್ರ ಖಣಿ ನಿರ್ದೇಶನದಲ್ಲಿ ತಮಿಳು-ತೆಲುಗಿನಲ್ಲಿ ಮೂಡಿಬರುತ್ತಿರುವ 'ನಿಮಿರ್ತು ನಿಲ್' ಚಿತ್ರದ ತಮಿಳು ಆವೃತ್ತಿಯಲ್ಲಿ ಜಯಂ ರವಿ ಹಾಗೂ ತೆಲುಗು ಆವೃತ್ತಿಯಲ್ಲಿ ನಾನಿ ನಟಿಸುತ್ತಿದ್ದಾರೆ. 'ಯಾರೇ ಕೂಗಾಡಲಿ' ಹಾಗೂ 'ನಿಮಿರ್ತು ನಿಲ್' ಚಿತ್ರಗಳ ನಂತರ ಸಮುದ್ರ ಖಣಿ ಹೊಸ ಚಿತ್ರವು ಸೆಟ್ಟೇರಲಿದೆ. ಆದರೆ ಅದು ಯಾವಾಗ, ನಾಯಕಿ ಯಾರು, ಹಾಗೂ ಉಳಿದ ಮಾಹಿತಿಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. (ಒನ್ ಇಂಡಿಯಾ ಕನ್ನಡ)