Just In
Don't Miss!
- Automobiles
ಪೋರ್ಷೆ ಬಾಕ್ಸ್ಸ್ಟರ್ ಸ್ಪೋರ್ಟ್ಸ್ ಕಾರಿನ 25ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ
- News
ಬಜಾಜ್ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 14ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಸ್ಥಿರ ಪ್ರದರ್ಶನ ತೋರುತ್ತಿರುವ ಈಸ್ಟ್ ಬೆಂಗಾಲ್ಗೆ ಕೇರಳ ಎದುರಾಳಿ
- Lifestyle
ವ್ಯಾಯಾಮ ಬಿಟ್ಟ ಬಳಿಕ ದೇಹಕ್ಕೆ ಏನಾಗುತ್ತೆ ನೋಡಿ
- Education
DHFWS Vijayapura Recruitment 2021: ವೈದ್ಯಕೀಯ ಅಧಿಕಾರಿ ಮತ್ತು ಕೋ-ಆರ್ಡಿನೇಟರ್ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಜಕೀಯ ಪ್ರವೇಶ ನಿರ್ಧಾರ ಹಿಂಪಡೆದ ರಜನೀಕಾಂತ್: ಕಾರಣವೇನು?
ಕೆಲವು ದಿನಗಳ ಹಿಂದಷ್ಟೆ, ತಾವು ಸಕ್ರಿಯ ರಾಜಕೀಯಕ್ಕೆ ಪ್ರವೇಶ ಮಾಡುವುದಾಗಿ ಹೇಳಿದ್ದ ರಜನೀಕಾಂತ್ ಈಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಆರೋಗ್ಯ ಕಾರಣ ನೀಡಿ ರಾಜಕೀಯ ಪಕ್ಷ ಸ್ಥಾಪನೆಯಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದಾರೆ ನಟ ರಜನೀಕಾಂತ್. ಮಂಗಳವಾರ ಟ್ವಿಟ್ಟರ್ನ ಈ ವಿಷಯವನ್ನು ಪ್ರಕಟಿಸಿದ್ದಾರೆ ರಜನಿ.
ರಜನೀಕಾಂತ್ ಅವರು ತಮ್ಮ ಪಕ್ಷದ ಘೋಷಣೆಯನ್ನು ಡಿಸೆಂಬರ್ 31 ರಂದು ಮಾಡುವವರಿದ್ದರು. ಪಕ್ಷದ ಉದ್ಘಾಟನೆ ಜನವರಿ ತಿಂಗಳಲ್ಲಿ ಮಾಡುವುದಾಗಿ ಇದೇ ತಿಂಗಳ ಆರಂಭದಲ್ಲಿ ಹೇಳಿದ್ದರು. ರಜನೀಕಾಂತ್ ರಾಜಕೀಯ ಪ್ರವೇಶ ತಮಿಳುನಾಡು ರಾಜಕೀಯ ರಂಗದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಈಗ ಎಲ್ಲಾ ಉಲ್ಟಾ ಆಗಿದೆ.
ನಟ ರಜನೀಕಾಂತ್ ಅವರು ಎರಡು ದಿನಗಳ ಹಿಂದಷ್ಟೆ ಅನಾರೋಗ್ಯದಿಂದಾಗಿ ಹೈದರಾಬಾದ್ನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ರಕ್ತದೊತ್ತಡದಲ್ಲಿ ಏರು-ಪೇರಾಗಿತ್ತು ಎಂದು ವೈದ್ಯರು ಹೇಳಿದ್ದರು. ಪ್ರಸ್ತುತ ಡಿಸ್ಚಾರ್ಜ್ ಆಗಿ ಮನೆಯಲ್ಲಿರುವ ರಜನೀಕಾಂತ್ಗೆ ಪೂರ್ಣ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ