ರಜನಿಕಾಂತ್ ಚಿತ್ರವನ್ನು ರಾಜಮೌಳಿ ನಿರ್ದೇಶಿಸುವರೇ?
ಈ ಚಿತ್ರಕ್ಕೆ ರಜನಿಕಾಂತ್ ಅವರಿಗೆ ರು. 204 ಕೋಟಿ ಸಂಭಾವನೆ ಆಫರ್ ನೀಡಿರುವವರು ನಿರ್ಮಾಪಕ ಹಂಸರಾಜ ಸಕ್ಸೇನಾ. ಅದೆಲ್ಲಾ ಸುದ್ದಿಯಾದರೂ ಆ ಚಿತ್ರದ ನಿರ್ದೇಶಕರು ಯಾರು ಎಂಬ ಬಗ್ಗೆ ಸರಿಯಾದ ಮಾಹಿತಿಯಿರಲಿಲ್ಲ. ಕೆಲವೊಂದು ಕಡೆ ನಿರ್ದೇಶಕರು ಕೆವಿ ಆನಂದ್ ಎಂದು ಉಲ್ಲೇಖಿಸಲಾಗಿದೆ. ಆದರೆ ಆ ಬಗ್ಗೆ ಪಕ್ಕಾ ಮಾಹಿತಿ ಇರಲಿಲ್ಲ. ಇದೀಗ ಸಿಕ್ಕ ಮಾಹಿತಿ ಪ್ರಕಾರ ರಜನಿಕಾಂತ್ ಅವರಿಗೆ ಆಫರ್ ನೀಡಲಾದ ಆ ಚಿತ್ರದ ನಿರ್ದೇಶಕರು 'ಈಗ' ಖ್ಯಾತಿಯ ಎಸ್ಎಸ್ ರಾಜಮೌಳಿ.
ಬಂದ ಮಾಹಿತಿ ಆಧಾರದ ಮೇಲೆ ಹೇಳುವುದಾದರೆ ರಜಿನಿಕಾಂತ್ ಅವರಿಗೆ ಬಹುನಿರೀಕ್ಷೆಯ ಮೂಲಕ ಆಫರ್ ನೀಡಲಾಗಿರುವ ಈ ಚಿತ್ರವನ್ನು ನಿರ್ದೇಶಿಸಲಿರುವವರು ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ. ಈ ಚಿತ್ರವು ಹಿಂದಿಯ 'ಓ ಮೈ ಗಾಡ್' ಚಿತ್ರದ ರೀಮೇಕ್ ಎಂಬ ಸುದ್ದಿಯೂ ಹಬ್ಬಿದೆ. ಆದರೆ ಈ ಸುದ್ದಿ ಇನ್ನೂ ಪಕ್ಕಾ ಆಗಬೇಕಿದೆ. ಏಕೆಂದರೆ ಇತ್ತೀಚಿಗಷ್ಟೇ ಬಾಲಿವುಡ್ ನ ಓ ಮೈ ಗಾಡ್' ಚಿತ್ರ ಬಿಡುಗಡೆಯಾಗಿದೆ, ಹಣೆಬರಹ ಇನ್ನೂ ನಿರ್ಧಾರವಾಗಬೇಕಿದೆ.
ಅಷ್ಟೇ ಅಲ್ಲ, ಈ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ತೆಲುಗು ಸ್ಟಾರ್, 'ಮಗಧೀರ' ಖ್ಯಾತಿಯ ರಾಮ್ ಚರಣ್ ನಟಿಸಲಿದ್ದಾರೆ ಎನ್ನಲಾಗಿದೆ. ಆದರೆ ರಜನಿಕಾಂತ್ ತಾವು ನಟಿಸುವ ಬಗ್ಗೆ ಇನ್ನೂ 'ಗ್ರೀನ್ ಸಿಗ್ನಲ್' ನೀಡಿಲ್ಲ ಎಂದಿರುವಾಗ ಮಿಕ್ಕ ಮಾಹಿತಿಗಳನ್ನು ಪಕ್ಕಾ ಎನ್ನುವುದು ಸಮಂಜಸವಲ್ಲ. ಹೀಗಾಗಿ ಈ ಚಿತ್ರವನ್ನು ರಾಜಮೌಳಿ ನಿರ್ದೇಶಿಸಲಿರುವುದು ಹಾಗೂ ಇದು ರಜನಿಕಾಂತ್ ಚಿತ್ರವಾಗಲಿರುವುದು ಸದ್ಯಕ್ಕೆ ಗಾಸಿಪ್! (ಏಜೆನ್ಸೀಸ್)


Click it and Unblock the Notifications












