Don't Miss!
- News ಅಚ್ಚೇದಿನಗಳಲ್ಲ-ದೌರ್ಭಾಗ್ಯದ ದಿನಗಳು: ಕಾಂಗ್ರೆಸ್ ಜಾಹೀರಾತು
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೈದರಾಬಾದ್ಗೆ ಬರುತ್ತಿರುವ ಆಲಿಯಾ ಭಟ್, ಚಿತ್ರತಂಡದಿಂದ ವಿಶೇಷ ವ್ಯವಸ್ಥೆ!
ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ ಹೈದರಾಬಾದ್ ಗೆ ಆಗಮಿಸುತ್ತಿದ್ದಾರೆ. ನವೆಂಬರ್ 2 ರಂದು ಆಲಿಯಾ ಭಟ್ ಆರ್ಆರ್ಆರ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.
ಆಲಿಯಾ ಭಟ್ ಅಭಿನಯಿಸುತ್ತಿರುವ ಬಹುತೇಕ ದೃಶ್ಯಗಳ ಚಿತ್ರೀಕರಣ ರಾಮೋಜಿ ಫಿಲಂ ಸಿಟಿಯಲ್ಲಿಯೇ ನಡೆಯಲಿದೆ, ಹಾಗೂ ಸುಮಾರು ಒಂದು ತಿಂಗಳ ಕಾಲ ಸತತವಾಗಿ ಆಲಿಯಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಾಗಾಗಿ ಆಲಿಯಾ ಭಟ್ ಉಳಿದುಕೊಳ್ಳಲು ವಿಶೇಷ ವ್ಯವಸ್ಥೆಯನ್ನು ಚಿತ್ರತಂಡ ಮಾಡಿದೆ ಎನ್ನಲಾಗುತ್ತಿದೆ. ಕೆಲವು ಮೂಲಗಳ ಪ್ರಕಾರ, ಆಲಿಯಾ ಭಟ್, ರಾಮೋಜಿ ಫಿಲಂ ಸಿಟಿಯಲ್ಲಿಯೇ ಉಳಿದುಕೊಳ್ಳಲಿದ್ದಾರಂತೆ, ಹಾಗಾಗಿ ಕೆಲವು ವೀಶೆಷ ವ್ಯವಸ್ಥೆಗಳು ಮತ್ತು ಭದ್ರತೆಗಳನ್ನು ಚಿತ್ರತಂಡ ಆಲಿಯಾಗೋಸ್ಕರ ಮಾಡಲಿದೆ.
ಗುಜರಾತ್, ಪುಣೆಗಳಲ್ಲಿ ಚಿತ್ರೀಕರಣ ಯೋಜಿಸಲಾಗಿತ್ತು
ಈ ಮೊದಲಿಗೆ ಆಲಿಯಾ ಭಟ್ ಅಭಿನಯದ ದೃಶ್ಯಗಳನ್ನು ಹೈದರಾಬಾದ್, ಪುಣೆ, ಗುಜರಾತ್ ನಲ್ಲಿ ಚಿತ್ರೀಕರಿಸಲು ರಾಜಮೌಳಿ ನಿರ್ದೇಶಿಸಿದ್ದರು. ಆದರೆ ಕೊರೊನಾ ನಂತರ ಆಲಿಯಾ ಭಟ್ ಜೊತೆಗೆ ಇತರ ನಟರ ಕಾಲ್ಶೀಟ್ನಲ್ಲಿ ವ್ಯತ್ಯಾಸವಾದ ಕಾರಣ ಎಲ್ಲಾ ದೃಶ್ಯಗಳನ್ನೂ ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿಯೇ ಚಿತ್ರೀಕರಿಸಲು ನಿರ್ಧರಿಸಿದ್ದಾರೆ ನಿರ್ದೇಶಕ ರಾಜಮೌಳಿ.
ಒಂದು ತಿಂಗಳಲ್ಲಿ ಆಲಿಯಾ ಭಟ್ ಚಿತ್ರೀಕರಣ ಪೂರ್ಣ?
ಒಟ್ಟಿಗೆ ಹಲವು ದಿನಗಳ ಕಾಲ್ಶೀಟ್ ಅನ್ನು ಆಲಿಯಾ ಭಟ್, ಆರ್ಆರ್ಆರ್ ತಂಡಕ್ಕೆ ನೀಡಿದ್ದಾರೆ. ಹಾಗಾಗಿ ಒಂದೇ ಷೆಡ್ಯೂಲ್ನಲ್ಲಿ ಸತತವಾಗಿ ಚಿತ್ರೀಕರಣ ಮುಗಿಸಲಿದ್ದಾರೆ ರಾಜಮೌಳಿ. ನವೆಂಬರ್ ತಿಂಗಳ ಅಂತ್ಯಕ್ಕೆ ಆಲಿಯಾ ಭಟ್ ಅವರ ಎಲ್ಲಾ ದೃಶ್ಯಗಳ ಚಿತ್ರೀಕರಣವೂ ಮುಗಿದುಹೋಗಲಿದೆಯಂತೆ.
ಸೀತಾ ಪಾತ್ರದಲ್ಲಿ ಆಲಿಯಾ ಭಟ್
ಆರ್ಆರ್ಆರ್ ಸಿನಿಮಾದಲ್ಲಿ ಆಲಿಯಾ ಭಟ್, ರಾಮ್ ಚರಣ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆಲಿಯಾ ಭಟ್ ಪಾತ್ರದ ಹೆಸರು ಸೀತಾ. ರಾಮ್ ಚರಣ್, ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
Recommended Video
ಇತಿಹಾಸ ತಿರುಚುತ್ತಿದ್ದಾರೆಯೇ ರಾಜಮೌಳಿ
ಇನ್ನುಳಿದಂತೆ ಆರ್ಆರ್ಆರ್ ನಿರ್ದೇಶಕ ರಾಜಮೌಳಿ ಮೇಲೆ ಇತಿಹಾಸ ತಿರುಚಿರುವ ಆರೋಪ ಕೇಳಿಬಂದಿದೆ. ಬುಡಕಟ್ಟು ನಾಯಕನಾಗಿದ್ದ ಕೋಮರಂ ಭೀಮ್ ಅನ್ನು ಸಿನಿಮಾದಲ್ಲಿ ಮುಸ್ಲಿಂ ವ್ಯಕ್ತಿಯಂತೆ ತೋರಿಸಲಾಗಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.