Don't Miss!
- News
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಕೊರೊನಾ ಸೋಂಕಿತೆ ಸಾವು
- Sports
ಐಪಿಎಲ್ 2021: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್
- Finance
ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್ನ ಏಪ್ರಿಲ್ 19ರ ಮಾರುಕಟ್ಟೆ ದರ ಇಲ್ಲಿದೆ
- Education
GIC Of India Officer Scale I Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Automobiles
ಪವರ್ಫುಲ್ ಎಂಜಿನ್ ಹೊಂದಿರುವ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್ಯುವಿ ಕಾರಿನ ವಿಡಿಯೋ
- Lifestyle
ಪ್ರತಿದಿನ ಒಂದು ಕಪ್ ಅನಾನಸ್ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೊಲೆ ಮಾಡಲು ಯತ್ನ: 'ಅರ್ಜುನ್ ರೆಡ್ಡಿ' ನಟಿಯಿಂದ ದೂರು ದಾಖಲು
ತೆಲುಗಿನ ಸೂಪರ್ ಹಿಟ್ 'ಅರ್ಜುನ್ ರೆಡ್ಡಿ' ಸಿನಿಮಾದಲ್ಲಿ ನಟಿಸಿದ್ದ ನಟಿಗೆ ಅಪಘಾತವಾಗಿದೆ. ಆದರೆ ಇದು ಅಪಘಾತವಲ್ಲ ನನ್ನನ್ನು ಕೊಲ್ಲಲು ಮಾಡಿದ ಯತ್ನ ಎಂದು ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
'ಅರ್ಜುನ್ ರೆಡ್ಡಿ' ಸಿನಿಮಾದ ಆರಂಭದ ದೃಶ್ಯದಲ್ಲಿ ನಟ ವಿಜಯ್ ದೇವರಕೊಂಡ ಒಬ್ಬ ಯುವತಿಯ ಮನೆಗೆ ಹೋಗಿ ಆಕೆಗೆ ಕತ್ತಿ ತೋರಿಸಿ ಬೆದರಿಸಿ ನಂತರ ಯುವತಿಯ ಬಾಯ್ಫ್ರೆಂಡ್ ಬಂದನೆಂದು ಬರಿಮೈಯಲ್ಲಿ ಹೊರಗೆ ಬರುವ ದೃಶ್ಯವೊಂದಿದೆ. ಆ ದೃಶ್ಯದಲ್ಲಿ ನಟಿಸಿರುವ ಯುವತಿ ಸಾಯಿ ಸುಧಾ ರೆಡ್ಡಿ ಕಾರು ವಿಜಯವಾಡದಲ್ಲಿ ಅಪಘಾತಕ್ಕೆ ಈಡಾಗಿದೆ.
ಸಾಯಿ ಸುಧಾ ರೆಡ್ಡಿ ಕಾರು ವಿಜಯವಾಡದ ಫ್ಲೈಓವರ್ ಬಳಿ ಅಪಘಾತಕ್ಕೆ ಈಡಾಗಿದ್ದು, ನಟಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ ಈ ಘಟನೆ ಅಪಘಾತವಲ್ಲ, ನನ್ನನ್ನು ಕೊಲ್ಲಲು ಮಾಡಿರುವ ಯತ್ನ ಎಂದು ಆ ನಟಿಯು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
'ನಟಿ ಸಾಯಿ ಸುಧಾ ರೆಡ್ಡಿ ಹಾಗೂ ಕ್ಯಾಮೆರಾಮನ್ ಶ್ಯಾಮ್ ಕೆ ನಾಯ್ಡು ನಡುವೆ ಕೆಲವು ವರ್ಷಗಳಿಂದ ವಿವಾದ ನಡೆಯುತ್ತಲೇ ಇದೆ. ಶ್ಯಾಮ್ ಕೆ ನಾಯ್ಡು, ನನ್ನನ್ನು ಮದುವೆ ಆಗುತ್ತೀನೆಂದು ಹೇಳಿ ಮೋಸ ಮಾಡಿದ್ದಾನೆ ಎಂದು ನಟಿ ಸುಧಾ ರೆಡ್ಡಿ ದೂರು ದಾಖಲಿಸಿದ್ದರು. ಈಗ ಅದೇ ಶ್ಯಾಮ್ ನಾಯ್ಡು, ನನ್ನನ್ನು ಕೊಲ್ಲಲು ಯತ್ನಿಸಿದ್ದಾನೆ' ಎಂದು ಆರೋಪಿಸಿದ್ದಾರೆ ಸುಧಾ ರೆಡ್ಡಿ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
2014 ರಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸುಧಾ ರೆಡ್ಡಿಗೆ ಈ ವರೆಗೆ ಸೂಕ್ತ ಹಿಟ್ ದೊರೆತಿಲ್ಲ. ಸಾಕಷ್ಟು ಕಿರು ಚಿತ್ರ, ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಸುಧಾ ರೆಡ್ಡಿ, ಅರ್ಜುನ್ ರೆಡ್ಡಿ, ಅಆ, ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.