Don't Miss!
- News ಕೇಂದ್ರದ ಬಿಜೆಪಿ ಸರ್ಕಾರದಿಂದ ಅನ್ನದಾತರಿಗೆ ಮೋಸ ; ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಸಂಯುಕ್ತಾ ಪಾಟೀಲ್
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದ ಪ್ರಚಂಡ ಕುಳ್ಳ ದ್ವಾರಕೀಶ್ ಹುಟ್ಟುಹಬ್ಬ ಆಚರಣೆ
1963 ರಲ್ಲಿ ಕನ್ನಡ ಚಿತ್ರಗಳಲ್ಲಿ ಬಣ್ಣಹಚ್ಚಲು ಪ್ರಾರಂಭಿಸಿದ ಕುಳ್ಳ ದ್ವಾರಕೀಶ್, ಬಹುತೇಕ ಹಾಸ್ಯ ಪಾತ್ರಗಳಲ್ಲೇ ಹೆಚ್ಚು ನಟಿಸಿ ಹಾಸ್ಯನಟರೆಂದೇ ಪ್ರಸಿದ್ಧರಾದರು. 1969 ರಲ್ಲಿ 'ದ್ವಾರಕಾ ಫಿಲಂಸ್' ಬ್ಯಾನರ್ ಅಡಿಯಲ್ಲಿ ಮೇಯರ್ ಮುತ್ತಣ್ಣ ಚಿತ್ರವನ್ನು ನಿರ್ಮಿಸುವ ಮೂಲಕ ಸ್ವತಂತ್ರ ನಿರ್ಮಾಪಕರಾದರು. ಡಾ ರಾಜ್ ಕುಮಾರ್ ಹಾಗೂ ಭಾರತಿ ಜೋಡಿಯ ಈ ಚಿತ್ರ, ಸೂಪರ್ ಹಿಟ್ ದಾಖಲಿಸಿತ್ತು. ಮುಂದಿನ ಎರಡು ದಶಕಗಳ ಕಾಲ ದ್ವಾರಕೀಶ್ ಯಶಸ್ವಿ ನಿರ್ಮಾಪಕರು ಎನಿಸಿಕೊಂಡಿದ್ದರು.
ಆದರೆ ನಂತರದ ಕೆಲವು ವರ್ಷಗಳಲ್ಲಿ ಬಂದಿದ್ದ ಅವರ ನಿರ್ಮಾಣದ ಚಿತ್ರಗಳು ಸತತ ಸೋಲು ಕಂಡು ದ್ವಾರ್ಕಿ ಸೋಲಿನ ಸರದಾರ ಎನಿಸಿಬಿಟ್ಟರು. ಆದರೆ ಧೃತಿಗೆಡದ ದ್ವಾರಕೀಶ್, 2004 ರಲ್ಲಿ ವಿಷ್ಣುವರ್ಧನ್-ಸೌಂದರ್ಯಾ ಜೋಡಿಯ 'ಆಪ್ತಮಿತ್ರ' ಚಿತ್ರ ನಿರ್ಮಾಣದ ಮೂಲಕ ಮತ್ತೆ ಯಶಸ್ಸಿನ ಸವಿ ಉಂಡರು. ನಂತರ ದ್ವಾರಕೀಶ್ ಎಂದೂ ತಮ್ಮ ಲೆಕ್ಕಾಚಾರ ತಪ್ಪದೇ ನಿರಂತರವಾಗಿ ಯಶಸ್ಸಿನ ಪಯಣದಲ್ಲಿ ಸಾಗುತ್ತಿದ್ದಾರೆ.
ಈ ಮಧ್ಯೆ, 1984 ರಲ್ಲಿ 'ನೀ ಬರೆದ ಕಾದಂಬರಿ' ಚಿತ್ರ ನಿರ್ದೇಶಿಸುವ ಮೂಲಕ ಸಿನಿಮಾ ನಿರ್ದೇಶನಕ್ಕೂ ಕೈಹಾಕಿದ ಕುಳ್ಳ ದ್ವಾರಕೀಶ್, ಅಲ್ಲಿಯೂ ಯಶಸ್ಸು ಕಂಡವರು. 'ನೀ ಬರೆದ ಕಾದಂಬರಿ' ಯಶಸ್ಸಾದ ನಂತರ 'ಡಾನ್ಸ್ ರಾಜಾ ಡಾನ್ಸ್', 'ಶ್ರುತಿ', 'ಶ್ರುತಿ ಹಾಕಿದ ಹೆಜ್ಜೆ', 'ರಾಯರುಬಂದರು ಮಾವನ ಮನೆಗೆ' ಹಾಗೂ 'ಕಿಲಾಡಿಗಳು' ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಚಿತ್ರರಂಗದ ಬಹಳಷ್ಟು ವಿಭಾಗಗಳಲ್ಲಿ ಕೆಲಸ ಮಾಡುವ ಮೂಲಕ ಚಿತ್ರರಂಗಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು.ಮುಂದಿನ ಪುಟ ನೋಡಿ...