ಪುರಿ ಜಗನ್ನಾಥ್ ಜೊತೆಗೆ ಯಶ್ 'ಜನ ಗಣ ಮನ' ಮಾಡೋದು ಪಕ್ಕಾ.?

Recommended Video

KGF 2 ನಂತರ ಯಶ್ ಮಾಡುವ ಸಿನಿಮಾ ಯಾವುದು ಗೊತ್ತಾ..? | YASH | KGF2 | MAHESH BABU | POORIJAGANATH

ಕಳೆದ ಎರಡು ವರ್ಷಗಳಿಂದ ರಾಕಿಂಗ್ ಸ್ಟಾರ್ ಯಶ್ 'ಕೆ.ಜಿ.ಎಫ್' ಚಿತ್ರದಲ್ಲೇ ಬಿಜಿಯಿದ್ದಾರೆ. 'ಕೆ.ಜಿ.ಎಫ್' ಚಾಪ್ಟರ್ 1 ಸೂಪರ್ ಡ್ಯೂಪರ್ ಹಿಟ್ ಆದ್ಮೇಲೆ, 'ಕೆ.ಜಿ.ಎಫ್-2' ಚಿತ್ರಕ್ಕೆ ಯಶ್ ಚಾಲನೆ ಕೊಟ್ಟಿದ್ದಾರೆ. ಸದ್ಯ 'ಕೆ.ಜಿ.ಎಫ್-2' ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ.

'ಕೆ.ಜಿ.ಎಫ್-2' ಚಿತ್ರದ ಕಂಪ್ಲೀಟ್ ಆದ್ಮೇಲೆ ಯಶ್ ಕೈಗೆತ್ತಿಕೊಳ್ಳಲಿರುವ ಪ್ರಾಜೆಕ್ಟ್ ಯಾವುದು.? ಈ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ಕೊರೆಯುತ್ತಿದೆ. ಆದ್ರೆ, ಈ ಪ್ರಶ್ನೆಗೆ ಈಗ ಉತ್ತರ ಸಿಗಲ್ಲ. ಯಾಕಂದ್ರೆ, ಯಶ್ ಯಾವುದಕ್ಕೂ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

'ಮೈ ನೇಮ್ ಈಸ್ ಕಿರಾತಕ' ಚಿತ್ರಕ್ಕೆ ಓಕೆ ಎಂದಿದ್ದರೂ, ಅದು ಯಾವಾಗ ಶುರುವಾಗುತ್ತೋ ಗೊತ್ತಿಲ್ಲ. ಹೀಗಿದ್ದರೂ, ಟಾಲಿವುಡ್ ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಜೊತೆಗೆ ಯಶ್ 'ಜನ ಗಣ ಮನ' ಎಂಬ ಸಿನಿಮಾ ಮಾಡ್ತಾರಂತೆ ಎಂಬ ಅಂತೆ-ಕಂತೆ ಕೇಳಿಬರುತ್ತಿದೆ. ಈ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. ಮುಂದೆ ಓದಿರಿ..

ಎಲ್ಲೆಲ್ಲೂ ಇದೇ ಗುಲ್ಲು.!

ಎಲ್ಲೆಲ್ಲೂ ಇದೇ ಗುಲ್ಲು.!

'ಜನ ಗಣ ಮನ' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಟಾಲಿವುಡ್ ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ 'ಜನ ಗಣ ಮನ' ರೆಡಿ ಮಾಡುವ ಯೋಚನೆ ಪುರಿ ಜಗನ್ನಾಥ್ ಗಿದೆ. ಅಪ್ಪಟ ದೇಶಭಕ್ತಿ ಚಿತ್ರವಾಗಿರುವ 'ಜನ ಗಣ ಮನ'ದಲ್ಲಿ ನಟ ಯಶ್ ನಟಿಸಲಿದ್ದಾರಂತೆ ಎಂಬ ಗುಸುಗುಸು ತೆಲುಗು ಸಿನಿ ಅಂಗಳದಲ್ಲಿ ಹಬ್ಬಿದೆ.

ನಟ ಯಶ್ ಏನಂತಾರೆ.?

ನಟ ಯಶ್ ಏನಂತಾರೆ.?

''ಪುರಿ ಜಗನ್ನಾಥ್ ಕಥೆ ಹೇಳಿದ್ದು ನಿಜ. ಕಥೆ ಇಷ್ಟವಾಗಿದ್ದು ನಿಜ. ಆದ್ರೆ ಅದೊಂದು ದೊಡ್ಡ ಜವಾಬ್ದಾರಿ. ಇವತ್ತು ನಾನು ಓಕೆ ಅಂತೀನಿ. ಆದ್ರೆ, ಅದಕ್ಕೂ ಮುನ್ನ 100 ತರಹ ಆಂಗಲ್ ನಲ್ಲಿ ನಾನು ಯೋಚನೆ ಮಾಡಬೇಕು. ಡೇಟ್ಸ್, ಟೈಮ್ ಎಲ್ಲಾ ಸರಿಯಾಗಿ ಸೆಟ್ ಆಗಿ, ಆ ಟೈಮ್ ಗೆ ಸಬ್ಜೆಕ್ಟ್ ಸಿಕ್ಕಿದ್ರೆ ಚಿತ್ರ ಮಾಡುವೆ. ಸದ್ಯಕ್ಕೆ ಈ (ಕೆಜಿಎಫ್) ಸಿನಿಮಾ ಮುಗಿಯಬೇಕು'' ಎಂದಿದ್ದಾರೆ ನಟ ಯಶ್.

ಮಹೇಶ್ ಬಾಬುಗೆ ಹೋಗಿತ್ತು ಆಫರ್.!

ಮಹೇಶ್ ಬಾಬುಗೆ ಹೋಗಿತ್ತು ಆಫರ್.!

ಅಸಲಿಗೆ, 'ಜನ ಗಣ ಮನ' ಚಿತ್ರದ ಆಫರ್ ನ ನಿರ್ದೇಶಕ ಪುರಿ ಜಗನ್ನಾಥ್ ಮೊದಲು ನೀಡಿದ್ದು ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ. ಆದ್ರೆ, ಕಾರಣಾಂತರಗಳಿಂದ ಈ ಪ್ರಾಜೆಕ್ಟ್ ನ ಮಹೇಶ್ ಬಾಬು ಡ್ರಾಪ್ ಮಾಡಿದ್ದಾರೆ ಎನ್ನಲಾಗಿದೆ. ಹಾಗೇ, ವಿಜಯ್ ದೇವರಕೊಂಡಗೂ 'ಜನ ಗಣ ಮನ' ಚಿತ್ರದ ಆಫರ್ ಹೋಗಿತ್ತು ಎಂಬ ಸುದ್ದಿ ಇದೆ.

ಯಶ್ ಗ್ರೀನ್ ಸಿಗ್ನಲ್ ಕೊಡ್ತಾರಾ.?

ಯಶ್ ಗ್ರೀನ್ ಸಿಗ್ನಲ್ ಕೊಡ್ತಾರಾ.?

'ಜನ ಗಣ ಮನ' ಚಿತ್ರಕ್ಕೆ ಯಶ್ ಗ್ರೀನ್ ಸಿಗ್ನಲ್ ಕೊಡ್ತಾರಾ ಎಂಬ ಪ್ರಶ್ನೆಗೆ ಯಶ್ ಸ್ಪಷ್ಟವಾಗಿ ಉತ್ತರ ಕೊಟ್ಟಿಲ್ಲ. ಸದ್ಯಕ್ಕೆ 'ಕೆ.ಜಿ.ಎಫ್' ಮುಗಿಯಲಿ ಎಂದಷ್ಟೇ ಹೇಳಿದ್ದಾರೆ. 'ಕೆ.ಜಿ.ಎಫ್' ಮುಗಿಯುವವರೆಗೂ ಯಶ್ ಗಾಗಿ ಪುರಿ ಜಗನ್ನಾಥ್ ಕಾಯ್ತಾರಾ.? ನೋಡೋಣ.

More from Filmibeat

English summary
Is Yash planning to do Jana Gana Mana movie with Telugu Director Puri Jagannath.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X