Don't Miss!
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್ ಮತ್ತೆ ಬಾಲಿವುಡ್ ನಲ್ಲಿ ನಟಿಸಿಲ್ಲ ಯಾಕೆ?
ಕನ್ನಡದಲ್ಲಿ ನಟಿಸುತ್ತಿದ್ದ ಕಿಚ್ಚ ಸುದೀಪ್ ಅವರ ಪ್ರತಿಭೆಯನ್ನು ಕನ್ನಡ ಹೊರತುಪಡಿಸಿ ಮೊದಲು ಗುರುತಿಸಿದ್ದು ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ತಮ್ಮ ನಿರ್ದೇಶನದ ರಣ್, ಫೂಂಕ್ ಹಾಗೂ ರಕ್ತ ಚರಿತ್ರಾ ಗಳಲ್ಲಿ ಸುದೀಪ್ ಅವರಿಗೆ ಅವಕಾಶವಿತ್ತು ಬಾಲಿವುಡ್ ಗುರುತಿಸುವಂತೆ ಮಾಡಿ ಸುದೀಪ್ ಅವರಿಗೆ ಕನ್ನಡವನ್ನು ಮೀರಿದ ಐಡೆಂಟಿಟಿ ಕೊಟ್ಟಿದ್ದರು.
ನಂತರ, ನಡೆದಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಸುದೀಪ್ ಮತ್ತೆ ಕನ್ನಡದಲ್ಲಿ ಬಿಜಿಯಾದರರು. ಅಷ್ಟರಲ್ಲಿ ತೆಲುಗು ಯಶಸ್ವಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಸುದೀಪ್ ಅವರಿಗೆ ಆಹ್ವಾನವಿತ್ತರು. ಬಹಭಾಷಾ ಚಿತ್ರ ತೆಲುಗಿನ 'ಈಗ' ದಲ್ಲಿ ಖಳನಾಯಕನ (ವಿಲನ್) ಪಾತ್ರ ಮಾಡುವ ಮೂಲಕ ಸುದೀಪ್, ದಕ್ಷಿಣ ಭಾರತದ ಹೊಸ 'ಸೂಪರ್ ಸ್ಟಾರ್' ಆಗಿ ಹೆಸರುಮಾಡಿದ್ದು ಈಹ ಇತಿಹಾಸ.
ಇಂಥಹ ಸುದೀಪ್ ಅವರಿಗೆ, 'ನೀವೇಕೆ ಬಾಲಿವುಡ್ ಕಡೆ ಸೆಟ್ಲ್ ಆಗಲಿಲ್ಲ?' ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಯ್ತು. ಅದಕ್ಕೆ ಸುದೀಪ್ ನೀಡಿದ ಉತ್ತರದ ಝಲಕ್ ಇಲ್ಲಿದೆ...ನನಗೆ ಬಾಲಿವುಡ್ ನನ್ನದೆಂಬ ಭಾವನೆ ಬರಲೇ ಇಲ್ಲ. ಅಲ್ಲಿ ಭಾವನೆಗಳ ವ್ಯಾಪಾರವೇ ನಡೆಯುತ್ತಿದೆ ಎಂದೇ ಅನಿಸತು. ಸಿಕ್ಕ ಅವಕಾಶವನ್ನು ಚೊಕ್ಕವಾಗಿ ಬಳಸಿಕೊಂಡು ನನ್ನ ಮನೆಯಾದ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾದೆ.
ನಂತರ ಅವಕಾಶವೇ ಸಿಗಲಿಲ್ಲ ಎಂದಲ್ಲ. ಆದರೆ, ನನಗೆ ಒಂದೇ ರೀತಿಯ ಪಾತ್ರ ಮಾಡುವುದು ಇಷ್ವವಿರಲಿಲ್ಲ. ಹೀಗಾಗಿ ಅಲ್ಲಿಯೇ ನಟಿಸಿಕೊಂಡಿರಲು ಮನಸ್ಸಾಗಲಿಲ್ಲ. ನನ್ನ ವೃತ್ತಿಯ ಕ್ಷೇತ್ರ ಏನಿದ್ದರೂ ದಕ್ಷಿಣ ಭಾರತವೇ ಎನ್ನುವುದು ಮನದಟ್ಟಾಗಿತ್ತು. ಅಷ್ಟರಲ್ಲಿ ರಾಜಮೌಳಿಯವರ ತೆಲುಗಿನ 'ಈಗ' ಚಿತ್ರದ ಆಫರ್ ಬಂತು. ಕೇವಲ ತೆಲುಗಿನಲ್ಲಲ್ಲದೇ ತಮಿಳಿನಲ್ಲಿ 'ನಾನ್ ಈ' ಹಾಗೂ ಮಲಯಾಳಂನಲ್ಲಿ 'ಈಚ' ಹೆಸರಿನಲ್ಲಿ ಇದು ತೆರೆಕಂಡಿತು. ಮುಂದಿನ ಪುಟ ನೋಡಿ...