ದೇವರಕೊಂಡ ಜೊತೆ 5 ದಿನ 100 ಮಂದಿಗೆ ಉಚಿತ ಪ್ರವಾಸ: ನೀವು ಆ ಅದೃಷ್ಟವಂತರಾಗಬಹುದು!

'ಅರ್ಜುನ್ ರೆಡ್ಡಿ' ಆಗಿ ವಿಜಯ್ ದೇವರಕೊಂಡ ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದ್ದು ಗೊತ್ತೇಯಿದೆ. ದೇವರಕೊಂಡಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರೊಟ್ಟಿಗೆ ಒಳ್ಳೆ ರಿಲೇಶನ್‌ಶಿಪ್ ಕೂಡ ಮೇಂಟೇನ್ ಮಾಡ್ತಿರ್ತಾರೆ. ಇದೀಗ 100 ಜನ ಅಭಿಮಾನಿಗಳನ್ನು ಉಚಿತವಾಗಿ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.

ಕೆಲ ವರ್ಷಗಳಿಂದ ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ 'ದೇವರಸಂತಾ' ಹೆಸರಿನಲ್ಲಿ ವಿಜಯ್ ಉಡುಗೊರೆಗಳನ್ನು ಕೊಡುತ್ತಾ ಬರುತ್ತಿದ್ದಾರೆ. ಈ ವರ್ಷ 100 ಜನ ಅಭಿಮಾನಿಗಳನ್ನು ಉಚಿತವಾಗಿ ಪ್ರವಾಸಕ್ಕೆ ಕಳುಹಿಸುವುದಾಗಿ ಟಾಲಿವುಡ್ ಅರ್ಜುನ್ ರೆಡ್ಡಿ ಹೇಳಿದ್ದರು. ಆ ಮಾತನ್ನು ನಡೆಸಿಕೊಡಲು ಮುಂದಾಗಿದ್ದಾರೆ. 100 ಜನರನ್ನು ಎಲ್ಲಾ ವೆಚ್ಚ ಭರಿಸಿ ಪ್ರವಾಸಕ್ಕೆ ಕಳುಹಿಸುವುದಾಗಿ ಹೇಳಿದ್ದರು. ಡೆಸ್ಟಿನೇಷನ್ ಸೆಲೆಕ್ಟ್ ಮಾಡಿಕೊಳ್ಳಿ ಎಂತೂ ಸುವರ್ಣಾವಕಾಶ ಕೊಟ್ಟಿದ್ದರು. ಇದೀಗ ಮನಾಲಿಗೆ ಪ್ರವಾಸಕ್ಕೆ ಕಳುಹಿಸುವುದಾಗಿ ವಿವರಿಸಿ ವಿಡಿಯೋ ಶೇರ್ ಮಾಡಿದ್ದಾರೆ.

ಯಾರೆಗೆಲ್ಲಾ ಈ ಸುವರ್ಣವಕಾಶ ಸಿಗಲಿದೆ? ಈ ಉಚಿತ ಪ್ರವಾಸಕ್ಕೆ ಹೋಗಲು ಏನು ಮಾಡಬೇಕು? ಯಾರೆಲ್ಲಾ ಹೋಗಬಹುದು? ಎನ್ನುವುದನ್ನು ವಿಡಿಯೋದಲ್ಲಿ ತಿಳಿಸಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ವಿಜಯ್ ದೇವರಕೊಂಡ ಹಂಚಿಕೊಂಡಿರುವ ವಿಡಿಯೋದಲ್ಲಿ ಏನಿದೆ ಅಂದರೆ, "ಹ್ಯಾಪಿ ನ್ಯೂ ಇಯರ್ ಮೈ ಲವ್ಸ್.. ಇದು ದೇವರಶಾಂತ ಅಪ್‌ಡೇಟ್, ನಾನು ಇದುವರಗೆ ಹೇಳಿದಂತೆ ನಿಮ್ಮಲ್ಲಿ 100 ಮಂದಿಯನ್ನು ಫುಡ್, ಟ್ರಾವೆಲ್, ಅಕಾಮಿಡೇಷನ್ ವೆಚ್ಚಗಳೊಂದಿಗೆ ಹಾಲಿಡೇ ಟ್ರಿಪ್‌ಗೆ ಕಳುಹಿಸಲಿದ್ದೇನೆ. ನೀವು ಸೆಲೆಕ್ಟ್ ಮಾಡಿಕೊಂಡಂತೆ ನೂರು ಮಂದಿಯನ್ನು ಮನಾಲಿಗೆ ಐದು ದಿನಗಳ ಪ್ರವಾಸಕ್ಕೆ ಕಳುಹಿಸುತ್ತಿದ್ದೇನೆ. ಮಂಜಿನಿಂದ ಮುಚ್ಚಲ್ಪಟ್ಟ ಪರ್ವತಗಳನ್ನು ನೀವು ನೋಡಲಿದ್ದೀರಿ. ದೇವಸ್ಥಾನಗಳು, ಮಠಗಳು ನೋಡಲು ನಿಮ್ಮ ಟೂರ್ ಕಾರ್ಯಕ್ರಮಗಳನ್ನು ಪ್ಲಾನ್ ಮಾಡಿ" ಎಂದಿದ್ದಾರೆ.

ಪ್ರವಾಸಕ್ಕೆ ವಿಜಯ್ ಕೂಡ ಬರ್ತಾರೆ

ಪ್ರವಾಸಕ್ಕೆ ವಿಜಯ್ ಕೂಡ ಬರ್ತಾರೆ

"18 ವರ್ಷ ಮೇಲ್ಪಟ್ಟವರು, ಇನ್‌ಸ್ಟಾದಲ್ಲಿ ಅಟಾಚ್‌ ಮಾಡಲಾದ 'ದೇವರಸಂತಾ' ಗೂಗಲ್ ಡಾಕ್ಯುಮೆಂಟ್ ಫಾಮ್‌ ಪೂರ್ಣಗೊಳಿಸಬೇಕು. ಅದರಲ್ಲಿ 100 ಜನರನ್ನು ಸೆಲೆಕ್ಟ್ ಮಾಡಿ ಈ ವಕೇಶನ್‌ಗೆ ಕಳುಹಿಸುತ್ತೇವೆ. ನಾನು ಕೂಡ ನಿಮ್ಮ ಪ್ರಯಾಣದಲ್ಲಿ ಭಾಗಿಯಾಗಲು ಇಷ್ಟಪಡುತ್ತೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಮತ್ತಷ್ಟು ಅದ್ಭುತ ವರ್ಷ ನಿಮ್ಮ ಮುಂದಿದೆ" ಎಂದು ವಿಜಯ್ ತನ್ನ ಪೋಸ್ಟ್‌ಗೆ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈಗಾಗಲೇ ಲಕ್ಷಕ್ಕೂ ಅಧಿಕ ಜನ ಫಾಮ್ ತುಂಬಿ ಕಳುಹಿಸಿದ್ದಾರೆ.

'ಲೈಗರ್' ಸೋಲಿನ ಪೆಟ್ಟು

'ಲೈಗರ್' ಸೋಲಿನ ಪೆಟ್ಟು

ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಬಹುಕೋಟಿ ವೆಚ್ಚದಲ್ಲಿ ಪುರಿ ಜಗನ್ನಾಥ್ ಈ ಚಿತ್ರವನ್ನು ನಿರ್ಮಿಸಿದ್ದರು. ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಎಂದುಕೊಂಡಿದ್ದ ವಿಜಯ್ ದೇವರಕೊಂಡಗೆ ನಿರಾಸೆ ಕಾದಿತ್ತು. ಸಿನಿಮಾ ದೊಡ್ಡಮಟ್ಟದಲ್ಲಿ ನಷ್ಟ ತಂದೊಡ್ಡಿತ್ತು. ಇನ್ನು ಈ ಸೋಲಿನಿಂದ ಇಡೀ ಚಿತ್ರತಂಡ ಹೊರ ಬಂದಿಲ್ಲ.

ಸೈಲೆಂಟ್ ಆದ ದೇವರಕೊಂಡ

ಸೈಲೆಂಟ್ ಆದ ದೇವರಕೊಂಡ

'ಲೈಗರ್' ಹೀನಾಯವಾಗಿ ಸೋಲುಂಡ ಮೇಲೆ ವಿಜಯ್ ದೇವರಕೊಂಡ ಸೈಲೆಂಟ್ ಆಗಿದ್ದಾರೆ. ಸಮಂತಾ ಅನಾರೋಗ್ಯದಿಂದ ಬಳಲುತ್ತಿರುವುದರಿಂದ 'ಖುಷಿ' ಸಿನಿಮಾ ಶೂಟಿಂಗ್ ನಿಂತು ಹೋಗಿದೆ. ಇನ್ನು 'ಲೈಗರ್' ನಂತರ ಅದೇ ಕಾಂಬಿನೇಷನ್‌ನಲ್ಲಿ 'ಜನ ಗಣ ಮನ' ಸಿನಿಮಾ ಬರಬೇಕಿತ್ತು. ದೊಡ್ಡಮಟ್ಟದಲ್ಲಿ ಸಿನಿಮಾ ಮುಹೂರ್ತ ಕೂಡ ನಡೆದಿತ್ತು. ಆದರೆ ಈಗ ಈ ಸಿನಿಮಾ ನಿರ್ಮಾಣವಾಗುವುದೇ ಅನುಮಾನ ಎನ್ನಲಾಗ್ತಿದೆ.

More from Filmibeat

English summary
Liger Actor Vijay Deverakonda decided to send 100 fans on an all-paid trip to Manali. Taking to Instagram, Vijay Deverakonda shared a video giving details of the trip. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X