Don't Miss!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಮ್ ಗೋಪಾಲ್ ವರ್ಮಾ ಭವಿಷ್ಯ ನಿಜವಾಗುವುದೇ?
"ತೆಲುಗಿನ 100 ಕೋಟಿ ಕ್ಲಬ್ ಸ್ಥಾಪಿಸಲಿರುವ ಚಿತ್ರ ಈಗ" ಎಂಬುದೇ ರಾಮ್ ಗೋಪಾಲ್ ವರ್ಮಾ ನುಡಿದಿದ್ದ ಭವಿಷ್ಯ. ಅದು ಬಹುತೇಕ ನಿಜವಾಗಿದೆ ಎನ್ನಲಿಕ್ಕೆ ಕಾರಣ, ಬಿಡುಗಡೆಯಾದ ಒಂದೇ ವಾರದಲ್ಲಿ ಈ ಚಿತ್ರದ ಒಟ್ಟೂ ಗಳಿಕೆ ರು. 56 ಕೋಟಿ ಮೀರಿತ್ತು. ಎರಡನೇ ವಾರಾಂತ್ಯದ ಈ ಹೊತ್ತಿನಲ್ಲಿ ಇದರ ಕಲೆಕ್ಷನ್ ನೂರರ ಸಮೀಪ ಹೋಗಿರುವ ಸಂಭವವಿದೆ.
ಇಷ್ಟರಲ್ಲೇ ವರ್ಮಾರ ಭವಿಷ್ಯ ನಿಜವಾಗುವ ಸೂಚನೆ ಈ ಮೂಲಕ ದಟ್ಟವಾಗಿದೆ. ಎರಡನೇ ವಾರಾಂತ್ಯದ ಬಾಕ್ಸ್ ಆಫೀಸ್ ವರದಿ ತಲುಪಿದ ತಕ್ಷಣವೇ ರಾಮ್ ಗೋಪಾಲ್ ವರ್ಮಾರ ಭವಿಷ್ಯ ನಿಜವಾಗಿದೆ ಎಂಬ ಘೋಷಣೆ ಮೊಳಗಿದರೂ ಅಚ್ಚರಿಯಿಲ್ಲ. ಯಾವುದೇ ಕಾರಣಕ್ಕೂ ಈ ಚಿತ್ರ ನೂರು ಕೋಟಿ ಗಳಿಸದೇ ತೆರೆಯಿಂದ ಮರೆಯಾಗಲಾರದು ಎಂಬುದು ಚಿತ್ರಜಗತ್ತಿನ ಎಲ್ಲಾ ಪಂಡಿತರ ಅಭಿಪ್ರಾಯ.
ಬಾಲಿವುಡ್ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತಿಗೆ ಬಾಲಿವುಡ್ಡಿನಲ್ಲಿ ಮಾತ್ರವಲ್ಲದೇ ಆಲ್ ಇಂಡಿಯಾ ಲೆವೆಲ್ ನಲ್ಲಿ ಭಾರೀ ಬೆಲೆಯಿದೆ. ವರ್ಮಾ ಹಿಂದೆಮುಂದೆ ಯೋಚಿಸದೇ ಮಾತನಾಡುವ ವ್ಯಕ್ತಿ ಅಲ್ಲವೇ ಅಲ್ಲ. ಹೀಗಿರುವಾಗ ಎಲ್ಲಾ ತಿಳಿದೇ ಮಾತನಾಡಿದ್ದಾರೆ ವರ್ಮಾ. ವರ್ಮಾ ಮಾತಿನಿಂದಲೇ ಬಾಲಿವುಡ್ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿತ್ತು ಎಂದರೂ ತಪ್ಪೇನಿಲ್ಲ.
ಅಂದಹಾಗೆ, ಕಿಚ್ಚ ಸುದೀಪ್ ಈಗ ಚಿತ್ರಕ್ಕಿಂತ ಮೊದಲು ಹಿಂದಿಯಲ್ಲಿ ವರ್ಮಾ ನಿರ್ದೇಶನದ ಭೂತ್, ಫೂಂಕ್, ರಣ್ ಅಲ್ಲದೇ ತೆಲುಗು ಚಿತ್ರ ರಕ್ತ ಚರಿತ್ರದಲ್ಲೂ ನಟಿಸಿದ್ದರು. ಹೀಗಾಗಿ ಸುದೀಪ್ ಆಯ್ಕೆಗಳು, ನಟನಾ ಸಾಮರ್ಥ್ಯ ಹಾಗೂ ವ್ಯಕ್ತಿತ್ವದ ಬಗ್ಗೆ ವರ್ಮಾರಿಗೆ ಇನ್ನಿಲ್ಲದ ಭರವಸೆ. ಇನ್ನು ರಾಜಮೌಳಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ!. ಒಟ್ಟಿನಲ್ಲಿ ವರ್ಮಾ ಭವಿಷ್ಯ ನಿಜವಾಗುವ ದಿನ ಯಾವುದೆಂಬುದಷ್ಟೇ ಬಾಕಿ. (ಒನ್ ಇಂಡಿಯಾ ಕನ್ನಡ)