Just In
Don't Miss!
- News
ಭ್ರಷ್ಟಾಚಾರ ಮುಕ್ತ ಅಸ್ಸಾಂ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ವಾಗ್ದಾನ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 24ರ ಚಿನ್ನ, ಬೆಳ್ಳಿ ದರ
- Sports
ಟೀಮ್ ಇಂಡಿಯಾದ ನಿರ್ಭೀತ ಆಟಕ್ಕೆ ಆ ಇಬ್ಬರು ಕಾರಣ ಎಂದ ಭರತ್ ಅರುಣ್
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆ ಸಿನಿಮಾದಿಂದಾಗಿ ಸಂಭಾವನೆ ಹೆಚ್ಚಿಸಿಕೊಳ್ಳುತ್ತಿರುವ ರವಿತೇಜ
ಮಾಸ್ ಮಹಾರಾಜ ಖ್ಯಾತಿಯ ರವಿತೇಜ ಅನಾರೋಗ್ಯದ ಬಳಿಕ ಮತ್ತೆ ಸಿನಿಮಾಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಜನವರಿ 09 ರಂದು ರವಿತೇಜ ನಟನೆಯ ಹೊಸ ಸಿನಿಮಾ 'ಕ್ರ್ಯಾಕ್' ಬಿಡುಗಡೆ ಆಗಲಿದ್ದು. ಈ ಸಿಸನಿಮಾ ಮೇಲೆ ರವಿತೇಜ ಗೆ ಭಾರಿ ನಿರೀಕ್ಷೆಗಳಿವೆ. ಎಷ್ಟೆಂದರೆ, ಈ ಸಿನಿಮಾ ಹಿಟ್ ಆದನಂತರ ತಮ್ಮ ಸಂಭಾವನೆ ಏರಿಸಿಕೊಳ್ಳಬೇಕು ಎಂದುಕೊಂಡಿದ್ದಾರಂತೆ ರವಿತೇಜ.
'ಕ್ರ್ಯಾಕ್' ಸಿನಿಮಾ ಪಕ್ಕಾ ಇಂಡಸ್ಟ್ರಿ ಹಿಟ್ ಆಗುತ್ತದೆ. ಆಗ ಸಂಭಾವನೆ ಏರಿಸಿಕೊಳ್ಳುತ್ತೇನೆ ಎಂದಿರುವ ರವಿತೇಜ, ಸಿನಿಮಾ ಹಿಟ್ ಆಗುವವರೆಗೆ ಯಾವುದೇ ಹೊಸ ಪ್ರಾಜೆಕ್ಟ್ ಸಹ ಒಪ್ಪಿಕೊಳ್ಳುತ್ತಿಲ್ಲವಂತೆ.

ಸಂಭಾವನೆ ಏರಿಸಿಕೊಳ್ಳಲು ನಿರ್ಧರಿಸಿರುವ ರವಿತೇಜ
ತೆಲುಗಿನ ಸ್ಟಾರ್ ನಟರ ಪೈಕಿ ರವಿತೇಜ ತುಸು ಕಡಿಮೆ ಸಂಭಾವನೆ ಪಡೆಯುತ್ತಿದ್ದಾರೆ. ಹಾಗಾಗಿ ಈಗ ಸಂಭಾವನೆ ಏರಿಸಿಕೊಳ್ಳಲು ನಿರ್ಧರಿಸಿರುವ ರವಿತೇಜ, ಸಂಭಾವನೆ ಕಡಿಮೆ ಎಂಬ ಕಾರಣಕ್ಕೆ ಎರಡು ಸಿನಿಮಾಗಳಿಂದ ಹಿಂದೆ ಸರಿದಿದ್ದಾರೆ.

ಇಬ್ಬರ ಸಿನಿಮಾ ನಿರಾಕರಿಸಿರುವ ರವಿತೇಜ
ನಿರ್ದೇಶಕ ಮಾರುತಿ ಮತ್ತು ನಿರ್ದೇಶಕ ನಕ್ಕಿನಿ ತ್ರಿನಾಥ ರಾವ್ ಅವರುಗಳು ರವಿತೇಜ ಗೆ ಕತೆ ಹೇಳಿದ್ದರು. ರವಿತೇಜ ಸಹ ಒಪ್ಪಿದ್ದರು, ಆದರೆ ಸಂಭಾವನೆ ವಿಷಯದಲ್ಲಿ ರವಿತೇಜ ಅಸಮಾಧಾನಗೊಂಡು ಸಿನಿಮಾಗಳಿಂದ ಹಿಂದೆ ಸರಿದಿದ್ದಾರೆ.

ಸಿನಿಮಾ ಹಿಟ್ಗಾಗಿ ಕಾಯುತ್ತಿರುವ ರವಿತೇಜ
ಸಂಭಾವನೆ ಏರಿಸಿಕೊಳ್ಳಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿರುವ ರವಿತೇಜ, ಕ್ರ್ಯಾಕ್ ಸಿನಿಮಾದ ಮೇಲೆ ಭರವಸೆ ಇಟ್ಟು ಕೂತಿದ್ದಾರೆ. ಕ್ರ್ಯಾಕ್ ಸಿನಿಮಾ ಹಿಟ್ ಆದರೆ, ಪ್ರಸ್ತುತ ಇರುವ ಸಂಭಾವನೆ ಮೇಲೆ 35-40% ಹೆಚ್ಚುವರಿ ಸಂಭಾವನೆಗೆ ಬೇಡಿಕೆ ಇಡಲಿದ್ದಾರೆ.

ಶ್ರುತಿ ಹಾಸನ್ ನಾಯಕಿ
ರವಿತೇಜ ನಟನೆಯ ಕ್ರ್ಯಾಕ್ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ.ಜೊತೆಗೆ ವಿಜಯಲಕ್ಷ್ಮಿ ಶರತ್ಕುಮಾರ್, ಸಮುದ್ರಕಿಣಿ ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾವನ್ನು ಗೋಪಿಚಂದ್ ಮಲಿನೇನಿ ನಿರ್ದೇಶಿಸಿದ್ದಾರೆ. ನಿರ್ಮಾಣ ಬಿ.ಮಧು ಅವರದ್ದು.