Don't Miss!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರ್ಆರ್ಆರ್ ಅಭಿಮಾನಿಗಳಿಗೆ ಕಹಿ ಸುದ್ದಿ: ಸನಿಹದಲ್ಲಿಲ್ಲ ಸಿನಿಮಾ ಬಿಡುಗಡೆ
ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು ರಾಜಮೌಳಿ ನಿರ್ದೇಶಿಸುತ್ತಿರುವ ಆರ್ಆರ್ಆರ್ ಸಿನಿಮಾ.
ಜೂ.ಎನ್ಟಿಆರ್, ರಾಮ್ಚರಣ್ ತೇಜ ನಟಿಸುತ್ತಿರುವ ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ ನಿಜ, ಆದರೆ ಸಿನಿಮಾ ಬಿಡುಗಡೆ ಬಹಳ ತಡವಾಗಿಯೇ ಆಗಲಿದೆ.
'RRR' ಚಿತ್ರದ ಪ್ರಮುಖ ಆ್ಯಕ್ಷನ್ ದೃಶ್ಯ ಚಿತ್ರೀಕರಣಕ್ಕೆ ರಾಜಮೌಳಿ ತೆಗೆದುಕೊಂಡ ದಿನಗಳೆಷ್ಟು? ಇಲ್ಲಿದೆ ಮಾಹಿತಿ
ಹೌದು, ಸಿನಿಮಾವು 2021 ರ ಮಧ್ಯಭಾಗದಲ್ಲಿ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಅದು ಇನ್ನಷ್ಟು ತಡವಾಗಿ 2022 ರ ಜನವರಿ ತಿಂಗಳಿಗೆ ಹೋಗಿದೆ.
ಕೊರೊನಾವು ಆರ್ಆರ್ಆರ್ ಸಿನಿಮಾಕ್ಕೆ ಬಹುದೊಡ್ಡ ಅಡ್ಡಗಾಲಾಗಿತ್ತು. ಕೊರೊನಾ ಕಾರಣದಿಂದಾಗಿ ಆರು ತಿಂಗಳಿಗೂ ಹೆಚ್ಚು ಕಾಲ ಸಿನಿಮಾದ ಚಿತ್ರೀಕರಣ ಬಂದ್ ಆಗಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಿದೆಯಾದರೂ ಈ ಮಲ್ಟಿಸ್ಟಾರರ್ ಸಿನಿಮಾ ಬೇಗನೇ ಪೂರ್ತಿಗೊಳ್ಳುವುದಿಲ್ಲವಂತೆ.
ರಾಜಮೌಳಿ, ನಿಖರತೆ ಬೇಡುವ ನಿರ್ದೇಶಕ. ಸಂತೆಗೆ ಮೊಳ ನೇಯ್ದಂತೆ ಆತುರದಲ್ಲಿ ಚಿತ್ರೀಕರಣ ಮುಗಿಸುವುದು ಅವರ ಸ್ಟೈಲ್ ಅಲ್ಲ. ಬಾಹುಬಲಿಯ ಎರಡು ಭಾಗ ನಿರ್ದೇಶಿಸಿ ಬಿಡುಗಡೆ ಗೊಳಿಸಲು ಒಟ್ಟು ನಾಲ್ಕು ವರ್ಷ ಸಮಯ ತೆಗೆದುಕೊಂಡಿದ್ದರು ರಾಜಮೌಳಿ.
ಬಾಲಿವುಡ್ ಸ್ಟಾರ್ ನಟ ಆರ್ಆರ್ಆರ್ ಸಿನಿಮಾದಲ್ಲಿ?
ರಾಜಮೌಳಿ ಸಿನಿಮಾದಗಳಲ್ಲಿ ಚಿತ್ರೀಕರಣಕ್ಕೆ ಹಿಡಿದಕ್ಕಿಂತಲೂ ಹೆಚ್ಚು ಶ್ರಮ ಮತ್ತು ಸಮಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಹಿಡಿಯುತ್ತದೆ. ಗ್ರಾಫಿಕ್ಸ್, ವಿಎಫ್ಕ್ಸ್, ಸೌಂಡ್ ಮಿಕ್ಸಿಂಗ್, ಗ್ರೀನ್ ಮ್ಯಾಟ್ ಶೂಟಿಂಗ್, ಎಡಿಟಿಂಗ್, ಡಬ್ಬಿಂಗ್ ಎಲ್ಲದಕ್ಕೂ ಸಾಕಷ್ಟು ಸಮಯ ಹಿಡಿಯುತ್ತದೆ. ಇವುಗಳ ನಂತರ ಪ್ರಚಾರಕ್ಕೂ ಸಮಯ ಬೇಕು.
Recommended Video
ಹಾಗಾಗಿ ಸಿನಿಮಾವನ್ನು ಆತುರಾತರವಾಗಿ ಮುಗಿಸಿ ಬಿಡುಗಡೆ ಮಾಡುವ ಬದಲಿಗೆ 2022 ರ ಸಂಕ್ರಾಂತಿ ವೇಳೆಗೆ ಬಿಡುಗಡೆ ಮಾಡುವ ಯೋಜನೆಯನ್ನು ಹಾಕಿದ್ದಾರಂತೆ ರಾಜಮೌಳಿ.