Don't Miss!
- Technology SmartGlass: ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್ ಬಳಕೆದಾರರು ಇನ್ಮುಂದೆ ವಿಡಿಯೋ ಕಾಲ್ ಮಾಡಬಹುದು!
- Automobiles ಕ್ರ್ಯಾಶ್ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ ಮಧ್ಯಮ ವರ್ಗದ ಮೆಚ್ಚಿನ ಸ್ವದೇಶಿ ಕಾರು
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- News ಮೋದಿ ಯಾರ ಪರ; ಪ್ರಧಾನಿಯಾಗಿ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದು ಯಾರದ್ದು? ಸಿದ್ದರಾಮಯ್ಯ
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Lifestyle Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಯ್ಫ್ರೆಂಡ್ ಜೊತೆ ಬ್ರೇಕಪ್? ಶ್ರುತಿ ಹಾಸನ್ ಪರೋಕ್ಷವಾಗಿ ಹೇಳಿದ್ದೇನು?
ಒಂದ್ಕಡೆ ಚಿರಂಜೀವಿ ಮತ್ತೊಂದ್ಕಡೆ ಬಾಲಕೃಷ್ಣ ಇಬ್ಬರು ಸ್ಟಾರ್ ಹೀರೊಗಳಿಗೆ ಶ್ರುತಿ ಹಾಸನ್ ನಾಯಕಿಯಾಗಿ ನಟಿಸ್ತಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಎರಡೂ ಸಿನಿಮಾಗಳು ಒಂದು ದಿನದ ಅಂತರದಲ್ಲಿ ತೆರೆಗೆ ಬರ್ತಿದೆ. ಇದೆಲ್ಲದರ ನಡುವೆ ಶ್ರುತಿ ಲವ್ ಬ್ರೇಕಪ್ ಆಯಿತು ಎನ್ನುವ ಸುದ್ದಿ ಹರಿದಾಡ್ತಿತ್ತು.
ನಟ, ನಟಿಯರು ಮಾಡುವ ಪೋಸ್ಟ್ಗಳಿಗೆ ಒಬ್ಬೊಬ್ಬರು ಒಂದೊಂದು ಅರ್ಥ ಕಲ್ಪಿಸಿಕೊಂಡು ಏನೇನೋ ಚರ್ಚೆ ಹುಟ್ಟಾಕುತ್ತಾರೆ. ಇತ್ತೀಚೆಗೆ ಶ್ರುತಿ ಹಾಸನ್ ಮಾಡಿದ್ದ ಅದೊಂದು ಪೋಸ್ಟ್ ವೈರಲ್ ಆಗಿತ್ತು. ಶ್ರುತಿ ಸದ್ಯ ಸಂತನು ಹಜಾರಿಕ ಎಂಬುವವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರು ಲಿವ್ ಇನ್ ರಿಲೇಶನ್ಶಿಪ್ನಲ್ಲಿ ಇದ್ದಾರೆ. ಸಂತನು ಡೂಡಲ್ ಮೇಕರ್ ಆಗಿದ್ದಾರೆ. ಆದರೆ ಇದ್ದಕ್ಕಿದಂತೆ ಇಬ್ಬರ ಲವ್ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಹರಿದಾಡೋಕೆ ಶುರುವಾಗಿತ್ತು. ಇತ್ತೀಚೆಗೆ ಕಮಲ್ ಮಗಳು ಮಾಡಿದ ಅದೊಂದು ಪೋಸ್ಟ್ ಇದಕ್ಕೆಲ್ಲಾ ಕಾರಣವಾಗಿತ್ತು.
"ನನ್ನ ಜೊತೆ ನಾನು ಇದ್ದರೆ ಸಂತೋಷ. ನನ್ನ ಅಮೂಲ್ಯವಾದ ಸಮಯವನ್ನು, ಒಂಟಿತನವನ್ನು ಪ್ರೀತಿಸುತ್ತಿದ್ದೇನೆ" ಎಂದು ಇತ್ತೀಚೆಗೆ ಬರೆದುಕೊಂಡಿದ್ದರು. ಅದನ್ನು ನೋಡಿ ಶ್ರುತಿ ಹಾಸನ್ ಲವ್ ಬ್ರೇಕಪ್ ಆಗಿದೆ. ಅದನ್ನು ಈ ರೀತಿ ಪರೋಕ್ಷವಾಗಿ ಹೇಳಿದ್ದಾರೆ ಎನ್ನುವ ಚರ್ಚೆ ನಡೆದಿತ್ತು. ಇದೀಗ ಅದೆಲ್ಲಾ ಸುಳ್ಳು ಎನ್ನುವಂತೆ ಮೊತ್ತೊಂದು ಪೋಸ್ಟ್ ಮಾಡಿದ್ದಾರೆ. ಬಾಯ್ಫ್ರೆಂಡ್ ಸಂತನು ಮುತ್ತು ಕೊಡುತ್ತಿರುವ ಫೋಟೊ ಶೇರ್ ಮಾಡಿ "ನಾನು ಯಾವಾಗಲೂ ಬಯಸುವುದು ಇದನ್ನೇ" ಎಂದು ಇನ್ಸ್ಟಾ ಸ್ಟೋರಿಯಲ್ಲಿ ಹಾಕಿದ್ದಾರೆ. ಅಲ್ಲಿಗೆ ಎಲ್ಲಾ ವದಂತಿಗೂ ತೆರೆ ಬಿದ್ದಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ ಶ್ರುತಿ ಹಾಸನ್, "ಸಂತನು ನನ್ನ ಬೆಸ್ಟ್ ಫ್ರೆಂಡ್, ಆತ ಬಹಳ ಅದ್ಭುತ ಹಾಗೂ ಪ್ರತಿಭಾನ್ವಿತ ವ್ಯಕ್ತಿ, ಇಂತಹ ವ್ಯಕ್ತಿಗಳು ಸಿಗುವುದು ಅಪರೂಪ" ಎಂದು ಹೇಳಿಕೊಂಡಿದ್ದರು. ಮೆಗಾಸ್ಟಾರ್ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಹಾಗೂ ಬಾಲಕೃಷ್ಣ ನಟನೆಯ 'ವೀರಸಿಂಹ ರೆಡ್ಡಿ' ಚಿತ್ರಗಳಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. 2 ಸಿನಿಮಾಗಳು ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬರ್ತಿದೆ. ಇನ್ನು ಪ್ರಭಾಸ್ ಜೊತೆ 'ಸಲಾರ್' ಚಿತ್ರದಲ್ಲೂ ಮಿಂಚಿದ್ದಾರೆ.
ನಯನತಾರಾ ಕಾಲೆಳೆದಿದ್ದ ಜೂ ಎನ್ಟಿಆರ್: ಘಟನೆ ನೆನಪಿಸಿಕೊಂಡ ನಟಿ