Just In
- 26 min ago
2 ದಿನ ಮುಂಚೆ ವರಲಕ್ಷ್ಮಿ ಬರ್ತಡೇಗೆ ವಿಶ್ ಮಾಡಿದ ಕೀರ್ತಿ ಸುರೇಶ್, ನಟಿ ಕೊಟ್ಟ ಪ್ರತಿಕ್ರಿಯೆ ಏನು?
- 46 min ago
ಚಿರಂಜೀವಿ 'ಆಚಾರ್ಯ' ಸೆಟ್ಗೆ ಭೇಟಿ ನೀಡಿದ ಸರ್ಪ್ರೈಸ್ ಅತಿಥಿ
- 49 min ago
ಮತ್ತೆ ಹೃದಯ ಕದ್ದ ಸಾಯಿ ಪಲ್ಲವಿ: ಎರಡೇ ದಿನಕ್ಕೆ ಹಾಡಿನ ವಿಡಿಯೋ ವೈರಲ್
- 1 hr ago
ನಿಂತು ಹೋಗಿದ್ದ ಸುಶಾಂತ್ ಸಿಂಗ್-ರಿಯಾ ಚಕ್ರವರ್ತಿ ಸಿನಿಮಾ ಮತ್ತೆ ಪ್ರಾರಂಭ!
Don't Miss!
- News
ಬ್ರಿಟನ್ 'ಗುಮ್ಮ'ಕ್ಕೂ ಮದ್ದು: ಖುಷಿ ಸುದ್ದಿ ನೀಡಿದ ಭಾರತ್ ಬಯೋಟೆಕ್
- Finance
ನಿಮ್ಮ ಆಧಾರ್ ಸಂಖ್ಯೆ ಎಲ್ಲೆಲ್ಲಿ ಬಳಕೆಯಾಗುತ್ತಿದೆ? ಪತ್ತೆ ಹಚ್ಚಿ
- Sports
ಮೊಹಾಲಿಯಲ್ಲಿ ಐಪಿಎಲ್ ಪಂದ್ಯಗಳು ನಡೆಯದ್ದಕ್ಕೆ ಕಾರಣ ಬಹಿರಂಗ
- Automobiles
ಕಾಡಾನೆ ದಾಳಿ ಸಂಭವಿಸುವುದರಿಂದ ಪಾರಾದ ಜನಪ್ರಿಯ ಗಾಯಕ
- Education
Karnataka SSLC Exam 2021 Time Table: ಎಸ್ಎಸ್ಎಲ್ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
- Lifestyle
ಮಾರ್ಚ್ ನಲ್ಲಿದೆ ಕಷ್ಟ ನಿವಾರಿಸುವ ಫಾಲ್ಗುಣ ಅಮವಾಸ್ಯೆ, ಯಾಕಿಷ್ಟು ಮಹತ್ವ ಗೊತ್ತಾ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಸಲಾರ್' ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ
ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ತಯಾರಾಗುತ್ತಿರುವ 'ಸಲಾರ್' ಚಿತ್ರದ ಮೊದಲ ಹಂತದ ಶೂಟಿಂಗ್ ಮುಕ್ತಾಯವಾಗಿದೆ. ಸಲಾರ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು, ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಕಳೆದ ತಿಂಗಳ ಕೊನೆಯಲ್ಲಿ ಸಲಾರ್ ಚಿತ್ರೀಕರಣ ಆರಂಭವಾಗಿತ್ತು. ಗೋದಾವರಿ ಕಣಿವೆಯಲ್ಲಿ ಸಲಾರ್ ಶೂಟಿಂಗ್ ನಡೆದಿದ್ದು, ಒಂಭತ್ತು ದಿನಗಳ ಮೊದಲ ಶೆಡ್ಯೂಲ್ ಫೆಬ್ರವರಿ 8 ರಂದು ಪೂರ್ಣಗೊಂಡಿದೆ. ಮೊದಲ ಹಂತದ ಚಿತ್ರೀಕರಣದಲ್ಲಿ ಪ್ರಭಾಸ್ ಅವರ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಶಾಂತ್ ನೀಲ್ 'ಸಲಾರ್'ಗೆ ವಿಲನ್ ಆದ ಕನ್ನಡಿಗ; ಪ್ರಭಾಸ್ ಎದುರು 'ಭಜರಂಗಿ' ನಟನ ಅಬ್ಬರ
ಮೊದಲ ಹಂತದ ಶೂಟಿಂಗ್ನಲ್ಲಿ ಪ್ರಭಾಸ್, ಶ್ರುತಿ ಹಾಸನ್ ಭಾಗಿಯಾಗಿದ್ದರು. ಜನವರಿ 15ನೇ ತಾರೀಖು ಸಲಾರ್ ಚಿತ್ರದ ಮುಹೂರ್ತ ಹೈದರಾಬಾದ್ನಲ್ಲಿ ನೆರವೇರಿತ್ತು. ಕೆಜಿಎಫ್ ನಟ ಯಶ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜನವರಿ 29 ರಿಂದ ಚಿತ್ರೀಕರಣ ಆರಂಭವಾಗಿತ್ತು.
ಜನವರಿ 31ರಂದು ಶ್ರುತಿ ಹಾಸನ್ ಹುಟ್ಟುಹಬ್ಬದ ಪ್ರಯುಕ್ತ ಸಲಾರ್ ಚಿತ್ರದ ನಾಯಕಿ ಎಂದು ಅಧಿಕೃತವಾಗಿ ಪ್ರಕಟಿಸಲಾಗಿತ್ತು. ಚಿತ್ರದ ವಿಶೇಷ ಹಾಡೊಂದರಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಕರೆತರಲು ಮಾತುಕತೆ ನಡೆಸಲಾಗುತ್ತಿದೆಯಂತೆ.
ಪ್ರಭಾಸ್ 'ಸಲಾರ್' ಸಿನಿಮಾದ ವಿಶೇಷ ಹಾಡಿನಲ್ಲಿ ಬಾಲಿವುಡ್ ಖ್ಯಾತ ನಟಿ
ಸಲಾರ್ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದ್ದು, ಕನ್ನಡ ನಟ ಮಧು ಗುರುಸ್ವಾಮಿ ಪ್ರಮುಖ ಪಾತ್ರಕ್ಕಾಗಿ ಆಯ್ಕೆಯಾಗಿದ್ದಾರೆ.