Don't Miss!
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಯಲ್ ರಿಯಾಲಿಟಿ ಶೋ ಶಭಾಷ್ ಇಂಡಿಯಾ
ಕನ್ನಡದ ಕಿರುತೆರೆ ಮಾಧ್ಯಮದಲ್ಲಿ ರಿಯಾಲಿಟಿ ಶೋಗಳಿಗೆ ಸಂಬಂಧಿಸಿದಂತೆ ಹೊಸತನ ಹುಟ್ಟುಹಾಕಿದ ಘನತೆ ಜೀ ಕನ್ನಡ ವಾಹಿನಿಗೆ ಸಲ್ಲುತ್ತದೆ. ಇದೀಗ 'ಶಭಾಷ್ ಇಂಡಿಯಯಾ' ಎಂಬ ನೂತನ ರಿಯಲ್ ರಿಯಾಲಿಟಿ ಶೋ ನಿರ್ಮಿಸಿದ್ದು, ಈ ಕಾರ್ಯಕ್ರಮ ಜನವರಿ 3ರಿಂದ ಸೋಮವಾರ ಮತ್ತು ಮಂಗಳವಾರ ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ನೈಜ ಘಟನೆಗಳನ್ನು ಆಧರಿಸಿದ ಈ ಕಾರ್ಯಕ್ರಮದಲ್ಲಿ ಅಪರೂಪ ಹಾಗೂ ಆಶ್ಚರ್ಯಕರವಾದ ಸಾಧನೆ ಹಾಗೂ ಸಾಹಸ ಮಾಡುತ್ತಿರುವಂತಹ ವ್ಯಕ್ತಿಗಳನ್ನು ಪರಿಚಯಿಸಲಾಗುವುದು. ದೇಶದಲ್ಲಿ ಇಂತಹ ಸಾಹಸ ಮಾಡಿರುವವರ ದೊಡ್ಡ ಪಟ್ಟಿಯೇ ಇದ್ದು, ಅಂತಹ ಕಣ್ಮಣಿಗಳನ್ನು ಜನತೆಗೆ ಪರಿಚಯಿಸುವ ಉದ್ದೇಶವನ್ನು 'ಶಭಾಷ್ ಇಂಡಿಯಾ' ಹೊಂದಿದೆ.
ಈ ಸೋಮವಾರ ಜೋದ್ಪುರದ ಸಾಹಸಿಯನ್ನು ಪರಿಚಯಿಸಲಾಯಿತು. ಅಲ್ಲಿನ ಗೋವರ್ ಆಜಾದ್ ಆಸಿಡ್ನಲ್ಲಿ ಸ್ನಾನ ಮಾಡಲಿರುವ ರೋಚಕ ದೃಶ್ಯಗಳನ್ನು ಈ ಸಂಚಿಕೆಯಲ್ಲಿ ವೀಕ್ಷಿಸಿದ ಪ್ರೇಕ್ಷಕರು ಪುಳಕಗೊಂಡಿದ್ದಾರೆ. ಜೊತೆಗೆ 45 ಸಾವಿರ ಕೆಜಿ ತೂಕದ ವಿಮಾನವನ್ನು ರಾಜಸ್ಥಾನದ ಮಹೇಂದ್ರ ಜೋಷಿ ತನ್ನ ಕೂದಲಿಗೆ ಕಟ್ಟಿ ಎಳೆಯುವ ಸಾಹಸ ವೂ ಪ್ರಸಾರವಾಯಿತು.
ನಮ್ಮ ಕೊಪ್ಪಳದ ಸಾಹಸಿ ಗಣೇಶ್ ಬೈಕ್ ಮೇಲೆಯೇ ತನ್ನ ನಿತ್ಯ ಕಾರ್ಯಗಳನ್ನು ಮಾಡುವ ರೋಮಾಂಚಕ ದೃಶ್ಯಗಳನ್ನು ಪ್ರೇಕ್ಷಕರು ಸವಿದಿದ್ದಾರೆ. 'ಶಭಾಷ್ ಇಂಡಿಯಾ' ಕಾರ್ಯಕ್ರಮವನ್ನು ಚಿತ್ರನಟ ರಾಜೇಶ್ ನಿರೂಪಿಸಲಿದ್ದಾರೆ. ಇದಿಷ್ಟೇ ಅಲ್ಲದೆ ಇನ್ನೂ ಒಂದೆರಡು ನೂತನ ಕಾರ್ಯಕ್ರಮಗಳು ಜನವರಿ ತಿಂಗಳಲ್ಲಿಯೇ ಜೀ ಕನ್ನಡದಲ್ಲಿ ತೆರೆಕಾಣಲಿವೆ ಎಂದು ವಾಹಿನಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. [ರಿಯಾಲಿಟಿ ಶೋ]