Don't Miss!
- News ನೇಹಾ ಹಿರೇಮಠ್ ಹತ್ಯೆ; ಕಾಣದ ಕೈಗಳಿಂದ ಕೊಲೆ ಆರೋಪಿ ರಕ್ಷಣೆ ಎಂದ ಜೆಡಿಎಸ್
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಣ್ಣೀರ ಕೋಡಿ ಹರಿಸುತ್ತಿರುವ ಕನ್ನಡ ಟಿವಿಗಳು!
ಮೂರ್ಖರ ಪೆಟ್ಟಿಗೆ ಇದೀಗ ಪ್ರೇಕ್ಷಕರ ಪಾಲಿಗೆ ಕಣ್ಣೀರ ಪೆಟ್ಟಿಗೆಯಾಗಿದೆ! ಸಲಿಂಗಕಾಮ, ವ್ಯಭಿಚಾರ, ಕಚೇರಿಯಲ್ಲಿ ಲೈಂಗಿಕ ಕಿರುಕುಳ, ಹದಿಹರಯದ ಸಮಸ್ಯೆಗಳು, ಏಡ್ಸ್ ,ಪತಿಯ ದಬ್ಬಾಳಿಕೆಯಂತಹ ಸಮಸ್ಯೆಗಳು ಸಂಜೆಯಾಗುತ್ತಿದ್ದಂತೆ ಪ್ರಸಾರವಾಗಲು ಪ್ರಾರಂಭಿಸುತ್ತವೆ. ಒಂದಾದ ನಂತರ ಒಂದು ರಿಯಾಲಿಟಿ ಕಾರ್ಯಕ್ರಮಗಳ ನಡುವೆ ಪೈಪೋಟಿ ಆರಂಭವಾಗುತ್ತದೆ.
ಸಂಜೆ 7 ಗಂಟೆಯಾಗುತ್ತಿದ್ದಂತೆ ಜೀ ಕನ್ನಡಲ್ಲಿ ಮಾಳವಿಕಾ ನಡೆಸಿಕೊಡುವ 'ಬದುಕು ಜಟಕಾ ಬಂಡಿ' ಗೋಳಿನ ಕತೆಗಳನ್ನು ಬಿಚ್ಚ್ಚಿಡುತ್ತದೆ. ಆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸುವರ್ಣ ವಾಹಿನಿ ಚಾಲು ಮಾಡಿದರೆ 'ಇದು ಕತೆಯಲ್ಲ ಜೀವನ' ಶುರುವಾಗಿರುತ್ತ್ತದೆ. ಇದನ್ನು ಹಿರಿಯ ನಟಿ ಲಕ್ಷ್ಮಿ ನಡೆಸಿಕೊಡುತ್ತಾರೆ.
ಇದಾದ ಬಳಿಕ ಕಸ್ತೂರಿ ವಾಹಿಯಲ್ಲಿ ರಾತ್ರಿ 9ರಿಂದ 10 ಗಂಟೆಯವರೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ನಡೆಸಿಕೊಡುವ ಮತ್ತೊಂದು ಕಣ್ಣೀರ ಕಾರ್ಯಕ್ರಮ 'ಇದು ಯಾರು ಬರೆದ ಕತೆಯೋ' ಪ್ರಾರಂಭವಾಗುತ್ತದೆ. ಮುಖ್ಯವಾಗಿ ಮಹಿಳೆಯರು ಈ ಕಾರ್ಯಕ್ರಮಗಳ ಪ್ರಮುಖ ಪ್ರೇಕ್ಷಕರು.
ಕನ್ನ್ನಡ ಟಿವಿ ವಾಹಿನಿಗಳಲ್ಲಿ ಮೊದಲು ಕರುಣಾರಸ ಆನಂತರವೇನಿದ್ದರೂಹಾಸ್ಯ ರಸ ಪ್ರಸಾರವಾಗುತ್ತಿದೆ. ಸುವರ್ಣ ವಾಹಿನಿಯಲ್ಲಿ ರಾತ್ರಿ 10ಕ್ಕೆ ಹಾಸ್ಯ ಧಾರಾವಾಹಿ 'ಎಸ್ಸೆಸ್ಸೆಲ್ಸಿ ನನ್ ಮಕ್ಕಳು' ಪ್ರಸಾರವಾಗುತ್ತದೆ. ಪ್ರೇಕ್ಷಕರು ನಕ್ಕುನಲಿಯಲು ಮನೆಮಂದಿಯಲ್ಲಾ ಕೂತು ನೋಡಬೇಕಾದರೆ 10.30ರವರೆಗೂ ಕಾಯಬೇಕು. ಆಗ ಜೀ ಕನ್ನಡದಲ್ಲಿ 'ಪಾರ್ವತಿ ಪರಮೇಶ್ವರ' ಪ್ರತ್ಯಕ್ಷವಾಗುವ ಸಮಯ!
ಒಟ್ಟಿನಲ್ಲಿ ಮೂರು ಗಂಟೆಗಳ ಕಾಲ ಕಣ್ಣೀರ ಕತೆಗಳು ನಂತರ ನಕ್ಕು ನಲಿಯಲು ಒಂದು ಗಂಟೆ! ಹೀಗಿದೆ ಕನ್ನಡ ಟಿವಿ ಕಾರ್ಯಕ್ರಮಗಳ ಪಟ್ಟಿ. ಪ್ರೇಕ್ಷಕರು 'ಇದು ಯಾರು ಬರೆದ ಕತೆಯೋ...ನನಗಾಗಿ ಬಂದ ವ್ಯಥೆಯೋ' ಎಂದು ಪರಿತಪಿಸುವಂತಾಗಿದೆ. ದಯವಿಟ್ಟು ಈ ರೀತಿಯ ಕಾರ್ಯಕ್ರಮಗಳ ಪ್ರಸಾರವನ್ನು ಕಡಿಮೆ ಮಾಡಿ.