ಏಳು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿದ ದರ್ಶನ್ 'ಸಾರಥಿ'

ಈ ಚಿತ್ರದಲ್ಲಿನ ಅಭಿನಯಕ್ಕಾಗಿ ದರ್ಶನ್ ಅವರು 'ಅತ್ಯುತ್ತಮ ನಟ' ಪ್ರಶಸ್ತಿ ಭಾಜನರಾಗಿದ್ದಾರೆ. ಉಳಿದಂತೆ 'ಅತ್ಯುತ್ತಮ ನಿರ್ದೇಶಕ', 'ಅತ್ಯುತ್ತಮ ಚಿತ್ರಕಥೆ' ವಿಭಾಗಳಲ್ಲಿ ದಿನಕರ್ ತೂಗುದೀಪ್ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. 'ಅತ್ಯುತ್ತಮ ಕಲೆ' ಪ್ರಶಸ್ತಿ ಈಶ್ವರಿ ಕುಮಾರ್ ಅವರ ಕೈ ಸೇರಿದೆ.
ಉಳಿದಂತೆ 'ಅತ್ಯುತ್ತಮ ಸಾಹಸ' ಪ್ರಶಸ್ತಿ ರವಿವರ್ಮ, 'ಅತ್ಯುತ್ತಮ ಹಾಸ್ಯನಟ' ಪ್ರಶಸ್ತಿಗೆ ಬುಲೆಟ್ ಪ್ರಕಾಶ್ ಅವರ ಪಾಲಾಗಿದೆ. 2011ರ 'ಅತ್ಯುತ್ತಮ ಚಿತ್ರ'ವಾಗಿಯೂ 'ಸಾರಥಿ' ಆಯ್ಕೆಯಾಗಿದೆ. ಅಂದಹಾಗೆ ದರ್ಶನ್ ತಮ್ಮ ಅತ್ಯುತ್ತಮ ನಟ ಪ್ರಶಸ್ತಿಯನ್ನು ತನ್ನ ಅಭಿಮಾನಿಗಳಿಗೆ ಅರ್ಪಿಸಿ ಅಭಿಮಾನಿಗಳ ಮೇಲಿನ ತಮ್ಮ ಹೃದಯ ವೈಶಾಲ್ಯವನ್ನು ಮೆರೆದಿದ್ದಾರೆ. (ಒನ್ಇಂಡಿಯಾ ಕನ್ನಡ)
More from Filmibeat
English summary
Challenging Star Darsha's lead Kannada movie Sarathi bagging top 7 honors including best film, best director, best actor, best comedy actor awards in "TV 9 Sandalwood awards 2012".


Click it and Unblock the Notifications











