Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋಟ್ಯಾಧಿಪತಿ ವಿರುದ್ದ ಆಖಾಡಕ್ಕೆ ಇಳಿದ ಉದಯಟಿವಿ
ಈ ಕಾರ್ಯಕ್ರಮದ ಮೂಲಕ ಸುವರ್ಣ ವಾಹಿನಿಯ ಟಿಆರ್ಪಿ ಗಣನೀಯವಾಗಿ ಹೆಚ್ಚುವುದರಲ್ಲಿ ಸಂಶಯವೇ ಇಲ್ಲ ಎನ್ನುವುದು ಬಲ್ಲವರ ಮಾತು. ಆದರೆ ಕಿರುತೆರೆಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ಉದಯವಾಹಿನಿ ಇದಕ್ಕೆ ಇದೇ ರೀತಿಯ ಇನ್ನೊಂದು ಕಾರ್ಯಕ್ರಮದ ಮೂಲಕ ತಿರುಗೇಟು ನೀಡಲು ಸಿದ್ದವಾಗಿದೆ.
ವಿವೇಲ್ ಅರ್ಪಿಸುವ "ಕೈಯಲ್ಲಿ ಕೋಟಿ, ಹೇಳ್ಬಿಟ್ಟು ಹೊಡೀರಿ' ಎನ್ನುವ ಶೀರ್ಷಿಕೆಯಡಿಯಲಿ ಹೊಸ ಕಾರ್ಯಕ್ರಮ ಆರಂಭವಾಗಲಿದೆ. "ಪ್ರಶ್ತ್ನೆಗೆ ಮುನ್ನವೇ ಒಂದು ಕೋಟಿ, ಜೋಡಿಯಾಗಿ ಬನ್ನಿ, ಏಳು ಪ್ರಶ್ತ್ನೆ ಉತ್ತರಿಸಿ ಒಂದು ಕೋಟಿ ಗೆಲ್ಲಿ" ಎನ್ನುವುದು ಈ ಕಾರ್ಯಕ್ರಮದ ಪಂಚಿಂಗ್ ಡೈಲಾಗ್, ಹಾಗೂ ಕಾರ್ಯಕ್ರಮದ ನಿರೂಪಕರು ನವರಸನಾಯಕ ಜಗ್ಗೇಶ್.
ಆದರೆ ಈ ಶೋ ಯಾವಾಗ ಆರಂಭವಾಗಲಿದೆ ಎನ್ನುವುದನ್ನು ಉದಯವಾಹಿನಿ ಸ್ಪಷ್ಟ ಪಡಿಸಲಿಲ್ಲ. ಅತಿ ಶೀಘ್ರದಲ್ಲೇ.. ಎಂದು ಗಂಟೆಗೆ ಮೂರುಬಾರಿಯಂತೆ ಜಾಹೀರಾತು ಪ್ರಕಟಿಸುತ್ತಿದೆ.
ಒಟ್ಟಿನಲ್ಲಿ ಸುವರ್ಣವಾಹಿನಿ ಪ್ರೈಮ್ ಟೈಮ್ ಎಂಟು ಗಂಟೆಗೆ ಈ ಕಾರ್ಯಕ್ರಮ ಆರಂಭಿಸಲಿದೆ. ಅದೇ ಸಮಯಕ್ಕೆ ಉದಯವಾಹಿನಿ ಕೂಡ ಕಾರ್ಯಕ್ರಮ ಆರಂಭಿಸಿ ತನ್ನ ಜನಪ್ರಿಯತೆಗೆ ಧಕ್ಕೆ ಬರದಂತೆ ನೋಡಿಕೊಂಡರೆ ಉದಯ ಮತ್ತು ಸುವರ್ಣ ವಾಹಿನಿಯ ನಡುವೆ ಹಿತಕರ ಪೈಪೋಟಿಗೆ ಭರ್ಜರಿಯಾಗಿ ವೇದಿಕೆಯಾಗಲಿದೆ.
ನಿರೂಪಣೆಯ ವಿಷಯದಲ್ಲಿ ಪುನೀತ್ ರಾಜಕುಮಾರ್ ಅವರ ಜನಪ್ರಿಯತೆ ಜಗ್ಗೇಶ್ ಗಿಂತ ಹೆಚ್ಚು ಎನ್ನುವುದು ಎಲ್ಲರೂ ಒಪ್ಪಿಕೊಳ್ಳಬೇಕಾದ ವಿಚಾರ. ಆದರೆ ಎರಡೂ ಶೋಗಳಲ್ಲಿ ಬರುವುದು ಹಣ..ಹಣ.. ಹಣಕ್ಕೆ ಯಾವ ಭೇದಭಾವವಿಲ್ಲ. ಯಾರೂ ಕೊಟ್ಟರೂ, ಎಲ್ಲಿ ಗೆದ್ದರೂ ದುಡ್ಡು ದುಡ್ಡೇ..ವೀಕ್ಷಕರಿಗಂತೂ ಒಳ್ಳೆ ಅವಕಾಶ.
ದುಡ್ಡೇ ದೊಡ್ಡಪ್ಪ ಎನ್ನುವ ಈ ಕಾಲದಲ್ಲಿ ಎರಡು ವಾಹಿನಿಗಳ ಈ ಪೈಪೋಟಿ ನಡುವೆ ಇದರ ಲಾಭ ಪಡೆದವನೇ ಜಾಣ.