ಚಕ್ರವ್ಯೂಹದಲ್ಲಿ ನಿರ್ಮಾಪಕ ಮುನಿರತ್ನ ಬಾಯ್ಬಿಟ್ಟ ಸತ್ಯ

* ಗಾಡ್ ಫಾದರ್ ಚಿತ್ರವನ್ನು ಏಪ್ರಿಲ್ 27ರಂದೇ ಬಿಡುಗಡೆ ಮಾಡಬೇಕೆನ್ನುವ ಮಂಜು ನಿರ್ಧಾರದ ಹಿಂದೆ ಕಾಣದ ಕೈ ಕೆಲಸ ಮಾಡುತ್ತಿದೆ. ಇದು ಮಂಜು ಅವರ ಸ್ವಂತ ನಿರ್ಧಾರವಂತೂ ಅಲ್ಲವೇ ಅಲ್ಲ. ಆ ಕಾಣದ ಕೈ ಯಾವುದೆಂದು ನನಗೆ ತಿಳಿದಿದೆ, ಸಮಯ ಬಂದಾಗ ಬಾಯಿ ಬಿಡುವೆ.
* ಡಾ. ರಾಜ್, ಡಾ. ವಿಷ್ಣು ನಂತರ ಕನ್ನಡ ಚಿತ್ರರಂಗಕ್ಕೆ ಈಗ ಅಂಬರೀಶ್ ಅಣ್ಣ. ಏಪ್ರಿಲ್ 18ಕ್ಕೆ ಮೀಟಿಂಗ್ ಕರೆದಿದ್ದಾರೆ. ನೋಡೋಣ ಏನು ಆಗುತ್ತಂತ..
* ಅಣ್ಣಾಬಾಂಡ್ ಚಿತ್ರಕ್ಕೆ ಪೈಪೋಟಿ ನೀಡುವ ಉದ್ದೇಶ ನನ್ನದಲ್ಲ. ರಾಘವೇಂದ್ರ ರಾಜಕುಮಾರ್ ಫೋನ್ ಮಾಡಿದ್ರು, ಅಣ್ಣಾಬಾಂಡ್ ಮತ್ತು ನಿಮ್ಮ ಚಿತ್ರಕ್ಕೆ ಥಿಯೇಟರ್ ಕ್ಲ್ಯಾಶ್ ಆಗದ ಹಾಗೆ ನೋಡಿಕೊಳ್ಳಿ ಎಂದಿದ್ದಾರೆ.
* ನಟ ದಿಗಂತ್ ಮತ್ತು ಯಶ್ ನಿರ್ಮಾಪಕರ ಬಳಿ ದುಡ್ಡು ತೆಗೆದುಕೊಂಡು ಅವರಿಗೆ ಕಾಲ್ ಶೀಟ್ ನೀಡಿರಲಿಲ್ಲ. ಇಬ್ಬರನ್ನು ಕರೆದು ಬುದ್ದಿಮಾತು ಹೇಳಿದ್ದೇನೆ.
* ನಟಿ ನಿಖಿತಾ ಪ್ರಕರಣದಲ್ಲಿ ನಾನು ಅಂದು ನೀಡಿದ ಹೇಳಿಕೆಗೆ ಇಂದೂ ಬದ್ದನಾಗಿದ್ದೇನೆ. ಹಿಂದಕ್ಕೆ ತೆಗೆದುಕೊಳ್ಳುವ ಮಾತೇ ಇಲ್ಲ.
* ನಟಿ ನಿಖಿತಾಳನ್ನು ನನ್ನ ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ಕುಣಿಸಲು ನನಗೇನೂ ದರ್ದ್ ಇಲ್ಲ. ನನ್ನ ಯಾವುದೇ ಚಿತ್ರಕ್ಕೂ ನಿಖಿತಾರನ್ನು ಕರೆಸಿಕೊಳ್ಳುವ ಜರೂರತ್ ನನಗಿಲ್ಲ.
* ಕಠಾರಿವೀರ ಚಿತ್ರ ಖಂಡಿತ ಗೆಲ್ಲುತ್ತೆ ಎನ್ನುವ ವಿಶ್ವಾಸನನಗಿದೆ. ಒಂದು ವೇಳೆ ಈ ಚಿತ್ರ ಸೋತರೆ ಮತ್ತೆ ನಾನು ಚಿತ್ರ ನಿರ್ಮಿಸುವುದಿಲ್ಲ.


Click it and Unblock the Notifications











