Just In
Don't Miss!
- News
ನಮ್ಮನ್ನು ಬಿಟ್ಟು ಓಡುತ್ತಿವೆ 500 ನಕ್ಷತ್ರಗಳು, ವಿಜ್ಞಾನಿಗಳಿಂದ ರಹಸ್ಯ ರಿವೀಲ್..!
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭೀತಿ ಹುಟ್ಟಿಸುವ ಜ್ಯೋತಿಷಿಗಳಿಗೆ ಶಿಕ್ಷೆ ಏಕಿಲ್ಲ?
ದಢೂತಿ ಜ್ಯೋತಿಷಿಯೊಬ್ಬರಂತೂ ಟಿವಿಯಲ್ಲಿ ಕಾಣಿಸಿಕೊಂಡು ಜನರಲ್ಲಿ ಅನಗತ್ಯ ಭೀತಿ ಹರಡುತ್ತಿದ್ದಾರೆ. ಅವರ ಜಾಣ್ಮೆ ಎಷ್ಟಿದೆಯೆಂದರೆ ಅವರು ಮಾತನಾಡುವುದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ. ಭೂಕಂಪ, ಪ್ರವಾಹವೇ ಆಗುವುದೆಂದು ತಾನು ಹೇಳಲಾರೆ, ಆದರೆ ಏನೋ ಒಂದು ಆಗಲಿದೆ ಎಂದು ಅವರು ಹೇಳುತ್ತಾರೆ. ಮಾ.19ರಂದೇ ಸಂಭವಿಸುವುದೆಂದು ಹೇಳಲಾರೆ, ಮುಂದೆ ಯಾವಾಗಲೂ ಸಂಭವಿಸಬಹುದು ಎನ್ನುತ್ತಾರೆ.
ಮುಂದಕ್ಕೆ ಲಾರಿಯಡಿಗೆ ನಾಯಿ ಬಿದ್ದು ಸತ್ತರೂ 'ನೋಡಿ, ನಾನು ಹೀಗೆ ಹೇಳಿರಲಿಲ್ಲವೆ " ಎಂದು ಅವರು ಹೇಳಿದರೂ ಹೇಳಿಯಾರೆ. ಹಿಂದೊಮ್ಮೆ ಇದೇ ರೀತಿ ಟಿವಿ ಜ್ಯೋತಿಷಿಯೊಬ್ಬರು ಬಂಟ್ವಾಳಕ್ಕೆ ಬಂದಿದ್ದಾಗ ಮುಂದಿನ ತಿಂಗಳು ಇಂತಿಷ್ಟೇ ತಾರೀಕಿನಂದು ಪ್ರಳಯ ಸದೃಶ ಮಳೆ ಬಂದು ಬಂಟ್ವಾಳವು ಭೀಕರ ಪ್ರವಾಹಕ್ಕೆ ತುತ್ತಾಗಲಿದೆ ಎಂದು ಹೇಳಿಹೋಗಿದ್ದರು. ಆದರೆ ಅವರು ಹೇಳಿದ ದಿನದಂದು ಬಂಟ್ವಾಳದಲ್ಲಿ ಸುಡು ಬಿಸಿಲಿತ್ತು.
ಇದೀಗ ಜನತೆಯಲ್ಲಿ ಭಾರೀ ಭಯಭೀತಿ ಬಿತ್ತುವಲ್ಲಿ ಈ ಕಪಟ ಜ್ಯೋತಿಷಿಗಳು ಸಫಲರಾಗಿದ್ದಾರೆ. ಒಂದುವೇಳೆ ನಾಡಿದ್ದು ಏನೂ ಸಂಭವಿಸಲಿಲ್ಲವೆಂದಾದರೆ ಅವರು ಈ ರೀತಿ ಅನವಶ್ಯ ಭೀತಿ ಬಿತ್ತಿದ್ದಕ್ಕೆ ಸೂಕ್ತ ಶಿಕ್ಷೆ ಪಡೆಯಬೇಡವೆ? ಅವರೇನೋ ಮರುದಿನದಿಂದ ಬೇರೆಯೆ ತೆರನಾದ ನೆಪ ಹೇಳಲು ಆರಂಭಿಸಿಯಾರು. ಆದರೆ ಜನಗಳು ಅವರಿಗೆ ಪಾಠ ಕಲಿಸಲು ಈಗಲೆ ಸಿದಟಛಿರಾಗಿರುವುದೊಳಿತು. ಇಲ್ಲದಿದ್ದರೆ ಮುಂದೊಂದು ದಿನ ಹೊಸದಾದ ವಿಷಯ ಎತ್ತಿ ಅವರು ಜನರಲ್ಲಿ ಭೀತಿ ಸೃಷ್ಟಿಸತೊಡಗುತ್ತಾರೆ.