'ಬಿಗ್ ಬಾಸ್' ಬಗ್ಗೆ ಮೌನ ಮುರಿದ ನವರಸನಾಯಕ
ಕನ್ನಡದ ಒನ್ ಅಂಡ್ ಓನ್ಲಿ ರಿಯಾಲಿಟಿ ಶೋ ಎಂಬ ಅಗ್ಗಳಿಕೆಗೆ ಪಾತ್ರವಾಗಿರುವ 'ಬಿಗ್ ಬಾಸ್' ಸೀಸನ್ 2ಗೆ ವೇದಿಕೆ ಸಿದ್ಧವಾಗಿದೆ. ಈ ಬಾರಿಯೂ ಕಿಚ್ಚ ಸುದೀಪ್ ಈ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದು ಸುವರ್ಣ ವಾಹಿನಿಯಲ್ಲಿ ಮೂಡಿಬರಲಿರುವ ಶೋವನ್ನು ಕುತೂಹಲದಿಂದ ನಿರೀಕ್ಷಿಸುವಂತಾಗಿದೆ.
ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲಾ ಸ್ಪರ್ಧಿಗಳಿರುತ್ತಾರೆ ಎಂಬ ಬಗ್ಗೆ ಒಂದಷ್ಟು ಸೆಲೆಬ್ರಿಟಿಗಳ ಹೆಸರುಗಳು ಕೇಳಿಬಂದಿದ್ದವು. ಬಿಗ್ ಬಾಸ್ ಸ್ಪರ್ಧಿಗಳ ಸಂಭವನೀಯ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬಂದಿದ್ದ ಹೆಸರು ನವರಸನಾಯಕ ಜಗ್ಗೇಶ್. [ರಮ್ಯಾ ಅಭಿಮಾನಿಗಳಿಗೆ ಜಗ್ಗೇಶ್ ಟ್ವೀಟ್ ಏಟು]

ಜಗ್ಗೇಶ್ ಅವರು ಹೀಗೆ ಹೇಳಿದ್ದೇ ತಡ ಅವರ ಟ್ವಿಟ್ಟರ್ ಪೇಜ್ ನಲ್ಲಿ ಬಿಸಿಬಿಸಿ ಚರ್ಚೆಯೂ ಶುರುವಾಗಿದೆ. "ಹಣ ಮತ್ತು ಹೆಸರಿನ ಹಿಂದೆ ಬಿದ್ದವನಲ್ಲ ನಾನು. ಸತ್ತ ಮೇಲೂ ನಮ್ಮ ಹೆಸರು ಉಳಿಯುವಂತಿರಬೇಕು. ಸತ್ತ ಮೇಲೆ ಬದುಕಬೇಕು ಎಂದು ಅಣ್ಣಾವ್ರು ಹೇಳಿದ್ದರು. ಅವರ ಮಾತಿನಂತೆ ನಡೆಯುತ್ತಿದ್ದೇನೆ ಎಂದಿದ್ದಾರೆ ಜಗ್ಗೇಶ್.
ಇದೇ ಸಂದರ್ಭದಲ್ಲಿ ಕೊಂಚ ವೇದಾಂತಕ್ಕೆ ಹೊರಳಿರುವ ಜಗ್ಗೇಶ್ ಅವರು, "ದುಡ್ಡು ಪಾಯಿಖಾನೆ ತನಕ, ಕೀರ್ತಿ ಕೊನೆಯತನಕ" ಎಂದಿದ್ದಾರೆ. ಅಲ್ಲಿಗೆ ಜಗ್ಗೇಶ್ ಅವರು ರಿಯಾಲಿಟಿ ಶೋಗೆ ಅಡಿಯಿಡಲಿದ್ದಾರೆ ಎಂಬ ಸುದ್ದಿ 'ಮಠ' ಸೇರಿದಂತಾಗಿದೆ.
ಅಂದಹಾಗೆ ಈ ಹಿಂದೊಮ್ಮೆ ಜಗ್ಗೇಶ್ ಅವರು ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಗೆದ್ದ ಹಣವನ್ನು ಅವರು ಶಿಕ್ಷಣ ಸಂಸ್ಥೆಯೊಂದಕ್ಕೆ ದೇಣಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ಇಂಡಿಯಾ ಕನ್ನಡ)


Click it and Unblock the Notifications











