Just In
Don't Miss!
- Automobiles
ಎಕ್ಸ್ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ
- News
ರಂಗಶಂಕರದಲ್ಲಿ ಕೋವಿಗೊಂದು ಕನ್ನಡಕ ಮತ್ತೆ ಪ್ರದರ್ಶನ
- Education
BECIL Recruitment 2021: 463 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಚಿನ್ನದ ಬೆಲೆ ಸತತ 2ನೇ ದಿನ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 10,000 ರೂ. ಕಡಿಮೆ
- Sports
ಐಪಿಎಲ್ 2021: ಮನೀಶ್ ಪಾಂಡೆಗೆ ಪರೋಕ್ಷವಾಗಿ ತಿವಿದರಾ ವೀರೇಂದ್ರ ಸೆಹ್ವಾಗ್!
- Lifestyle
ಕೂದಲು ಬೆಳ್ಳಗಾಗುವುದರ ಹಿಂದಿರುವ ಕಟ್ಟುಕಥೆಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ ಶುಭಾ ಪೂಂಜಾ
ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಸಾಮಾನ್ಯ. ಆದರೆ, ಮೊದಲ ದಿನವೇ ನಟಿ ಶುಭಾ ಪೂಂಜಾ ಕಣ್ಣೀರು ಹಾಕಿದ್ದು ಚರ್ಚೆಯ ವಿಷಯವಾಗಿದೆ. ಬಿಗ್ ಬಾಸ್ ಎಂಟನೇ ಆವೃತ್ತಿಯ ಮೊದಲ ವಾರದ ಕ್ಯಾಪ್ಟನ್ ಯಾರಾಗಬೇಕು ಎಂದು ನಿರ್ಧರಿಸಲು ಬಿಗ್ ಬಾಸ್ ಟಾಸ್ಕ್ ನೀಡಿದ್ದರು. ಬ್ರೋ ಗೌಡ ಮನೆಯ ನಾಯಕನಾಗಿ ಆಯ್ಕೆಯಾದರು.
ನಾಲ್ಕು ತಂಡಗಳಾಗಿ ಆಯ್ಕೆ ಮಾಡಿ ಟಾಸ್ಕ್ ನೀಡಲಾಗಿತ್ತು. ಈ ಪೈಕಿ ಒಂದು ತಂಡ ಸೋಲು ಕಂಡಿತ್ತು. ಸೋತ ತಂಡದಲ್ಲಿ ನಟಿ ಶುಭಾ ಪೂಂಜಾ ಕಣ್ಣೀರು ಹಾಕಿದ ಘಟನೆ ನಡೆಯಿತು. ಉದ್ದೇಶದಿಂದ ಮಾಡದ ತಪ್ಪಿಗೆ ಪಶ್ಚತ್ತಾಪ ಎಂದುಕೊಂಡು ಶುಭ ಅತ್ತರು. ಅಷ್ಟಕ್ಕೂ, ಶುಭ ಪೂಂಜಾ ಕಣ್ಣೀರು ಹಾಕಿದ್ದು ಏಕೆ? ಮುಂದೆ ಓದಿ...
ಇವರೇ ನೋಡಿ ಬಿಗ್ಬಾಸ್ನ ಸುಂದರ ಮನೆ ವಿನ್ಯಾಸ ಮಾಡಿದವರು

ಸೋತ ಶುಭಾ ಪೂಂಜಾ ತಂಡ
ಟಾಸ್ಕ್ ಸೋತ ತಂಡದಲ್ಲಿ ನಟಿ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ಟಿಕ್ ಟಾಕ್ ಹುಡುಗಿ ಧನುಶ್ರೀ ಹಾಗೂ ನಿರ್ಮಲಾ ಸತ್ಯ ಇದ್ದರು. ಈ ನಾಲ್ವರ ಪೈಕಿ ಒಬ್ಬ ಕಳಪೆ ಸ್ಪರ್ಧಿಯನ್ನು ಒಮ್ಮತದಿಂದ ಆಯ್ಕೆ ಮಾಡಿ ಎಂದು ಬಿಗ್ ಬಾಸ್ ನಾಲ್ಕು ಜನರ ತಂಡಕ್ಕೆ ಸೂಚಿಸಿತು. ನಾಲ್ವರಲ್ಲಿ ಯಾರು ಕಳಪೆ ಎಂದು ನಿರ್ಧರಿಸಲು ಒಮ್ಮತಕ್ಕೆ ಬಾರದ ತಂಡ ಸಂಕಷ್ಟಕ್ಕೆ ಸಿಲುಕಿತ್ತು.

ನಿರ್ಮಲಾ ಸ್ವ-ಇಚ್ಛೆಯಿಂದ ಒಪ್ಪಿಗೆ
ನಾಲ್ಕು ಜನರಲ್ಲಿ ಕಳಪೆ ಸ್ಪರ್ಧಿ ಯಾರೆಂದು ನಿರ್ಧರಿಸಲು ಒಮ್ಮತಕ್ಕೆ ಬಾರದ ತಂಡ, ಕೊನೆಗೂ ನಿರ್ಮಲಾ ಸತ್ಯ ಅವರು ''ನಾನೇ ಕಳಪೆ'' ಎಂದು ತೀರ್ಮಾನಿಸಿದರು. ಉಳಿದ ಸದಸ್ಯರು ಒಪ್ಪಲಿಲ್ಲ. ಆಮೇಲೆ ನಾಮಿನೇಟ್ ಏನಾದರೂ ಇದ್ದರೆ ನಾಲ್ಕು ಜನರು ಇರಲಿ, ಶಿಕ್ಷೆ ಇದ್ದರೆ ನಿರ್ಮಲಾ ಮಾತ್ರ ಅನುಭವಿಸುತ್ತಾರೆ ಎಂದು ಬಿಗ್ಬಾಸ್ ಮುಂದೆ ಹೇಳಿದರು. ಆದರೆ, ಬಿಗ್ ಬಾಸ್ ಟ್ವಿಸ್ಟ್ ಕೊಟ್ಟರು.
ಬಿಗ್ಬಾಸ್ ಮನೆಗೆ ಹೋಗಲು ತಯಾರಿದ್ದೇನೆ ಎಂದ ಮಾಜಿ ಸಚಿವ

ಡೈರೆಕ್ಟ್ ನಾಮಿನೇಟ್
ನಿರ್ಮಲಾ ಸತ್ಯ ಅವರನ್ನು ಕಳಪೆ ಎಂದು ಘೋಷಿಸಿದ ಬಿಗ್ ಬಾಸ್ ನೇರವಾಗಿ ನಾಮಿನೇಟ್ ಮಾಡಿದರು. ಇದು ಉಳಿದ ಸದಸ್ಯರಿಗೆ ಆಘಾತ ತಂದಿತು. ನಿರ್ಮಲಾ ಅವರಿಗೆ ಲಗ್ಗೇಜ್ ಪ್ಯಾಕ್ ಮಾಡಲು ಬಿಗ್ ಬಾಸ್ ಸೂಚಿಸಿದರು. ಇದನ್ನು ಕಂಡ ನಟಿ ಶುಭಾ ಪೂಂಜಾ ಕಣ್ಣೀರು ಹಾಕಿದರು. ನಾಮಿನೇಟ್ ಆಗ್ತಾರೆ ಎಂದು ತಿಳಿಯದೇ ತಪ್ಪು ಮಾಡಿದ್ವಿ ಎಂಬ ಪಶ್ಚತ್ತಾಪದಿಂದ ಕಣ್ಣೀರು ಸುರಿಸಿದರು.

ನಾಮಿನೇಟ್ ಆಗ್ತಾರೆ ಅಂತ ಗೊತ್ತಿರಲಿಲ್ಲ
ಅಂದ್ಹಾಗೆ, ನಿರ್ಮಲಾ ಸತ್ಯ ಅವರನ್ನು ಡೈರೆಕ್ಟ್ ಆಗಿ ನಾಮಿನೇಟ್ ಆಗ್ತಾರೆ ಅಂತ ಶುಭ ಪೂಂಜಾ ಹಾಗೂ ತಂಡಕ್ಕೆ ಗೊತ್ತಿರಲಿಲ್ಲ. ಹಾಗಾಗಿ, ನಮ್ಮಿಂದ ನಿರ್ಮಲಾ ನಾಮಿನೇಟ್ ಆಗುವ ರೀತಿ ಆಯ್ತಲ್ವಾ, ಬಿಗ್ ಬಾಸ್ ನಾಲ್ಕು ಜನರನ್ನು ನಾಮಿನೇಟ್ ಮಾಡಿ ಎಂದು ಶುಭಾ ವಿನಂತಿಸಿದರು. ಆದರೆ, ಬಿಗ್ ಬಾಸ್ ನಿರ್ಮಲಾ ಅವರನ್ನು ನಾಮಿನೇಟ್ ಮಾಡಿದರು.