Don't Miss!
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- News ನೇಹಾ ಹತ್ಯೆ: ಸಾವಿನ ಮನೆಯಲ್ಲಿ ರಾಜಕಾರಣ ಸರಿಯಲ್ಲ, 90 ದಿನದಲ್ಲಿ ನ್ಯಾಯ ಸಿಗಲಿದೆ: ಸುರ್ಜೇವಾಲ
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೈಷ್ಣವಿ ಬಯಕೆಯನ್ನ ಈಡೇರಿಸುತ್ತಾರಾ 'ಅಭಿನಯ ಚಕ್ರವರ್ತಿ' ಸುದೀಪ್.?
'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಕರುನಾಡ ಮನೆಮನಗಳಲ್ಲಿ ಖ್ಯಾತಿ ಗಳಿಸಿರುವ ಸನ್ನಿಧಿ (ವೈಷ್ಣವಿ) ಸ್ಯಾಂಡಲ್ ವುಡ್ ಗೂ ಪದಾರ್ಪಣೆ ಮಾಡಿ ಎರಡು ಚಿತ್ರಗಳಲ್ಲಿ ಆಭಿನಯಿಸಿದ್ದಾರೆ.
ಇಂತಿಪ್ಪ ವೈಷ್ಣವಿಗೆ ಒಂದು ಆಸೆ ಇದೆ. ಕಿಚ್ಚ ಸುದೀಪ್ ಜೊತೆ ನಟಿಸುವ ಬಯಕೆಯನ್ನ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೊರಹಾಕಿದ್ದಾರೆ ನಟಿ ವೈಷ್ಣವಿ.
ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ವೈಷ್ಣವಿ ಗೆ ನಿರೂಪಕ ಅಕುಲ್ ಬಾಲಾಜಿ, 'Rapid Fire' ರೌಂಡ್ ನಲ್ಲಿ, ''ಇವರ ಜೊತೆಗೆ ಹೀರೋಯಿನ್ ಆಗಿ ಆಕ್ಟ್ ಮಾಡುವ ಚಾನ್ಸ್ ಸಿಕ್ಕರೆ, ಯಾರನ್ನ ಆಯ್ಕೆ ಮಾಡಿಕೊಳ್ಳುತ್ತೀರಾ'' ಎಂದು ''ದರ್ಶನ್, ಸುದೀಪ್, ಗಣೇಶ್, ಯಶ್'' ಎಂಬ ಆಯ್ಕೆಗಳನ್ನ ಮುಂದಿಟ್ಟರು.
ಆಗ ಹಿಂದು ಮುಂದು ನೋಡದ ವೈಷ್ಣವಿ, ''ಸುದೀಪ್'' ಹೆಸರನ್ನ ಹೇಳಿದರು. ಸುದೀಪ್ ರವರ ಸ್ಟೈಲ್, ಆಟಿಟ್ಯೂಡ್ ಅಂದ್ರೆ ವೈಷ್ಣವಿಗೆ ಸಖತ್ ಇಷ್ಟವಂತೆ.
ಕನ್ನಡ ಪ್ರತಿಭೆಗಳಿಗೆ ಮಣೆ ಹಾಕುವ ಸುದೀಪ್, ವೈಷ್ಣವಿ ಆಸೆಯನ್ನ ಈಡೇರಿಸುತ್ತಾರಾ ನೋಡೋಣ...