Don't Miss!
- Sports IPL 2024: ಗುಜರಾತ್ ತಂಡಕ್ಕೆ ಕಾಡಲಿದೆಯಾ ಹಾರ್ದಿಕ್ ಅನುಪಸ್ಥಿತಿ; ಹೇಗಿರಲಿದೆ ಪ್ಲೇಯಿಂಗ್ ಇಲೆವೆನ್
- News ಬಿಜೆಪಿ ಮೈತ್ರಿ ಧರ್ಮ ಅನುಸರಿಸದಿದ್ರೆ ದಾವಣಗೆರೆಯಲ್ಲಿ ಗೆಲುವು ಕಷ್ಟ: ಜೆಡಿಎಸ್ ಮುಖಂಡರೇ ಹೀಗೆ ಹೇಳಿದ್ಯಾಕೆ?
- Lifestyle 2024 ಮಾರ್ಚ್ 20ಕ್ಕೆ ಅಮಲಕಿ ಏಕಾದಶಿ: ಈ ದಿನ ನೆಲ್ಲಿಕಾಯಿ ಗಿಡ ಪೂಜಿಸುವುದೇಕೆ? ಈ ಏಕಾದಶಿಯ ಮಹತ್ವವೇನು?
- Automobiles ಅದ್ಭುತ ಫೀಚರ್ಸ್ ಪಡೆದುಕೊಂಡ ಟಾಟಾ ಟಿಯಾಗೋ ಇವಿ: ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೈಷ್ಣವಿ ಬಯಕೆಯನ್ನ ಈಡೇರಿಸುತ್ತಾರಾ 'ಅಭಿನಯ ಚಕ್ರವರ್ತಿ' ಸುದೀಪ್.?
'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಕರುನಾಡ ಮನೆಮನಗಳಲ್ಲಿ ಖ್ಯಾತಿ ಗಳಿಸಿರುವ ಸನ್ನಿಧಿ (ವೈಷ್ಣವಿ) ಸ್ಯಾಂಡಲ್ ವುಡ್ ಗೂ ಪದಾರ್ಪಣೆ ಮಾಡಿ ಎರಡು ಚಿತ್ರಗಳಲ್ಲಿ ಆಭಿನಯಿಸಿದ್ದಾರೆ.
ಇಂತಿಪ್ಪ ವೈಷ್ಣವಿಗೆ ಒಂದು ಆಸೆ ಇದೆ. ಕಿಚ್ಚ ಸುದೀಪ್ ಜೊತೆ ನಟಿಸುವ ಬಯಕೆಯನ್ನ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೊರಹಾಕಿದ್ದಾರೆ ನಟಿ ವೈಷ್ಣವಿ.
ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ವೈಷ್ಣವಿ ಗೆ ನಿರೂಪಕ ಅಕುಲ್ ಬಾಲಾಜಿ, 'Rapid Fire' ರೌಂಡ್ ನಲ್ಲಿ, ''ಇವರ ಜೊತೆಗೆ ಹೀರೋಯಿನ್ ಆಗಿ ಆಕ್ಟ್ ಮಾಡುವ ಚಾನ್ಸ್ ಸಿಕ್ಕರೆ, ಯಾರನ್ನ ಆಯ್ಕೆ ಮಾಡಿಕೊಳ್ಳುತ್ತೀರಾ'' ಎಂದು ''ದರ್ಶನ್, ಸುದೀಪ್, ಗಣೇಶ್, ಯಶ್'' ಎಂಬ ಆಯ್ಕೆಗಳನ್ನ ಮುಂದಿಟ್ಟರು.
ಆಗ ಹಿಂದು ಮುಂದು ನೋಡದ ವೈಷ್ಣವಿ, ''ಸುದೀಪ್'' ಹೆಸರನ್ನ ಹೇಳಿದರು. ಸುದೀಪ್ ರವರ ಸ್ಟೈಲ್, ಆಟಿಟ್ಯೂಡ್ ಅಂದ್ರೆ ವೈಷ್ಣವಿಗೆ ಸಖತ್ ಇಷ್ಟವಂತೆ.
ಕನ್ನಡ ಪ್ರತಿಭೆಗಳಿಗೆ ಮಣೆ ಹಾಕುವ ಸುದೀಪ್, ವೈಷ್ಣವಿ ಆಸೆಯನ್ನ ಈಡೇರಿಸುತ್ತಾರಾ ನೋಡೋಣ...