Don't Miss!
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Automobiles ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುರುಕಿರಣ್ ಹಾಡುಗಳನ್ನು ಕೇಳಲು ಸಿಡಿ ಅಂಗಡಿ ಮುಂದೆ ಕ್ಯೂನಲ್ಲಿ ನಿಲ್ತಿದ್ರಂತೆ ಅರ್ಜುನ್ ಜನ್ಯ
ಕನ್ನಡ ಚಿತ್ರರಂಗದ ಸದ್ಯ ಲೀಡಿಂಗ್ ಸಂಗೀತ ನಿರ್ದೇಶಕರ ಪೈಕಿ ಅರ್ಜುನ್ ಜನ್ಯ ಕೂಡ ಒಬ್ಬರು. 'ಬಿರುಗಾಳಿ', 'ಕೆಂಪೇಗೌಡ', 'ಲಕ್ಕಿ', 'ಮಾಣಿಕ್ಯ', 'ಅಧ್ಯಕ್ಷ' 'ಮುಕುಂದ ಮುರಾರಿ', 'ಹೆಬ್ಬುಲಿ' ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳಿಗೆ ಉತ್ತಮ ಸಂಗೀತ ನೀಡಿರುವ ಅರ್ಜುನ್ ಜನ್ಯ ಒಂದ್ಕಾಲದಲ್ಲಿ ಗುರುಕಿರಣ್ ಹಾಡುಗಳನ್ನು ಕೇಳಲು ಸಿಡಿ ಅಂಗಡಿ ಮುಂದೆ ಕ್ಯೂನಲ್ಲಿ ನಿಲ್ತಿದ್ರು ಅನ್ನೋದು ನಿಮಗೆ ಗೊತ್ತಾ.?
ಹೌದು, ಗುರುಕಿರಣ್ ರವರ ಅಭಿಮಾನಿಯಾಗಿದ್ದ ಅರ್ಜುನ್ ಜನ್ಯ, ಅಂಗಡಿಯಲ್ಲಿ ಗುರುಕಿರಣ್ ರವರ ಹಾಡುಗಳ ಸಿಡಿ ಕೊಂಡು ಕೇಳುತ್ತಿದ್ದರಂತೆ.
ಅನುಶ್ರೀ ಬಗ್ಗೆ ಕೇಳಿದಾಗ ಅಂಜಿಕೆ-ಅಳುಕಿಲ್ಲದೆ ಉತ್ತರ ಕೊಟ್ಟ ಅರ್ಜುನ್ ಜನ್ಯ.!
ಅಷ್ಟಕ್ಕೂ, ಇದನ್ನೆಲ್ಲ ಅರ್ಜುನ್ ಜನ್ಯ ಬಾಯ್ಬಿಟ್ಟಿದ್ದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಗುರುಕಿರಣ್ ಜೊತೆಗೆ ಆಗಮಿಸಿದ ಅರ್ಜುನ್ ಜನ್ಯ ತಮ್ಮ ಅಂದಿನ ದಿನಗಳನ್ನ ನೆನಪಿಸಿಕೊಂಡಿದ್ದು ಹೀಗೆ - ''ಗುರುಕಿರಣ್ ಪಕ್ಕ ಕೂರುವುದೇ ಹೆಮ್ಮೆ. ಯಾಕಂದ್ರೆ ಇವರನ್ನ ನೋಡಿಕೊಂಡೆ ನಾವೆಲ್ಲ ಬೆಳೆದಿದ್ದು. ಇವರ ಮ್ಯೂಸಿಕ್ ಕೇಳಲು, ಸಿಡಿ ಅಂಗಡಿ ಮುಂದೆ ಕ್ಯೂ ನಲ್ಲಿ ನಿಂತು ತೆಗೆದುಕೊಂಡಿದ್ದು ನೆನಪಿದೆ ನಂಗೆ''.
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಎ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದ ಗುರುಕಿರಣ್ ಕನ್ನಡ ಚಿತ್ರರಂಗಕ್ಕೆ ಅನೇಕ ಹಿಟ್ ನಂಬರ್ಸ್ ಕೊಟ್ಟಿದ್ದಾರೆ.