Just In
- 26 min ago
ಕೊರೊನಾ ಸೋಂಕಿನಿಂದ ಬದಲಾಗಿದ್ದ ತಮನ್ನಾ ಈಗ ಮತ್ತೆ ಸಹಜ ಸ್ಥಿತಿಗೆ
- 1 hr ago
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- 2 hrs ago
ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಗ್ಗೆ 'ಬಿಗ್ ಬಾಸ್' ಅಕ್ಷತಾ ಪಾಂಡವಪುರ ಹೇಳಿದ್ದೇನು?
- 10 hrs ago
ಶಾರುಖ್ ಖಾನ್ ಬಂಗಲೆಯಲ್ಲಿ ವರುಣ್ ಧವನ್ ಮದುವೆ ಸಂಭ್ರಮ
Don't Miss!
- News
ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: ಹೊಸ ದಾಖಲೆ ಸೃಷ್ಟಿ
- Automobiles
ವಿಭಿನ್ನ ಅನುಭವ ನೀಡುವ ಪೈಲಟ್ ಉದ್ಯೋಗದ ಬಗೆಗಿನ ರೋಚಕ ಸಂಗತಿಗಳಿವು
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗುರುಕಿರಣ್ ಹಾಡುಗಳನ್ನು ಕೇಳಲು ಸಿಡಿ ಅಂಗಡಿ ಮುಂದೆ ಕ್ಯೂನಲ್ಲಿ ನಿಲ್ತಿದ್ರಂತೆ ಅರ್ಜುನ್ ಜನ್ಯ
ಕನ್ನಡ ಚಿತ್ರರಂಗದ ಸದ್ಯ ಲೀಡಿಂಗ್ ಸಂಗೀತ ನಿರ್ದೇಶಕರ ಪೈಕಿ ಅರ್ಜುನ್ ಜನ್ಯ ಕೂಡ ಒಬ್ಬರು. 'ಬಿರುಗಾಳಿ', 'ಕೆಂಪೇಗೌಡ', 'ಲಕ್ಕಿ', 'ಮಾಣಿಕ್ಯ', 'ಅಧ್ಯಕ್ಷ' 'ಮುಕುಂದ ಮುರಾರಿ', 'ಹೆಬ್ಬುಲಿ' ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳಿಗೆ ಉತ್ತಮ ಸಂಗೀತ ನೀಡಿರುವ ಅರ್ಜುನ್ ಜನ್ಯ ಒಂದ್ಕಾಲದಲ್ಲಿ ಗುರುಕಿರಣ್ ಹಾಡುಗಳನ್ನು ಕೇಳಲು ಸಿಡಿ ಅಂಗಡಿ ಮುಂದೆ ಕ್ಯೂನಲ್ಲಿ ನಿಲ್ತಿದ್ರು ಅನ್ನೋದು ನಿಮಗೆ ಗೊತ್ತಾ.?
ಹೌದು, ಗುರುಕಿರಣ್ ರವರ ಅಭಿಮಾನಿಯಾಗಿದ್ದ ಅರ್ಜುನ್ ಜನ್ಯ, ಅಂಗಡಿಯಲ್ಲಿ ಗುರುಕಿರಣ್ ರವರ ಹಾಡುಗಳ ಸಿಡಿ ಕೊಂಡು ಕೇಳುತ್ತಿದ್ದರಂತೆ.
ಅನುಶ್ರೀ ಬಗ್ಗೆ ಕೇಳಿದಾಗ ಅಂಜಿಕೆ-ಅಳುಕಿಲ್ಲದೆ ಉತ್ತರ ಕೊಟ್ಟ ಅರ್ಜುನ್ ಜನ್ಯ.!
ಅಷ್ಟಕ್ಕೂ, ಇದನ್ನೆಲ್ಲ ಅರ್ಜುನ್ ಜನ್ಯ ಬಾಯ್ಬಿಟ್ಟಿದ್ದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಗುರುಕಿರಣ್ ಜೊತೆಗೆ ಆಗಮಿಸಿದ ಅರ್ಜುನ್ ಜನ್ಯ ತಮ್ಮ ಅಂದಿನ ದಿನಗಳನ್ನ ನೆನಪಿಸಿಕೊಂಡಿದ್ದು ಹೀಗೆ - ''ಗುರುಕಿರಣ್ ಪಕ್ಕ ಕೂರುವುದೇ ಹೆಮ್ಮೆ. ಯಾಕಂದ್ರೆ ಇವರನ್ನ ನೋಡಿಕೊಂಡೆ ನಾವೆಲ್ಲ ಬೆಳೆದಿದ್ದು. ಇವರ ಮ್ಯೂಸಿಕ್ ಕೇಳಲು, ಸಿಡಿ ಅಂಗಡಿ ಮುಂದೆ ಕ್ಯೂ ನಲ್ಲಿ ನಿಂತು ತೆಗೆದುಕೊಂಡಿದ್ದು ನೆನಪಿದೆ ನಂಗೆ''.
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಎ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದ ಗುರುಕಿರಣ್ ಕನ್ನಡ ಚಿತ್ರರಂಗಕ್ಕೆ ಅನೇಕ ಹಿಟ್ ನಂಬರ್ಸ್ ಕೊಟ್ಟಿದ್ದಾರೆ.