Don't Miss!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- News Rameshwar Cafe: ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣ: ದಾಳಿಗೆ ಸಹಾಯ ಮಾಡಿದ ವ್ಯಕ್ತಿ ಬಂಧನ- ತೀರ್ಥಹಳ್ಳಿ ಉಗ್ರನೊಂದಿಗೆ ಸಂಪರ್
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Lifestyle 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಖಾಲಿ ಕ್ವಾಟ್ರು ಬಾಟ್ಲು...' ಸುತ್ತ ಅರ್ಜುನ್ ಜನ್ಯ ಮಾತು ಕತೆ
ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಖ್ಯಾತಿ ಕೀರ್ತಿ ತಂದುಕೊಟ್ಟ ಅನೇಕ ಹಾಡುಗಳ ಪೈಕಿ 'ವಿಕ್ಟರಿ' ಚಿತ್ರದ 'ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು...' ಕೂಡ ಒಂದು. ಹಾಗ್ನೋಡಿದ್ರೆ, ಅರ್ಜುನ್ ಜನ್ಯ ಅಪಾರ ಜನಪ್ರಿಯತೆಗೆ ಪಾತ್ರವಾಗಿದ್ದೇ 'ಖಾಲಿ ಕ್ವಾಟ್ರು...' ಹಾಡಿನ ಮೂಲಕ.
ಒಂದ್ಕಡೆ ಯೋಗರಾಜ್ ಭಟ್ರ ಸಾಹಿತ್ಯ, ಇನ್ನೊಂದ್ಕಡೆ ವಿಜಯ್ ಪ್ರಕಾಶ್ ಗಾಯನ, ಮತ್ತೊಂದ್ಕಡೆ ಅರ್ಜುನ್ ಜನ್ಯ ಸಂಗೀತ... ಈ ಮೂರು ಅದ್ಭುತಗಳು ಒಂದಾದ ಫಲಿತಾಂಶವೇ 'ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು...'
ಖಾಲಿ ಕ್ವಾರ್ಟರ್ ನಲ್ಲಿ ನನ್ನ ಪಾಲೇನು ಇಲ್ಲ, ಶರಣ್!
ಕುಡುಕರ ಸುಪ್ರಭಾತ ಆಗಿದ್ದ 'ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು...' ಹಾಡಿನ ಮೇಕಿಂಗ್ ಬಗ್ಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹಂಚಿಕೊಂಡರು.
ಬಾರನ್ನು ತವರು ಎಂದ ಏಕೈಕ ಸಾಹಿತಿ ಯೋಗರಾಜ್ ಭಟ್
''ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು...' ಹಾಡು ಮಾಡುವಾಗ ತುಂಬಾ ಪ್ರೆಶರ್ ಇತ್ತು. ಡ್ರಿಂಕ್ಸ್ ಸಾಂಗ್ ಹಿಟ್ ಆಗಲೇಬೇಕು. ಅದು ಫ್ಲಾಪ್ ಆಗುವ ಹಾಗೇ ಇಲ್ಲ ಅನ್ನೋ ರೇಂಜಲ್ಲಿ ನಮ್ಮೆಲ್ಲರ ಮೈಂಡ್ ಸೆಟ್ ಇತ್ತು. ನಾನು ಯಾವತ್ತೂ ಯಾವ ಪ್ರೆಶರ್ ಕೂಡ ತೆಗೆದುಕೊಳ್ಳುವುದಿಲ್ಲ. ಆ ಸಮಯಕ್ಕೆ ಏನು ಹೊಳೆಯುತ್ತೆ, ಅದನ್ನ ಮಾಡುತ್ತೇನೆ. 'ಖಾಲಿ ಕ್ವಾಟ್ರು...' ಸಾಂಗ್ ಮಾಡಿದ್ದು ಹದಿನೈದು ನಿಮಿಷದಲ್ಲಿ''
''ಇವತ್ತು ನನ್ನ ಶೋಗಳಲ್ಲಿ ಆ ಹಾಡನ್ನ ಹಾಡುತ್ತೇನೆ. ಆ ಹಾಡಿಗೋಸ್ಕರ ಜನ ಕಾಯುತ್ತಾರೆ. ಅದಕ್ಕೆ ಶೋ ಕೊನೆಗೆ ಆ ಹಾಡನ್ನು ಹಾಡುತ್ತೇನೆ. ದೇವರ ಆಶೀರ್ವಾದ'' ಎಂದಿದ್ದಾರೆ ಅರ್ಜುನ್ ಜನ್ಯ.