Don't Miss!
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
ಅದೇನು ಕಷ್ಟದ ಸಿಕ್ಸರ್ ಅಲ್ಲ: ಹ್ಯಾರಿಸ್ ರೌಫ್ಗೆ ವಿರಾಟ್ ಕೊಹ್ಲಿ ಹೊಡೆದ ಸಿಕ್ಸರ್ ಬಗ್ಗೆ ಮಾಜಿ ಕ್ರಿಕೆಟಿಗನ ಪ್ರತಿಕ್ರಿಯೆ
- Technology
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಲಕೃಷ್ಣಗೆ ಹೆಚ್ಚಿದ ಡಿಮ್ಯಾಂಡ್, ಆದರೆ ಸಿನಿಮಾಗಳಲ್ಲಿ ಅಲ್ಲ!
ನಂದಮೂರಿ ಬಾಲಕೃಷ್ಣ ತೆಲುಗಿನ ಸ್ಟಾರ್ ನಟರಲ್ಲೊಬ್ಬರು. ಅವರ ಸಿನಿಮಾಗಳಿಂದ ವಿಮರ್ಶಕರೂ ದೂರವೇ ಉಳಿಯುತ್ತಾರಾದರೂ ಬಾಲಕೃಷ್ಣ ಸಿನಿಮಾಗಳಿಗೆ, ಹಾಗೂ ಅವರಿಗೆ ಅದರದ್ದೇ ಆದ ದೊಡ್ಡ ಅಭಿಮಾನಿ ವರ್ಗವಿದೆ.
ಸಿನಿಮಾ ಹಾಗೂ ರಾಜಕೀಯಕ್ಕಷ್ಟೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದ ಬಾಲಕೃಷ್ಣ ಇತ್ತೀಚೆಗೆ ಕಿರುತೆರೆಗೆ ಕಾಲಿಟ್ಟರು. ಆದರೆ ಅಲ್ಲಿಯೂ ಸೂಪರ್-ಡೂಪರ್ ಹಿಟ್ ಆಗಿಬಿಟ್ಟಿದ್ದಾರೆ. ಇದೇ ಕಾರಣದಿಂದಾಗಿ ಬಾಲಕೃಷ್ಣಗೆ ಸಾಲು-ಸಾಲು ಕಿರುತೆರೆ ಅವಕಾಶಗಳು ಅರಸಿ ಬರುತ್ತಿವೆ.
ಆಹಾ ಒಟಿಟಿ ಮೂಲಕ ಬಾಲಕೃಷ್ಣ ಕಿರುತೆರೆಗೆ ಕಾಲಿಟ್ಟು ವರ್ಷವಾಗಿದೆ. ಅವರು ನಡೆಸಿಕೊಡುವ 'ಅನ್ಸ್ಟಾಪೆಬಲ್' ಭರ್ಜರಿ ಯಶಸ್ಸು ಗಳಿಸಿಕೊಂಡಿದೆ. ತಮ್ಮದೇ ಆದ ರಗಡ್ ಹಾಗೂ ಮಾಸ್ ಸ್ಟೈಲ್ನಲ್ಲಿ ಬಾಲಕೃಷ್ಣ ಆ ಶೋ ನಡೆಸಿಕೊಡುತ್ತಿದ್ದಾರೆ. ಈ ಶೋನ ಯಶಸ್ಸಿನ ಬಳಿಕ ಇದೀಗ ಜನಪ್ರಿಯ ರಿಯಾಲಿಟಿ ಶೋ ಒಂದರಿಂದ ಬಾಲಕೃಷ್ಣಗೆ ಭಾರಿ ದೊಡ್ಡ ಆಫರ್ ಬಂದಿದೆ.

ಬಿಗ್ಬಾಸ್ಗೆ ಹೊಸ ನಿರೂಪಕ
ತೆಲುಗು ಬಿಗ್ಬಾಸ್ ಶೋ ಅನ್ನು ನಿರೂಪಿಸುವ ಅವಕಾಶ ಬಾಲಕೃಷ್ಣಗೆ ಒದಗಿಬಂದಿದೆ. ತೆಲುಗು ಬಿಗ್ಬಾಸ್ ಈ ವರೆಗೆ ಆರು ಸೀಸನ್ಗಳಾಗಿವೆ. ಮೊದಲ ಸೀಸನ್ ಅನ್ನು ಜೂ ಎನ್ಟಿಆರ್, ಎರಡನೇ ಸೀಸನ್ ಅನ್ನು ನಟ ನಾನಿ ಹೋಸ್ಟ್ ಮಾಡಿದ್ದರು. ಆ ಬಳಿಕದ ನಾಲ್ಕು ಸೀಸನ್ಗಳನ್ನು ನಟ ನಾಗಾರ್ಜುನ ನಿರೂಪಣೆ ಮಾಡಿದ್ದರು. ನಾಗಾರ್ಜುನ ನಿರೂಪಣೆ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಈಗ ಅವರನ್ನು ಬದಲಾಯಿಸಲು ಯೋಜಿಸಿದ್ದಾರೆ ಬಿಗ್ಬಾಸ್ ಆಯೋಜಕರು.

ಗುಡ್ ಬೈ ಹೇಳಿದ ನಟ ನಾಗಾರ್ಜುನ
ತೆಲುಗು ಬಿಗ್ಬಾಸ್ ಆರನೇ ಸೀಸನ್ ಎರಡು ದಿನಗಳ ಹಿಂದಷ್ಟೆ ಮುಕ್ತಾಯವಾಗಿದ್ದು, ಈ ಸೀಸನ್ಗೆ ಕಳಪೆ ಟಿಆರ್ಪಿ ಬಂದಿದೆ. ಹಾಗಾಗಿ ನಾಗಾರ್ಜುನ ಅವರನ್ನು ಬದಲಾಯಿಸಲು ನಿಶ್ಚಯಿಸಲಾಗಿದೆ. ಅದಕ್ಕೆ ಪೂರಕವೆಂಬಂತೆ, ಬಿಗ್ಬಾಸ್ ಫಿನಾಲೆಯಲ್ಲಿ ನಾಗಾರ್ಜುನರ ಜರ್ನಿಯ ವಿಡಿಯೋ ಪ್ರದರ್ಶಿಸಲಾಗಿದೆ. ಪ್ರತಿ ಬಾರಿ ಮುಂದಿನ ಬಾರಿ ಸಿಗೋಣ ಎಂದು ಹೇಳಿ ಕಾರ್ಯಕ್ರಮ ಮುಗಿಸುತ್ತಿದ್ದ ನಾಗಾರ್ಜುನ, ಫಿನಾಲೆಯ ದಿನ ಇಲ್ಲಿಗೆ ಮುಕ್ತಾಯ, ಗುಡ್ ಬೈ ಎಂದು ಹೇಳಿ ಕಾರ್ಯಕ್ರಮ ಮುಗಿಸಿದ್ದಾರೆ. ಇದು ನಾಗಾರ್ಜುನ ಅವರು ಶೋ ಬಿಡುತ್ತಿರುವುದೇ ಕಾರಣ ಎನ್ನಲಾಗುತ್ತಿದೆ.

ಸೂಪರ್ ಹಿಟ್ ಆಗಿರುವ ಅನ್ಸ್ಟಾಪೆಬಲ್!
ಇನ್ನು ಬಾಲಕೃಷ್ಣ ಅವರು ಅನ್ಸ್ಟಾಪೆಬಲ್ ಶೋ ನಡೆಸಿಕೊಡುತ್ತಿರುವ ರೀತಿ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಬಿಡು-ಬೀಸು ಮಾತು, ಫಿಲ್ಟರ್ ಇಲ್ಲದೆ ಮಾತನಾಡುವ ರೀತಿ ಹಲವರಿಗೆ ಇಷ್ಟವಾಗಿದೆ. ಗಾಂಭೀರ್ಯದ ಮುಖವಾಡ ಧರಿಸದೆ ಆಪ್ತವಾಗಿಯೇ ತೀರ ಖಾಸಗಿ ಪ್ರಶ್ನೆಗಳನ್ನು ಸಹ ಸುಲಭವಾಗಿ ಕೇಳಿ ಉತ್ತರ ಪಡೆವ ರೀತಿ ವೀಕ್ಷಕರಿಗೆ ಡೇರಿಂಗ್ ಎನಿಸಿದೆ. ಬಾಲಕೃಷ್ಣರ ನಿರೂಪಣಾ ಶೈಲಿ ಬಿಗ್ಬಾಸ್ ರಿಯಾಲಿಟಿ ಶೋಗೆ ಬಹಳ ಹೊಂದಿಕೆ ಆಗುತ್ತದೆ. ಹಾಗಾಗಿ ಬಾಲಕೃಷ್ಣ ಅವರನ್ನು ಬಿಗ್ಬಾಸ್ ನಿರೂಪಣೆ ಮಾಡುವಂತೆ ಕೇಳಲಾಗಿದೆ.

ಯಶಸ್ವಿಯಾಗಲಿದೆಯೇ ಶೋ?
ಬಿಗ್ಬಾಸ್ ಶೋ ನಿರೂಪಣೆ ಮಾಡಲು ನಟ ಬಾಲಕೃಷ್ಣಗೆ ಭಾರಿ ಮೊತ್ತದ ಸಂಭಾವನೆ ಆಫರ್ ಮಾಡಲಾಗಿದೆಯಂತೆ. ಅಲ್ಲದೆ ಶೋನ ನಿರೂಪಣಾ ವಿಧಾನ, ಚಿತ್ರೀಕರಣ ವಿಧಾನದಲ್ಲಿಯೂ ಬದಲಾವಣೆ ಮಾಡಲು ಚಿಂತಿಸಲಾಗಿದೆಯಂತೆ. ಅನ್ಸ್ಟಾಪೆಬಲ್ ಮೂಲಕ ಈಗಾಗಲೇ ಭಾರಿ ಸಂಖ್ಯೆಯ ಜನರನ್ನು ಸೆಳೆದಿರುವ ಬಾಲಕೃಷ್ಣ, ಬಿಗ್ಬಾಸ್ಗೆ ಹೋದರೆ ಇನ್ನೂ ಹೆಚ್ಚಿನ ಜನರನ್ನು ಸೆಳೆಯುವುದು ಗ್ಯಾರೆಂಟಿ ಎನ್ನಲಾಗುತ್ತಿದೆ.