Don't Miss!
- News ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಇಬ್ಬರು ಶಂಕಿತರ ಸುಳಿವು ಕೊಟ್ಟರೆ ₹20 ಲಕ್ಷ ಬಹುಮಾನ
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಾಸ್ : ನಿಂದನೆ ತಾಳಲಾರದೆ ಮಾತ್ರೆ ನುಂಗಿದ್ನೆ ಜುಬೈರ್
ಬಿಗ್ ಬಾಸ್ 11ನೇ ಆವೃತ್ತಿ ಆರಂಭವಾಗಿ ಒಂದು ವಾರ ಕಳೆದಿದೆಯಷ್ಟೇ, ನಿರೂಪಕ ಸಲ್ಮಾನ್ ಪಿತ್ತ ನೆತ್ತಿಗೇರುವಂತೆ ಮಾಡುವಲ್ಲಿ ಸ್ಪರ್ಧಿಗಳು ಯಶಸ್ವಿಯಾಗಿದ್ದಾರೆ. ಕೆಟ್ಟ ಪದ ಬಳಕೆ ಮಾಡಿದ ಸ್ಪರ್ಧಿ ಕಿಕ್ ಔಟ್, ಮಹಿಳಾ ಸ್ಪರ್ಧಿಗಳ ಆಟಾಟೋಪ, ನಿಂದನೆಗೆ ನೊಂದು ನಿದ್ದೆ ಮಾತ್ರೆ ಸೇವಿಸಿದ ಸ್ಪರ್ಧಿ ಎಲ್ಲವೂ ಮೊದಲ ವಾರದ ಮುಖ್ಯಾಂಶಗಳು.
ಬಿಗ್ ಬಾಸ್ 10 ಗೆದ್ದ ನೋಯ್ಡಾದ ರೈತ ಮನ್ವೀರ್ ಗುಜ್ಜಾರ್
ಬಿಗ್ ಬಾಸ್ ಮನೆಯಲ್ಲಿ ಎಂದಿನಂತೆ ಕಿತ್ತಾಟ, ಜಗಳ, ಬೈಯ್ದಾಟ, ತು ತು ಮೇ ಮೇ ಕಾಮನ್ ಆಗಿದ್ದರೂ ಈ ಬಾರಿ ಯಾಕೋ ತುಸು ಓವರ್ ಎನಿಸುವಷ್ಟರ ಮಟ್ಟಿಗೆ ಸ್ಪರ್ಧಿಗಳು ರೇಜಿಗೆ ಹುಟ್ಟಿಸಿದ್ದಾರೆ.
ಸ್ಪರ್ಧಿಗಳಾದ ಶಿಲ್ಪಾ ಶಿಂಧೆ, ಅರ್ಶಿ ಖಾನ್, ಜ್ಯೋತಿ ಕುಮಾರ್, ಬಂದ್ಗಿ ಕರ್ಲಾ ಮತ್ತು ಜುಬೈರ್ ಖಾನ್ ಪೈಕಿ ಯಾರು ಮನೆಯಿಂದ ಹೊರಕ್ಕೆ ಹೋಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು.ಶಿಲ್ಪಾ ಶಿಂಧೆ ಎಲಿಮಿನೇಟ್ ಆಗುತ್ತಾಳೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ, ಎಲಿಮಿನೇಟ್ ಆಗಿದ್ದು ಪ್ರಿಯಾಂಕ್ ಶರ್ಮಾ, ಈ ನಡುವೆ 'ಡೌವ್ ರಾಜ' ಜುಬೈರ್ ಆಸ್ಪತ್ರೆ ಸೇರಿದ್ದಾನೆ.
ವಾರಾಂತ್ಯದ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ರಿಂದ ಪದೇ ಪದೇ ಬೈಯಿಸಿಕೊಂಡ ಜುಬೈರ್ (ಡಾನ್ ದಾವೂದ್ ಇಬ್ರಾಹಿಂ ಸೋದರಿಯ ಅಳಿಯ ಎಂದು ಕೊಚ್ಚಿಕೊಂಡಿದ್ದ) ಗಪ್ ಚುಪ್ ಆಗಿದ್ದಲ್ಲದೆ ನಂತರ ಅವಮಾನ ತಾಳಲಾರದೆ ನಿದ್ದೆ ಮಾತ್ರೆ ಸೇವಿಸಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈಗ ಸುಧಾರಿಸಿಕೊಳ್ಳುತ್ತಿದ್ದಾನೆ.
ಈ ನಡುವೆ ವಿಕಾಸ್ ಮತ್ತು ಆಕಾಶ್ ನಡುವೆ ಹೊತ್ತಿಕೊಂಡಿದ್ದ ಬೆಂಕಿಗೆ ತುಪ್ಪ ಸುರಿದ ಕಾರಣಕ್ಕೆ ಪ್ರಿಯಾಂಕ್ ಬೆಲೆ ತೆರಬೇಕಾಯಿತು. ಪ್ರಿಯಾಂಕ್ ಶರ್ಮಾ ಮೊದಲ ವಾರವೇ ಎಲಿಮಿನೇಟ್ ಆಗಿದ್ದು,ಶಿಲ್ಪಾ ಶಿಂಧೆ ಬಚಾವಾಗಿದ್ದಾಳೆ.