Don't Miss!
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- News ಮಹಾರಾಜರು ಬೆಂಗಳೂರು ಅರಮನೆ ಮೈದಾನ ಜಾಗ ಬಿಟ್ಟು ಕೊಡುವಂತೆ ಎಎಪಿ ಆಗ್ರಹ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಾಸ್ ಮನೆಯ ಕಟಕಟೆಯಲ್ಲಿ ವಿಚಾರಣೆ
ಬಿಗ್ ಬಾಸ್ ಮನೆಯ ಸದಸ್ಯರಲ್ಲೇ ಸಾಕಷ್ಟು ಗೊಂದಲ, ಅನುಮಾನ, ಭಿನ್ನಾಭಿಪ್ರಾಯಗಳಿರುವುದು ಮೂರನೇ ವಾರದ ಹೊತ್ತಿಗೆ ಹೊರಬಿದ್ದಿದೆ. ಬಿಗ್ ಬಾಸ್ ಮನೆಯ ಗಾರ್ಡನ್ ಏರಿಯಾದಲ್ಲಿ ರಚಿಸಿದ್ದ ನ್ಯಾಯಾಲಯದ ಕಟಕಟೆ ಮಾದರಿಯಲ್ಲಿ ಆರೋಪ, ಪ್ರತ್ಯಾರೋಪಗಳ ವಿಚಾರಣೆ ನಡೆಯಿತು.
ಹತ್ತೊಂಬತ್ತನೇ ದಿನ "ಊರಿಗೊಬ್ಳೆ ಪದ್ಮಾವತಿ..." ಹಾಡಿನ ಮೂಲಕ ಪ್ರಾರಂಭವಾಯಿತು. ತಾನು ಕ್ಯಾಪ್ಟನ್ ಆದ ಮೇಲೆ ತನ್ನ ಬಗ್ಗೆ ಸೃಜನ್ ನೀಡಿದ ಕಾಮಿಡಿ ಶೋ ಬಗ್ಗೆ ತೀವ್ರ ಅಸಮಾಧಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು ಅಕುಲ್ ಬಾಲಾಜಿ. ಆದರೆ ಶಕೀಲಾ ಮಾತ್ರ ನಿಮ್ಮ ಬಗ್ಗೆ ಮಾಡಿದ ಕಾಮಿಡಿ ನನಗೆ ಇಷ್ಟವಾಯಿತು ಎಂದು ಅಕುಲ್ ಅವರನ್ನು ಇನ್ನಷ್ಟು ಕೀಟಲೆ ಮಾಡಿದರು.
ಬಿಗ್ ಬಾಸ್ ಈ ಬಾರಿ ಎಲ್ಲರನ್ನೂ ಕನ್ಫೆಷನ್ ರೂಮಿಗೆ ಕರೆದು ಮನೆಯ ಸದಸ್ಯರ ಬಗ್ಗೆ ಏನಾದರೂ ಆರೋಪ, ದೂರುಗಳಿದ್ದರೆ ತಿಳಿಸಿ ಎಂದರು. ಆದಿ ಲೋಕೇಶ್ ಅವರು ತಮಗೆ ಯಾರ ಬಗ್ಗೆನೂ ಅಸಮಾಧಾನ, ಆರೋಪ ಇಲ್ಲ ಎಂದು ಹೇಳಿದರು.
ಇದೇ ರೀತಿ ಎಲ್ಲರಿಗೂ ಅವಕಾಶ ಕೊಡಲಾಯಿತು. ಅದರಂತೆ ಎಲ್ಲರೂ ಪತ್ರದಲ್ಲಿ ತಮ್ಮ ಅಸಮಾಧಾನ, ದೂರು ದುಮ್ಮಾನಗಳನ್ನು ಬರೆದಿಟ್ಟರು. ಬಿಗ್ ಬಾಸ್ ಮುಂದೆ ನನಗೆ ಯಾರೊಂದಿಗೂ ಅಸಮಾಧಾನ, ದೂರು ಇಲ್ಲ ಎಂದ ಆದಿ ಬಳಿಕ ನೀತೂ ಬಳಿ ಚರ್ಚಿಸುತ್ತಾ ಮಯೂರ್ ಬಗ್ಗೆ ಅಸಮಾಧಾನ ತೋಡಿಕೊಂಡರು. ಇವರಿಬ್ಬರನ್ನು ಸಂಧಾನದ ಮೂಲಕ ಒಂದು ಮಾಡಲು ಶ್ರಮಿಸುತ್ತಲೇ ಇದ್ದರು.
ಇನ್ನೊಂದು ಕಡೆ ಅನುಪಮಾ ಭಟ್ ಅವರನ್ನು ಸೃಜನ್ ಅವರು ತುಂಬಾ ಗೋಳು ಹೊಯ್ದುಕೊಂಡರು. ಆವರ ಫೇಸ್ ರೀಡಿಂಗ್, ಹಸ್ತರೇಖೆ ನೋಡಿ ಭವಿಷ್ಯ ಹೇಳುತ್ತೇನೆ ಎಂದು ಅವರ ಬಗ್ಗೆ ಸಿಕ್ಕಾಪಟ್ಟೆ ಕಾಮಿಡಿ ಮಾಡಿದರು. ಆದರೂ ಅನುಪಮಾ ಮಾತ್ರ ಯಾವುದಕ್ಕೂ ಬೇಸರಿಸಿಕೊಳ್ಳಲಿಲ್ಲ.