Don't Miss!
- News ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ರೀಲ್ ಬಿಟ್ಟರೆ ಜನ ಒಪ್ಪಲ್ಲ: ಡಿ ಕೆ ಸುರೇಶ್ ಹೀಗೆ ಹೇಳಿದ್ದು ಯಾರಿಗೆ?
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಡ್ರಾಮಾ ಕ್ವೀನ್' ಕೃತಿಕಾಗೆ ರವಿ ಕೊಟ್ಟ ವಿಚಿತ್ರ ಶಿಕ್ಷೆ.!
'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ 'ಡ್ರಾಮಾ ಕ್ವೀನ್' ಅಂತಲೇ ಫೇಮಸ್ ಆಗಿರುವ ಕಿರುತೆರೆ ನಟಿ ಕೃತಿಕಾಗೆ ಈ ವಾರ ವಿಚಿತ್ರ ಶಿಕ್ಷೆ ಸಿಕ್ಕಿದೆ. ಅದೇನಪ್ಪಾ ಅಂದ್ರೆ, 'ಬಿಗ್ ಬಾಸ್' ಮನೆಯಲ್ಲಿ ನೆಲದ ಮೇಲೆ ಕೃತಿಕಾ ಕಾಲಿಟ್ಟು ನಡೆಯುವಂತಿಲ್ಲ.!
ಕೃತಿಕಾ ನೆಲದ ಮೇಲೆ ಕಾಲಿಟ್ಟು ನಡೆಯದಂತೆ ಈ ವಾರದ ಮನೆಯ ಕ್ಯಾಪ್ಟನ್ ನಟಿ ಶ್ರುತಿ ನೋಡಿಕೊಳ್ಳಬೇಕು. ಅಷ್ಟಕ್ಕೂ, ಈ ಶಿಕ್ಷೆಯನ್ನ ಕೃತಿಕಾಗೆ ದಯಪಾಲಿಸಿದವರು ಗಾಯಕ ರವಿ ಮುರೂರು. [ಹುಚ್ಚ ವೆಂಕಟ್ ರಿಂದ ಹೊಡೆತ ತಿಂದ ರವಿ ಈ ಬಾರಿ ಔಟ್?]
'ಬಿಗ್ ಬಾಸ್-3' ಕಾರ್ಯಕ್ರಮದಿಂದ ಈ ವಾರ ಔಟ್ ಆದ ರವಿ ಮುರೂರು, ಮನೆಯಿಂದ ನಿರ್ಗಮಿಸುವ ಮುನ್ನ ಅವರಿಗೆ 'ಬಿಗ್ ಬಾಸ್' ವಿಶೇಷ ಅಧಿಕಾರ ನೀಡಿದರು. ['ಬಿಗ್ ಬಾಸ್' ಮನೆಯಿಂದ ಗಾಯಕ ರವಿ ಮುರೂರು ಔಟ್.!]
''ಬಿಗ್ ಬಾಸ್' ಮುಂದಿನ ಆದೇಶದ ವರೆಗೆ ನೆಲದ ಮೇಲೆ ಕಾಲಿಟ್ಟು ನಡೆಯದಂತೆ ಮನೆಯ ಯಾರಾದರೂ ಒಬ್ಬ ಸದಸ್ಯರ ಹೆಸರನ್ನ ರವಿ ಮುರೂರು ಸೂಚಿಸಬೇಕಿತ್ತು''. ಅದರಂತೆ, ಕೃತಿಕಾ ಹೆಸರನ್ನ ರವಿ ಸೂಚಿಸಿದರು.
ಆ ಕ್ಷಣವೇ ಕೃತಿಕಾರನ್ನ ಕ್ರಿಕೆಟರ್ ಎನ್.ಸಿ.ಅಯ್ಯಪ್ಪ ಹೊತ್ತುಕೊಂಡು 'ಬಿಗ್ ಬಾಸ್' ಮನೆ ಒಳಗೆ ಕರೆದುಕೊಂಡು ಹೋದರು.