Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಲಾಜಿಲ್ಲ, ಈ ವಾರ 'ಬಿಗ್ ಬಾಸ್' ಸ್ಪರ್ಧಿಗಳೆಲ್ಲಾ ನಾಮಿನೇಟೆಡ್.!
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ನಟಿ ಸುಕೃತಾ ವಾಗ್ಲೆ ಔಟ್ ಆದ್ಮೇಲೆ, 'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರು ನೇರವಾಗಿ ನಾಮಿನೇಟ್ ಆಗಿದ್ದಾರೆ.
'ಬಿಗ್ ಬಾಸ್' ಮನೆಯಲ್ಲಿ ಪ್ರತಿ ವಾರ ನಾಮಿನೇಷನ್ ಪ್ರಕ್ರಿಯೆ ನಡೆಯುವಾಗ, ಮನೆಯ ಒಬ್ಬೊಬ್ಬ ಸದಸ್ಯರು ಕನ್ಫೆಶನ್ ರೂಮ್ ಒಳಗೆ ಹೋಗಿ ತಮಗೆ ಆಗದ ಇಬ್ಬರು ಸದಸ್ಯರನ್ನ ನಾಮಿನೇಟ್ ಮಾಡಬೇಕಿತ್ತು. ಆದ್ರೆ ಈ ವಾರ ಹಾಗೆ ನಡೆಯಲಿಲ್ಲ.
ಸ್ಪರ್ಧಿಗಳಿಗೆ ಶಾಕ್ ನೀಡಿದ 'ಬಿಗ್ ಬಾಸ್'
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಕೇವಲ ನಾಲ್ಕು ವಾರಗಳು ಬಾಕಿ ಇರುವಾಗಲೇ, ಎಲ್ಲಾ ಸದಸ್ಯರನ್ನ ಡೇಂಜರ್ ಝೋನ್ ಗೆ ತಳ್ಳಿ 'ಬಿಗ್ ಬಾಸ್' ಬಿಗ್ ಶಾಕ್ ನೀಡಿದ್ದಾರೆ. ['ಬಿಗ್ ಬಾಸ್': ಈ ವಾರ ನಿರೀಕ್ಷೆ ಮಾಡದೇ ಇರೋದನ್ನ ನಿರೀಕ್ಷಿಸಿ.!]
'ಬಿಗ್ ಬಾಸ್' ನೀಡಿದ ಕಾರಣ ಏನು.?
ಎಲ್ಲರ ಬಗ್ಗೆ ವೀಕ್ಷಕರ ಅಭಿಪ್ರಾಯ ತಿಳಿಯಲು 'ಬಿಗ್ ಬಾಸ್' ಈ ಕ್ರಮ ಕೈಗೊಂಡಿದ್ದಾರೆ. ['ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಮತ್ತೊಮ್ಮೆ ಅವಕಾಶ ವಂಚಿತ.!]
ಈ ವಾರ ಕ್ಯಾಪ್ಟನ್ ಇಲ್ಲ.!
ಈ ವಾರ 'ದೊಡ್ಮನೆ'ಯ ಎಲ್ಲ ಸದಸ್ಯರು ನಾಮಿನೇಟ್ ಆಗಿರುವುದರಿಂದ, ಯಾರಿಗೂ ಕ್ಯಾಪ್ಟನ್ ಆಗುವ ಅವಕಾಶ ಇಲ್ಲ.
ಮೋಹನ್ ನೀಡಿದ ಪ್ರತಿಕ್ರಿಯೆ ಇದು
''ಜನಕ್ಕೆ ಇಷ್ಟ ಆಗುತ್ತಿರುವ ಕ್ಯಾಂಡಿಡೇಟ್ ಗಳು ಮುಂದೆ ಹೋಗಲಿ ಅಂತ ಹೀಗೆ ಮಾಡಿರಬಹುದು'' ಅಂತ ಮೋಹನ್ ಹೇಳ್ತಿದ್ರು.
'ಡೈರೆಕ್ಟರ್' ಕೀರ್ತಿ ತಲೆಯಲ್ಲಿ ಏನು ಓಡುತ್ತಿದೆ.?
''ಸಿಗುವ ಆರು ಜನರಲ್ಲಿ ಬೆಸ್ಟ್ ಯಾರು ಅಂತ ನೋಡುವ ಬದಲು, ಇಷ್ಟು ಜನರಲ್ಲಿ ಬೆಸ್ಟ್ ಯಾರು ಅಂತ ತಿಳಿಯುವ ಪ್ರಯತ್ನ ಇದು'' ಅಂತಿದ್ದರು ಕೀರ್ತಿ.
ಸುದೀಪ್ ಹೇಳಿದ್ದು ಇದನ್ನೇ.!
''ಇದೇ ಎಕ್ಸ್ ಪೆಕ್ಟ್ ದಿ ಅನ್ ಎಕ್ಸ್ ಪೆಕ್ಟೆಡ್'' ಅಂತ ಸುದೀಪ್ ಹೇಳಿದ ಮಾತನ್ನ 'ಕಿರಿಕ್' ಕೀರ್ತಿ ನೆನಪು ಮಾಡಿಕೊಂಡರು.
ಹತ್ತು ಸ್ಪರ್ಧಿಗಳು ನಾಮಿನೇಟೆಡ್
'ಬಿಗ್ ಬಾಸ್' ಆದೇಶದ ಪ್ರಕಾರ ಈ ವಾರ ಪ್ರಥಮ್, ಕೀರ್ತಿ, ಕಾರುಣ್ಯ ರಾಮ್, ಮೋಹನ್, ಶೀತಲ್ ಶೆಟ್ಟಿ, ಮಾಳವಿಕಾ, ಸಂಜನಾ, ರೇಖಾ, ಶಾಲಿನಿ ಮತ್ತು ಭುವನ್ ನಾಮಿನೇಟ್ ಆಗಿದ್ದಾರೆ.
ಹತ್ತು ಜನರ ಪೈಕಿ ನಿಮ್ಮ ಮತ ಯಾರಿಗೆ.?
ಪ್ರಥಮ್, ಕೀರ್ತಿ, ಕಾರುಣ್ಯ ರಾಮ್, ಮೋಹನ್, ಶೀತಲ್ ಶೆಟ್ಟಿ, ಮಾಳವಿಕಾ, ಸಂಜನಾ, ರೇಖಾ, ಶಾಲಿನಿ ಮತ್ತು ಭುವನ್... ಹತ್ತು ಮಂದಿ ಪೈಕಿ 'ಬಿಗ್ ಬಾಸ್' ಮನೆಯಲ್ಲಿ ಯಾರು ಉಳಿಯಬೇಕು? ಯಾರು ಔಟ್ ಆಗಬೇಕು ಎಂಬ ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....