Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಪ್ರಥಮ ಬಾರಿಗೆ ಪ್ರಥಮ್ ಸೇಫ್ ಝೋನ್ ನಲ್ಲಿ.!
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಸತತ ಎಂಟು ವಾರಗಳ ಕಾಲ ನಾಮಿನೇಟ್ ಆಗಿ ಹೊಸ ಇತಿಹಾಸ ಸೃಷ್ಟಿಸಿದ್ದ 'ಒಳ್ಳೆ ಹುಡುಗ' ಪ್ರಥಮ್ ಒಂಬತ್ತನೇ ವಾರ ಸೇಫ್ ಝೋನ್ ನಲ್ಲಿದ್ದಾರೆ.! [ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]
ಬ್ಯಾಕ್ ಟು ಬ್ಯಾಕ್ ಎಂಟು ಬಾರಿ ಡೇಂಜರ್ ಝೋನ್ ನಲ್ಲಿದ್ದ ಪ್ರಥಮ್ ಗೆ ಈ ವಾರ ಪ್ರಪ್ರಥಮ ಬಾರಿಗೆ 'ಎಲಿಮಿನೇಷನ್ ಟೆನ್ಷನ್' ಇಲ್ಲ.
ಯಾರೂ ವೋಟ್ ಮಾಡಲಿಲ್ಲ ಅಂದುಕೊಳ್ಳಬೇಡಿ.!
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಒಂಬತ್ತನೇ ವಾರ ನಿರ್ದೇಶಕ ಪ್ರಥಮ್ ವಿರುದ್ಧ ಯಾರೂ ವೋಟ್ ಮಾಡಲಿಲ್ಲವೇನೋ ಅಂತ ಲೆಕ್ಕಚಾರ ಹಾಕಬೇಡಿ. ಪ್ರಥಮ್ ಕೈಯಲ್ಲಿ ಇಮ್ಯೂನಿಟಿ ಇರಲಿಲ್ಲ ಅಂದಿದ್ರೆ, ಈ ವಾರ ಕೂಡ ನಾಮಿನೇಟ್ ಆಗ್ತಿದ್ರೋ, ಏನೋ...
[ಸತತ ಎಂಟನೇ ಬಾರಿ ಪುಟ್ಟೇಗೌಡ ಅಲಿಯಾಸ್ ಪ್ರಥಮ್ ಟಾರ್ಗೆಟ್.!]
ಎಲ್ಲಾ ಇಮ್ಯೂನಿಟಿ ಕೃಪೆ.!
ಕಳೆದ ವಾರದ 'ಎಮರ್ಜೆನ್ಸಿ' ಟಾಸ್ಕ್ ನಲ್ಲಿ, 'ಬಿಗ್ ಬಾಸ್' ನೀಡಿದ್ದ ಸವಾಲುಗಳನ್ನ ಸಮರ್ಥವಾಗಿ ನಿಭಾಯಿಸಿದ ಕಾರಣಕ್ಕೆ ಈ ವಾರ ನಾಮಿನೇಷನ್ ನಿಂದ ಪ್ರಥಮ್ ಇಮ್ಯೂನಿಟಿ ಪಡೆದರು. [ಪ್ರಥಮ್ ಇಮ್ಯೂನಿಟಿ ಪಡೆಯಲು 'ಬಿಗ್ ಬಾಸ್' ನೀಡಿದ ವಿಚಿತ್ರ ಸವಾಲು]
ಎಲ್ಲರ ತೂಕ ಕಡಿಮೆ ಆಯ್ತು.!
ಸರ್ವಾಧಿಕಾರಿ ಆಗಿದ್ದ ಪ್ರಥಮ್, 'ಬಿಗ್ ಬಾಸ್' ಮನೆಯ ಸದಸ್ಯರ ತೂಕ ಕಡಿಮೆ ಆಗುವಂತೆ ನೋಡಿಕೊಳ್ಳಬೇಕಿತ್ತು. ಅದರಲ್ಲಿ ಪ್ರಥಮ್ ಯಶಸ್ವಿ ಆದರು. ['ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಪ್ರಥಮ್ 'ಇತಿಹಾಸ' ಪುರುಷ.!]
ಕಡೆಗೂ ಪ್ರಥಮ್ ಸೇಫ್
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಪ್ರಥಮ್ ಸೇಫ್ ಆಗಿದ್ದಾರೆ.
ಡೇಂಜರ್ ಝೋನ್ ನಲ್ಲಿ ಆರು ಮಂದಿ
ನಟಿ ಕಾರುಣ್ಯ ರಾಮ್, ಶೀತಲ್ ಶೆಟ್ಟಿ, ಸಂಜನಾ, ಶಾಲಿನಿ, ಭುವನ್ ಮತ್ತು ಮಸ್ತಾನ್ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.