Don't Miss!
- News Mukhtar Ansari's death: ಉತ್ತರಪ್ರದೇಶದಲ್ಲಿ ಕಿಚ್ಚು ಹಚ್ಚಿದ ಗ್ಯಾಂಗ್ಸ್ಟಾರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ನಿಧನ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೊಡ್ಡ ರಾದ್ಧಾಂತ ಆಗಲು, ಸಮೀರಾಚಾರ್ಯ ಸಿಟ್ಟಾಗಲು ನೇರ ಕಾರಣ ಅನುಪಮಾ.!
Recommended Video
ಕಳೆದ ವಾರ (ನಾಲ್ಕನೇ ವಾರ) 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ರಂಪ, ರಾಮಾಯಣವೇ ನಡೆದು ಹೋಯ್ತು. ಮೂರು ವಾರಗಳ ಕಾಲ ಸೈಲೆಂಟ್ ಆಗಿದ್ದ ಸಮೀರಾಚಾರ್ಯ, ಇದ್ದಕ್ಕಿದ್ದಂತೆ ವೈಲೆಂಟ್ ಆಗಿದ್ದು ತಮ್ಮ ಶರ್ಟ್ ನ ಜಗನ್ನಾಥ್ ಚಂದ್ರಶೇಖರ್ ಹರಿದು ಹಾಕಿದ್ಮೇಲೆ.!
ಅಷ್ಟಕ್ಕೂ, ಸಮೀರಾಚಾರ್ಯ ಅವರ ಶರ್ಟ್ ನ ಜಗನ್ ಹರಿಯಲು ಕಾರಣ ಏನಪ್ಪಾ ಅಂದ್ರೆ....
'ಜ್ಯೂಸ್ ಬೇಕು' ಟಾಸ್ಕ್ ನಲ್ಲಿ ಜ್ಯೂಸ್ ಸಾಮಗ್ರಿಗಳನ್ನ ಎದುರಾಳಿ ತಂಡದಿಂದ ರಕ್ಷಿಸಿಕೊಳ್ಳುವ ಜವಾಬ್ದಾರಿ ಆಯಾ ತಂಡಕ್ಕಿತ್ತು. ಎದುರಾಳಿ ತಂಡದಿಂದ ಕಬ್ಬನ್ನ ಎತ್ತಿಕೊಳ್ಳಲು ಸಮೀರಾಚಾರ್ಯ ಪ್ರಯತ್ನಿಸಿದಾಗ, ಅವರ ಶರ್ಟ್ ನ ಹಿಡಿದು ಎಳೆದು ಹರಿದು ಹಾಕಿದರು ಜಗನ್ನಾಥ್ ಚಂದ್ರಶೇಖರ್. ಇದರಿಂದ ಸಮೀರಾಚಾರ್ಯ ಸಿಟ್ಟಾದರು. ತಮ್ಮ ಸಿಟ್ಟನ್ನ ಇಡೀ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಹೊರ ಹಾಕಿದರು. ಏನೇ ಆದರೂ, ತಮ್ಮ ತಂಡವನ್ನು ಗೆಲ್ಲಿಸಬೇಕು ಎಂಬ ಛಲದಿಂದ ಆಕ್ರಮಣಕಾರಿ ಆಗಿ ಕ್ಯಾಪ್ಟನ್ ಮಾತು ಕೇಳದೆ 'ಕಳಪೆ' ಬೋರ್ಡ್ ಪಡೆದರು.
ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್.!
ಅಸಲಿಗೆ, ಎದುರಾಳಿ ತಂಡದಿಂದ ಕಬ್ಬನ್ನ ಕದಿಯುವ ಐಡಿಯಾ ಸಮೀರಾಚಾರ್ಯ ಅವರಿಗೆ ನೀಡಿದ್ದು ಯಾರು ಗೊತ್ತಾ.? ಬೇರಾರೂ ಅಲ್ಲ, ಸಮೀರಾಚಾರ್ಯ ತಂಡದಲ್ಲೇ ಇದ್ದ 'ಅಕ್ಕ' ಅನುಪಮಾ ಗೌಡ.
ಕಬ್ಬನ್ನ ಎತ್ತುವ ಪ್ಲಾನ್ ಕೊಟ್ಟು, ನಂತರ ಅದರಿಂದ ಜಗನ್-ಸಮೀರಾಚಾರ್ಯ ನಡುವೆ ನಡೆದ ರಾದ್ಧಾಂತಕ್ಕೆ ಅನುಪಮಾ ಗೌಡ ಮೂಕ ಪ್ರೇಕ್ಷಕರಾಗಿದ್ದರೇ, ಹೊರತು ಸಮೀರಾಚಾರ್ಯಗೆ ಐಡಿಯಾ ಕೊಟ್ಟಿದ್ದೇ ತಾವು ಎಂದು ಅನುಪಮಾ ಗೌಡ ಬಾಯಿ ಬಿಡಲಿಲ್ಲ.
ಸರಿ-ತಪ್ಪು ನೋಡದೆ ರಿಯಾಝ್ ಮೇಲೆ ಉಗ್ರ ಪ್ರತಾಪ ತೋರಿದ ಜಗನ್, ಚಂದ್ರು.!
ಟಾಸ್ಕ್ ಮುಗಿಯುವವರೆಗೂ ಈ ಸತ್ಯ ಜಗನ್ನಾಥ್ ಚಂದ್ರಶೇಖರ್ ಅವರಿಗೂ ಗೊತ್ತಿರಲಿಲ್ಲ. ಸತ್ಯ ಬಯಲಾದ ಮೇಲೆ, ಅನುಪಮಾ ಗೌಡ ಮೇಲೆ ಜಗನ್ ಕೋಪಿಸಿಕೊಂಡರು.
ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದ ಜಗನ್ ಗೆ ಕೂಗಾಡೋದು ಬಿಟ್ಟು ಬೇರೇನೂ ಬರಲ್ಲ.!
''ಕಬ್ಬು ಎಳೆಯಿರಿ ಅಂತ ಹೇಳಿ, ಅದರಿಂದ ಗಲಾಟೆ ಆದ್ಮೇಲೆ, ನನ್ನ ಬಳಿ ಬಂದು ಹೇಳಬಹುದಿತ್ತು. ನೀನು ಹೇಳಿದ್ರೆ, ನನಗೆ ಅವರ ಮೇಲೆ ಆ ರಿಯಾಕ್ಷನ್ ಬರುತ್ತಿರಲಿಲ್ಲ'' ಅಂತ ಅನುಪಮಾ ಗೌಡ ಬಳಿ ಜಗನ್ ಹೇಳಿದರು.