ಅಂತೂ ದಿವಾಕರ್ ಬಳಿ ಕ್ಷಮೆ ಕೇಳಿದ ಸೆಲೆಬ್ರಿಟಿ ಸ್ಪರ್ಧಿಗಳು.!

By Harshitha

'ಬಿಗ್ ಬಾಸ್' ಮನೆ ಸೇರಿರುವ 'ಸೇಲ್ಸ್ ಮ್ಯಾನ್' ದಿವಾಕರ್ ಮೊದಲ ದಿನದಿಂದಲೂ ಟಾರ್ಗೆಟ್ ಆಗಿದ್ದಾರೆ. ಸ್ವಲ್ಪ ರಫ್ ಅಂಡ್ ಟಫ್ ಆಗಿ ಕಾಣುವ ದಿವಾಕರ್ ಅಂದ್ರೆ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಅಷ್ಟಕಷ್ಟೆ. ಹೀಗಾಗಿ, ಒಂದಲ್ಲ ಒಂದು ಕಾರಣಕ್ಕೆ ದಿವಾಕರ್ ಜೊತೆಗೆ ಸೆಲೆಬ್ರಿಟಿ ಸ್ಪರ್ಧಿಗಳ ಕಿತ್ತಾಟ ನಡೆಯುತ್ತಲೇ ಇದೆ.

'ಕಳಪೆ' ಬೋರ್ಡ್ ಗೂ ಪಾತ್ರರಾದ ದಿವಾಕರ್ 'ಬಿಗ್ ಬಾಸ್' ಮನೆಯಲ್ಲಿ ದಂಗೆ ಎದ್ದಮೇಲೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಯ್ತು. ಇಷ್ಟೆಲ್ಲ ಆದ್ಮೇಲೆ, ಅವರವರ ತಪ್ಪಿನ ಜ್ಞಾನೋದಯ ಅವರವರಿಗೆ ಆಗಿರಬೇಕು. ಹೀಗಾಗಿ, ಸುದೀಪ್ ಮುಂದೆ ಸೆಲೆಬ್ರಿಟಿ ಸ್ಪರ್ಧಿಗಳು ಒಬ್ಬೊಬ್ಬರಾಗಿ 'ಕಾಮನ್ ಮ್ಯಾನ್' ದಿವಾಕರ್ ಬಳಿ ಕ್ಷಮೆ ಕೇಳಲು ಆರಂಭಿಸಿದರು. ಮುಂದೆ ಓದಿರಿ....

ವಾರದ ಕಥೆ ಕಿಚ್ಚನ ಜೊತೆ...

ವಾರದ ಕಥೆ ಕಿಚ್ಚನ ಜೊತೆ...

ಇಡೀ ವಾರದಲ್ಲಿ ನಡೆದ ಗದ್ದಲ-ಗಲಾಟೆ, ವಾದ-ವಿವಾದ-ವಾಕ್ಸಮರ ಬಗ್ಗೆ ಪಂಚಾಯತಿ ನಡೆಸಲು ಸುದೀಪ್ ಆರಂಭಿಸಿದರು. ''ನೀವು ಯಾರಿಗಾದರೂ ಕ್ಷಮೆ ಕೇಳಲು, ಯಾರಿಂದ ಕ್ಷಮೆ ಕೇಳಿಸಿಕೊಳ್ಳಲು ಇಚ್ಛಿಸುತ್ತೀರಾ.?'' ಎಂದು 'ಬಿಗ್ ಬಾಸ್' ಮನೆ ಸದಸ್ಯರಲ್ಲಿ ಸುದೀಪ್ ಕೇಳಿದರು. ಆಗ ಕೆಲ ಸೆಲೆಬ್ರಿಟಿ ಸ್ಪರ್ಧಿಗಳು ದಿವಾಕರ್ ಬಳಿ ಕ್ಷಮೆಯಾಚಿಸಿದರು.

ಕ್ಷಮೆ ಕೇಳಿದ ಶ್ರುತಿ ಪ್ರಕಾಶ್

ಕ್ಷಮೆ ಕೇಳಿದ ಶ್ರುತಿ ಪ್ರಕಾಶ್

ಚೆನ್ನಾಗಿ ಪರ್ಫಾಮ್ ಮಾಡಿದರೂ, 'ಕಳಪೆ' ಬೋರ್ಡ್ ನೀಡಲು ನಿರ್ಧರಿಸಿದ ಶ್ರುತಿ ಪ್ರಕಾಶ್, ದಿವಾಕರ್ ಗೆ ಕ್ಷಮೆ ಕೇಳಿದರು. ಹಾಗೆ, ತಮಗೆ ಗೌರವ ಕೊಡದ ದಿವಾಕರ್ ರಿಂದ ಕ್ಷಮೆ ಕೇಳಲು ಇಚ್ಛೆಸುತ್ತೇನೆ ಎಂದರು ಶ್ರುತಿ ಪ್ರಕಾಶ್.

'ಸಾರಿ' ಎಂದ ಜೆಕೆ

'ಸಾರಿ' ಎಂದ ಜೆಕೆ

''ನಾನು ದಿವಾಕರ್ ಗೆ ಸಾರಿ ಕೇಳಲು ಇಷ್ಟ ಪಡುತ್ತೇನೆ. ಯಾಕಂದ್ರೆ, ಕೋಪದಲ್ಲಿ 'ಯಾವ್ಯಾವನೋ, ನನ್ನ ಬಗ್ಗೆ ಮಾತನಾಡುವುದು ನನಗೆ ಇಷ್ಟ ಇಲ್ಲ'' ಅಂತ ಹೇಳಿದ್ದೆ. ಆ ಮಾತು ಹೇಳಬಾರದಿತ್ತು. ಅದಕ್ಕೆ ಕ್ಷಮೆ ಕೇಳುತ್ತೇನೆ'' ಎಂದು ಜೆ.ಕೆ (ಕಾರ್ತಿಕ್)

ಕ್ಷಮೆ ಕೋರಿದ ಜಯಶ್ರೀನಿವಾಸನ್

ಕ್ಷಮೆ ಕೋರಿದ ಜಯಶ್ರೀನಿವಾಸನ್

''ದಿವಾಕರ್ ಬಳಿ ನಾನು ಕ್ಷಮೆ ಕೇಳಬೇಕು. ಯಾಕಂದ್ರೆ, 'ಕಳಪೆ' ಬೋರ್ಡ್ ಹಾಕಿಕೊಳ್ಳುವ ವಿಷಯ ಬಂದಾಗ, ಅವರ ಬಗ್ಗೆ ನಾನು ದನಿ ಎತ್ತಬೇಕಿತ್ತು. ಸ್ವಲ್ಪ ಲೇಟ್ ಆಗಿ ದನಿ ಎತ್ತಿದೆ'' ಎಂದರು ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್.

ಹಾಗೆ ಮಾತನಾಡಬಾರದಿತ್ತು ಎಂದ ಅನುಪಮ

ಹಾಗೆ ಮಾತನಾಡಬಾರದಿತ್ತು ಎಂದ ಅನುಪಮ

''ದಿವಾಕರ್ ಬಳಿ ಕ್ಷಮೆ ಕೇಳುತ್ತೇನೆ. ಯಾಕಂದ್ರೆ, ಕಳಪೆ ಬೋರ್ಡ್ ವಿಚಾರದಲ್ಲಿ ಮಾತು ನಡೆದಾಗ 'ಲಕ್ಷುರಿ ಬಜೆಟ್ ಮುಟ್ಟುವ ಹಾಗಿಲ್ಲ' ಅಂತ ಹೇಳಿಬಿಟ್ಟೆ. ತಿನ್ನುವ ವಿಷಯದಲ್ಲಿ ನಾನು ಹಾಗೆ ಮಾತನಾಡಬಾರದಿತ್ತು. ಹೀಗಾಗಿ ಅವರಲ್ಲಿ ಕ್ಷಮೆ ಕೇಳುತ್ತೇನೆ'' ಎಂದರು ನಟಿ ಅನುಪಮಾ ಗೌಡ.

ಒರಟ ಅಂತ ಹೇಳಬಾರದಿತ್ತು

ಒರಟ ಅಂತ ಹೇಳಬಾರದಿತ್ತು

''ದಿವಾಕರ್ ಗೆ ಒರಟ ಅಂತ ಹೇಳಿಬಿಟ್ಟೆ. ಅದರಿಂದ ಅವರ ಮನಸ್ಸಿಗೆ ನೋವಾಯ್ತು. ಹೀಗಾಗಿ ದಿವಾಕರ್ ಗೆ ಕ್ಷಮೆ ಕೇಳುತ್ತೇನೆ'' ಎಂದರು ಸಿಹಿ ಕಹಿ ಚಂದ್ರು.

ಕ್ಷಮೆ ಹೇಳಲ್ಲ, ಕೇಳಿಸಿಕೊಳ್ಳಲ್ಲ ಎಂದ ದಿವಾಕರ್

ಕ್ಷಮೆ ಹೇಳಲ್ಲ, ಕೇಳಿಸಿಕೊಳ್ಳಲ್ಲ ಎಂದ ದಿವಾಕರ್

ತಮ್ಮ ಪ್ರಕಾರ ''ಬಿಗ್ ಬಾಸ್' ಅಂದ್ರೆ ದೇವರು'' ಎನ್ನುವ ದಿವಾಕರ್, ''ನಾನು ಯಾರಿಗೂ ಸಾರಿ ಕೇಳಲ್ಲ, ಯಾರ ಹತ್ತಿರವೂ ಸಾರಿ ಕೇಳಿಸಿಕೊಳ್ಳುವುದಿಲ್ಲ. ಯಾಕಂದ್ರೆ, ಸಾರಿ ಕೇಳಿದರೆ ಮತ್ತದೇ ತಪ್ಪು ಮಾಡುತ್ತೇವೆ. ಅದೇ ತಪ್ಪು ಪುನರಾವರ್ತನೆ ಆಗಬಾರದು. ಅರ್ಥ ಮಾಡಿಕೊಂಡು ಹೋಗಬೇಕು. ಹೀಗಾಗಿ, ಯಾರ ಬಳಿಯೂ ಸಾರಿ ಕೇಳುವುದು ಬೇಡ, ಕೇಳಿಸಿಕೊಳ್ಳುವುದೂ ಬೇಡ ಅಂತ ನಿರ್ಧಾರ ಮಾಡಿದ್ದೇನೆ'' ಎಂದರು ದಿವಾಕರ್.

More from Filmibeat

English summary
Bigg Boss Kannada 5: Celebrity contestants apologize Divakar in front of Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X