'ಬಿಗ್ ಬಾಸ್' ಮನೆಯಲ್ಲಿ ಒಡಕು: ಸ್ಪರ್ಧಿಗಳು ಏನಂತಾರೆ.?

By Harshitha

Recommended Video

ಬಿಗ್ ಬಾಸ್ ಕನ್ನಡ ಸೀಸನ್ 5 : ಸುದೀಪ್ ಗೆ ಎಲ್ಲಾ ಸ್ಪರ್ಧಿಗಳು ದೂರಿದ್ದು ಹೀಗೆ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆಗಿ ಎರಡು ವಾರಗಳು ಕಳೆದಿವೆ ಅಷ್ಟೇ. ಅಷ್ಟು ಬೇಗ 'ಬಿಗ್ ಬಾಸ್' ಮನೆಯಲ್ಲಿ ಒಡಕು ಮೂಡಿದೆ. 'ದೊಡ್ಮನೆ' ಇಬ್ಭಾಗ ಆಗಿದೆ. ಸೆಲೆಬ್ರಿಟಿ ಸ್ಪರ್ಧಿಗಳು ಹಾಗೂ ಜನಸಾಮಾನ್ಯ ಸ್ಪರ್ಧಿಗಳು ಎಂಬ ಎರಡು ಗುಂಪುಗಳಾಗಿವೆ.

''ನಮ್ಮನ್ನ ತಿರಸ್ಕಾರ ಮನೋಭಾವದಿಂದ ಸೆಲೆಬ್ರಿಟಿ ಸ್ಪರ್ಧಿಗಳು ಕಾಣುತ್ತಿದ್ದಾರೆ. ನಮ್ಮನ್ನೆಲ್ಲ ಮೂಲೆಗುಂಪು ಮಾಡುತ್ತಿದ್ದಾರೆ'' ಎಂದು ಜನಸಾಮಾನ್ಯ ಸ್ಪರ್ಧಿಗಳೇ ಹೇಳಿಕೊಂಡಿದ್ದರು. ಇದಕ್ಕೆ ಸೆಲೆಬ್ರಿಟಿ ಸ್ಪರ್ಧಿಗಳು ಏನಂತಾರೆ.?

ಜನಸಾಮಾನ್ಯ ಸ್ಪರ್ಧಿಗಳನ್ನು ಸೆಲೆಬ್ರಿಟಿ ಸ್ಪರ್ಧಿಗಳು ಕೀಳಾಗಿ ನೋಡುತ್ತಿರುವುದು ಯಾಕೆ.? ಕಾಮನ್ ಮ್ಯಾನ್ ನ ಸೆಲೆಬ್ರಿಟಿಗಳು ತುಳಿಯುತ್ತಿದ್ದಾರಾ.? ಎಂಬ ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಮುಂದೆ ಸ್ಪರ್ಧಿಗಳು ಉತ್ತರಿಸಿದ್ದಾರೆ. ಯಾರ್ಯಾರು, ಏನೇನು ಹೇಳಿದರು ಎಂಬುದನ್ನು ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ನಮ್ಮನ್ನ ಕೇರ್ ಲೆಸ್ ಆಗಿ ತೆಗೆದುಕೊಂಡಿದ್ದಾರೆ ಎಂದ ದಿವಾಕರ್

ನಮ್ಮನ್ನ ಕೇರ್ ಲೆಸ್ ಆಗಿ ತೆಗೆದುಕೊಂಡಿದ್ದಾರೆ ಎಂದ ದಿವಾಕರ್

''ನಾವು ಕಾಮನ್ ಮ್ಯಾನ್ ಆಗಿರುವುದರಿಂದ ಸೆಲೆಬ್ರಿಟಿಗಳೆಲ್ಲ ನಮ್ಮನ್ನ ಒಂಥರಾ ನೋಡುತ್ತಾರೆ. ಕೆಲಸ ಮಾಡಲು ಬಿಡುವುದಿಲ್ಲ. ನಮ್ಮನ್ನ ತಿರಸ್ಕಾರ ಮನೋಭಾವದಿಂದ ನೋಡುತ್ತಾರೆ. ನಮ್ಮನ್ನ ಕೇರ್ ಲೆಸ್ ಆಗಿ ತೆಗೆದುಕೊಳ್ಳುತ್ತಾರೆ. ನಾವು ಕಾಮಿಡಿ ಮಾಡಿದರೂ ನಗುವುದಿಲ್ಲ'' ಎಂದು ದಿವಾಕರ್, ಸುದೀಪ್ ಮುಂದೆ ಹೇಳಿದರು.

ಎಲ್ಲರೂ ಒಂದೇ.!

ಎಲ್ಲರೂ ಒಂದೇ.!

''ಇಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ಇದ್ದೇವೆ. ಸೆಲೆಬ್ರಿಟಿ-ಕಾಮನ್ ಮ್ಯಾನ್ ಎಂಬ ಭೇದಭಾವ ಇಲ್ಲ. ಅವರಿಗೆ ಅವರೇ inferiority complex ಹುಟ್ಟಿಸಿಕೊಂಡುಬಿಟ್ಟಿದ್ದಾರೆ'' - ಜಗನ್ನಾಥ್, ನಟ

ಎರಡು ಗುಂಪಾಗಿರುವುದು ನಿಜ

ಎರಡು ಗುಂಪಾಗಿರುವುದು ನಿಜ

''ನಾವ್ಯಾರೂ ಸೆಲೆಬ್ರಿಟಿಗಳು ಅಂತಿಲ್ಲ. ನಾವೆಲ್ಲರೂ ಮನುಷ್ಯರು. ನಾವೂ ತಿನ್ನುವುದು ಅನ್ನ. ಅದನ್ನ ಅವರು ಅರ್ಥ ಮಾಡಿಕೊಳ್ಳುತ್ತಿಲ್ಲ. ನನಗೆ ಕಾಣುತ್ತಿರುವ ಹಾಗೆ ಎರಡು ಗುಂಪಾಗಿದೆ. ಅವರೆಲ್ಲ ಹೊರಗಡೆ ಇರುತ್ತಾರೆ. ನಮ್ಮ ಜೊತೆ ಬಂದು ಮಾತನಾಡುವುದಿಲ್ಲ'' - ಅನುಪಮಾ ಗೌಡ, ನಟಿ

ಮನೆ ಇಬ್ಭಾಗ ಆಗಿದೆ

ಮನೆ ಇಬ್ಭಾಗ ಆಗಿದೆ

''ಮನೆ ಇಬ್ಭಾಗ ಆಗಿದೆ. ನಮ್ಮ ಮಾತುಗಳಿಗೆ ಇಲ್ಲಿ ಜಾಗ ಇಲ್ಲ. ಟೀಮ್ ಆದಾಗ ನಮ್ಮ ಅಭಿಪ್ರಾಯಗಳಿಗೆ ಬೆಲೆ ಇಲ್ಲ. ಎಲ್ಲವನ್ನೂ ಅವರವರೇ ನಿರ್ಧಾರ ಮಾಡಿಕೊಳ್ಳುತ್ತಾರೆ'' - ಸಮೀರಾಚಾರ್ಯ

ಜಯಶ್ರೀನಿವಾಸನ್ ಹೇಳಿದಿಷ್ಟು

ಜಯಶ್ರೀನಿವಾಸನ್ ಹೇಳಿದಿಷ್ಟು

''ಕಾಮನ್ ಮ್ಯಾನ್ ಎಂಬ ಫೀಲಿಂಗ್ ದಿವಾಕರ್ ಹಾಗೂ ಮೇಘ ರವರಲ್ಲಿ ಇದೆ. ದಿವಾಕರ್ ಗೆ ತಮ್ಮನ್ನ ತಾವು ಪ್ರೆಸೆಂಟ್ ಮಾಡಿಕೊಳ್ಳಬೇಕು ಎಂಬ ಆಸೆ ಜಾಸ್ತಿ ಇದೆ'' - ಜಯಶ್ರೀನಿವಾಸನ್, ಸಂಖ್ಯಾಶಾಸ್ತ್ರಜ್ಞ

ಎರಡು ಗುಂಪಾಗಿರುವುದು ಸತ್ಯ

ಎರಡು ಗುಂಪಾಗಿರುವುದು ಸತ್ಯ

''ಗುಂಪು ಆಗಿದೆ. ಅದನ್ನ ಸರಿಪಡಿಸಲು ಪ್ರಯತ್ನ ಮಾಡುತ್ತಿದ್ದೇನೆ'' - ಸಿಹಿ ಕಹಿ ಚಂದ್ರು

ರಿಯಾಝ್ ಅನಿಸಿಕೆ ಇದು

ರಿಯಾಝ್ ಅನಿಸಿಕೆ ಇದು

''ಊಟ ಬಡಿಸುವಾಗ ಕಾಮನ್ ಮ್ಯಾನ್ ಹಾಗೂ ಸೆಲೆಬ್ರಿಟಿಗಳ ನಡುವೆ ಭೇದಭಾವ ಮಾಡುತ್ತಾರೆ. ಇಷ್ಟ ಬಂದವರಿಗೆ ಹೆಚ್ಚು ಊಟ ಕೊಡುತ್ತಾರೆ. ನಡವಳಿಕೆ ಮೂಲಕ ಭೇದಭಾವ ಮಾಡುತ್ತಿರುವುದು ಗೊತ್ತಾಗುತ್ತೆ. ನನ್ನನ್ನ ದಯಾಳ್ ಬಾಯಿಗೆ ಬಂದ ಹಾಗೆ ಬೈಯುತ್ತಿರುವಾಗ, ಯಾರೂ ಕೂಡ ಅವರು ಮಾತನಾಡುತ್ತಿರುವುದು ತಪ್ಪು ಅಂತ ಹೇಳಲಿಲ್ಲ. ಅದೇ ಚಂದ್ರು ಸರ್ ಗೆ ಯಾರಾದರೂ ಏನಾದರೂ ಅಂದ್ರೆ ಗೌರವ ಕೊಡಬೇಕು ಅಂತ ಎಲ್ಲರೂ ಹೇಳುತ್ತಾರೆ. ದಯಾಳ್ ಎಲ್ಲಿ ಇರುತ್ತಾರೋ, ಅಲ್ಲಿ ನಾನಿರಲು ನನಗೆ ಇಷ್ಟ ಆಗುತ್ತಿಲ್ಲ. ಅವರಿಗೆ ಮನುಷ್ಯತ್ವ ಇಲ್ಲ'' - ರಿಯಾಝ್

ಕಾಮನ್ ಮ್ಯಾನ್ ಫೀಲಿಂಗ್ ನಲ್ಲೇ ಬಂದಿದ್ದಾರೆ

ಕಾಮನ್ ಮ್ಯಾನ್ ಫೀಲಿಂಗ್ ನಲ್ಲೇ ಬಂದಿದ್ದಾರೆ

''ಒಳಗಡೆ ಬರುವಾಗಲೇ, ಎಲ್ಲರೂ ಕಾಮನ್ ಮ್ಯಾನ್ ಫೀಲಿಂಗ್ ನಲ್ಲೇ ಬಂದಿದ್ದಾರೆ. ಅದೇ ಅವರ ಪ್ರಾಬ್ಲಂ. ಒಳಗಡೆ ಅದನ್ನೇ ಮುಂದುವರೆಸುತ್ತಿದ್ದಾರೆ. ನಾನು ರಿಯಾಝ್ ಅವರನ್ನ ಬೈದಿಲ್ಲ. ಈ ಬಗ್ಗೆ ನಾನು ಕ್ಲಿಯರ್ ಆಗಿದ್ದೇನೆ. ನಾನು ಇರುವ ಕಡೆ ರಿಯಾಝ್ ಬರಲ್ಲ ಅಂತ ಹೇಳಿದಕ್ಕೆ ನನಗೆ ಬೇಜಾರು ಆಗಿಲ್ಲ. ಅವರು ನನ್ನನ್ನ ಅರ್ಥ ಮಾಡಿಕೊಂಡಿಲ್ಲ. ಅರ್ಥ ಮಾಡಿಕೊಂಡರೆ ಖಂಡಿತವಾಗಿಯೂ ನನ್ನನ್ನ ಮಿಸ್ ಮಾಡಿಕೊಳ್ಳುತ್ತಾರೆ. ಒಳಗಡೆ ಇದ್ದರೆ.... ನನ್ನ ಪ್ರಕಾರ, ಅವರ ಬುದ್ಧಿವಂತಿಕೆ ಸ್ವಲ್ಪ ಕಮ್ಮಿ. ನೋಡೋಕೆ, ಮಾತನಾಡುವಾಗ ಸ್ಮಾರ್ಟ್ ಆಗಿ ಕಂಡರೂ, ಜನರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಅವರಿಗನ್ನೂ ಪಳಗಬೇಕು'' - ದಯಾಳ್ ಪದ್ಮನಾಭನ್, ನಿರ್ದೇಶಕ

ಸುದೀಪ್ ಹೇಳಿದ್ದೇನು.?

ಸುದೀಪ್ ಹೇಳಿದ್ದೇನು.?

''ವೀಕ್ಷಕರ ಪ್ರಕಾರ, ಮನೆ ಇಬ್ಭಾಗ ಆಗಿದೆ. ಮನೆ ಒಳಗೆ ಇರುವವರು ಅಡುಗೆ ಮಾಡುತ್ತಾ, ಅಡುಗೆ ಮನೆಯನ್ನು ಕಂಟ್ರೋಲ್ ಮಾಡುತ್ತಾ, ಇಡೀ ಮನೆಯ ವ್ಯವಹಾರವನ್ನು ಕಂಟ್ರೋಲ್ ಮಾಡುತ್ತಿದ್ದಾರೆ. ಹೊರಗಡೆ ಕೂತಿರುವವರು ಒಳಗಿರುವವರ ಬಗ್ಗೆ ಬೇಜಾರು ಪಟ್ಟುಕೊಂಡು ನಿವೇದಿತಾ ಗೌಡ ಹೇಳಿದ ಹಾಗೆ insects ಮಧ್ಯೆ ಇದ್ದೀರಾ. ಇದು ಹೊರಗಡೆ ಕಾಣುತ್ತಿರುವುದು. ಇದು ನನ್ನ ಅಭಿಪ್ರಾಯ ಅಲ್ಲ'' ಎಂದು ಸುದೀಪ್ ಹೇಳಿದರು.

More from Filmibeat

English summary
Bigg Boss Kannada 5: Week 2: Contestants speak about partiality and groupism in the house in front of Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X