Just In
Don't Miss!
- News
ವ್ಯರ್ಥ ಮಾಡಲು ಸಮಯವಿಲ್ಲ: ಮೊದಲ ದಿನವೇ ಕರ್ತವ್ಯದಲ್ಲಿ ಬ್ಯುಸಿಯಾದ ಬೈಡನ್
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೊದಲು ಶ್ರುತಿ ನಂತರ ನಿವೇದಿತಾ: ಸದ್ಯ ಉಳಿದಿರೋದು ಮೂವರು ಮಾತ್ರ.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಯ ಮೊದಲ ದಿನವಾದ ಇಂದು ಎರಡು ವಿಕೆಟ್ ಪತನಗೊಂಡಿದೆ. ಮೊದಲು ಗಾಯಕಿ ಮತ್ತು ನಟಿ ಶ್ರುತಿ ಪ್ರಕಾಶ್ ಎಲಿಮಿನೇಟ್ ಆದರೆ, ನಂತರ ಶ್ರುತಿ ಹಾದಿಯಲ್ಲೇ ಸಾಗಿದವರು 'ಬೊಂಬೆ' ನಿವೇದಿತಾ ಗೌಡ.
ಜನಸಾಮಾನ್ಯ ಸ್ಪರ್ಧಿಯಾಗಿ 'ಬಿಗ್ ಬಾಸ್' ಮನೆಯೊಳಗೆ ಬಂದಿದ್ದ ನಿವೇದಿತಾ ಗೌಡ, 105 ದಿನಗಳ ಕಾಲ ಕ್ಯಾಮರಾ ಮುಂದೆ ಬಂಧಿಯಾಗಿದ್ದರು. 'ಬಿಗ್' ಮನೆಯೊಳಗೆ ಹೋದ್ಮೇಲೆ ಅಪಾರ ಅಭಿಮಾನಿ ಬಳಗ ಗಳಿಸಿದ ನಿವೇದಿತಾ ಗೌಡ, ಗೆಲ್ಲಲು ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ ಎಲಿಮಿನೇಟ್ ಆದರು.
'ದೊಡ್ಮನೆ'ಯೊಳಗೆ ವಿವಾದಗಳಿಗೆ ಸಿಲುಕದೆ, ಡಬಲ್ ಗೇಮ್ ಆಡದೆ ಸ್ವಚ್ಛ ಮನಸ್ಸಿನಿಂದ ಸದಾ ಖುಷಿ ಖುಷಿಯಾಗಿ ಇರುತ್ತಿದ್ದವರು ನಿವೇದಿತಾ ಗೌಡ. ಚಂದನ್ ಶೆಟ್ಟಿಗೆ ಕ್ಲೋಸ್ ಫ್ರೆಂಡ್ ಆಗಿದ್ದವರು ನಿವೇದಿತಾ ಗೌಡ. ನಿವೇದಿತಾ ಬಗ್ಗೆ ಚಂದನ್ ಶೆಟ್ಟಿ ಸಂಯೋಜಿಸಿದ್ದ 'ಗೊಂಬೆ... ಗೊಂಬೆ...' ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
'ಬಿಗ್ ಬಾಸ್' ಸ್ಪರ್ಧಿಯಾಗಲೇಬೇಕು ಎಂದು ನಾಲ್ಕು ವರ್ಷಗಳಿಂದ ಕನಸು ಕಂಡಿದ್ದ ನಿವೇದಿತಾ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಭಾಗವಹಿಸಿ ಟಾಪ್ 4 ಹಂತದವರೆಗೂ ಬರುವಲ್ಲಿ ಯಶಸ್ವಿಯಾದರು.
ನಿವೇದಿತಾ ಗೌಡ ಜೊತೆಗೆ ಶ್ರುತಿ ಪ್ರಕಾಶ್, ಜಯರಾಂ ಕಾರ್ತಿಕ್, ದಿವಾಕರ್ ಹಾಗೂ ಚಂದನ್ ಶೆಟ್ಟಿ ಫೈನಲಿಸ್ಟ್ ಆಗಿದ್ದರು. ಐದು ಜನರ ಪೈಕಿ ಮೊದಲು ಶ್ರುತಿ ಎಲಿಮಿನೇಟ್ ಆದರು. ಬಳಿಕ ನಿವೇದಿತಾ ಗೌಡ ಔಟ್ ಆದರು.
ಸದ್ಯ ಟಾಪ್ 3 ಹಂತದಲ್ಲಿ ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್ ಹಾಗೂ ದಿವಕಾರ್ ಮಾತ್ರ ಇದ್ದಾರೆ. ಫೈನಲ್ ಹಂತ ತಲುಪಿದ್ದ ಇಬ್ಬರು ಹೆಣ್ಮಕ್ಕಳು ಹೊರಗೆ ಬಂದಿದ್ದಾರೆ.
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ವಿನ್ನರ್ ಯಾರು ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.