Don't Miss!
- Automobiles Honda: ಭಾರತದಲ್ಲಿ ಹೋಂಡಾ ಹೊಸ ಮೈಲಿಗಲ್ಲು: ಎಷ್ಟು ಮಂದಿಯ ಬಳಿ ಆಕ್ಟೀವಾ, ಶೈನ್ ಇದೆ ಹೇಳಿ?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- News India Unemployment: ದೇಶದಲ್ಲಿ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಬೆಚ್ಚಿಬೀಳಿಸುವ ವರದಿ ಬಹಿರಂಗ!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರನ್ನರ್ ಅಪ್ ಆದ ದಿವಾಕರ್ ಗೆ ಸಿಕ್ಕ ಬಹುಮಾನ ಇದೇ.!
Recommended Video
ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಮುಗಿದು ಹೋಗಿದೆ. ಹದಿನೈದು ವಾರಗಳ 'ಬಿಗ್ ಬಾಸ್' ಶೋ ಸಮಾಪ್ತಿ ಆಗಿದೆ. ಕನ್ನಡ Rapper ಚಂದನ್ ಶೆಟ್ಟಿ ಈ ಬಾರಿ ವಿಜೇತರಾಗಿ ಟ್ರೋಫಿಗೆ ಮುತ್ತಿಟ್ಟಿದ್ದಾರೆ.
ಜನಸಾಮಾನ್ಯರಿಗೆ ಈ ಬಾರಿ ಅವಕಾಶ ಕಲ್ಪಿಸಿದ್ದರಿಂದ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕಾಮನ್ ಮ್ಯಾನ್ ದಿವಾಕರ್ ಗೆಲ್ಲಬಹುದು ಎಂಬ ಊಹೆ ಕೆಲವರಿಗೆ ಇತ್ತು. ಆದ್ರೆ, ಸೆಲೆಬ್ರಿಟಿ ಕಂಟೆಸ್ಟೆಂಟ್ ಆಗಿ 'ಬಿಗ್ ಬಾಸ್' ಮನೆಯೊಳಗೆ ಹೋಗಿ, ಜನಸಾಮಾನ್ಯನಂತೆ, ಜನಸಾಮಾನ್ಯರ ಜೊತೆ ಸ್ನೇಹ ಬೆಳೆಸಿದ್ದ ಚಂದನ್ ಶೆಟ್ಟಿ ಗೆಲುವಿನ ನಗೆ ಬೀರಿದ್ದಾರೆ.
ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ದಿವಾಕರ್ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆಗಿದ್ದಾರೆ. ಎರಡನೇ ಸ್ಥಾನ ಗಿಟ್ಟಿಸಿಕೊಂಡ ದಿವಾಕರ್ ಗೆ 'ಬಿಗ್ ಬಾಸ್' ಕಡೆಯಿಂದ ಸಿಕ್ಕ ಬಹುಮಾನ ಏನು.? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿರಿ...
ವ್ಯಾಸಲೀನ್ ಕಡೆಯಿಂದ ಬಹುಮಾನ
105 ದಿನಗಳ ಕಾಲ 'ಬಿಗ್ ಬಾಸ್' ಮನೆಯಲ್ಲಿ ಇದ್ದ ದಿವಾಕರ್ ಅವರಿಗೆ ವ್ಯಾಸಲೀನ್ ಕಡೆಯಿಂದ ಗಿಫ್ಟ್ ಹ್ಯಾಂಪರ್ ಲಭಿಸಿತು.
ದಿವಾಕರ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸಂಗತಿ ಲೀಕ್ ಆಗಿದೆ.! ಇದು ಸತ್ಯವೋ.? ಸುಳ್ಳೋ.?
ರನ್ನರ್ ಅಪ್ ಟ್ರೋಫಿ
ಎರಡನೇ ಸ್ಥಾನ ಪಡೆದ ದಿವಾಕರ್ 'ರನ್ನರ್ ಅಪ್' ಟ್ರೋಫಿಯನ್ನ ಎತ್ತಿ ಹಿಡಿದರು.
ಮೊದಲ ದಿನವೇ ನಾಮಿನೇಟ್ ಆದ 'ಸೇಲ್ಸ್ ಮ್ಯಾನ್' ದಿವಾಕರ್ ಬದುಕಿನ ಕಥೆ-ವ್ಯಥೆ
ಒಂದು ಲಕ್ಷ ರೂಪಾಯಿ
'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಎರಡನೇ ಸ್ಥಾನ ಪಡೆದ ದಿವಾಕರ್ ಗೆ 'ಸೆರಾ' ಕಡೆಯಿಂದ ಬಹುಮಾನದ ರೂಪದಲ್ಲಿ ಒಂದು ಲಕ್ಷ ರೂಪಾಯಿ ನೀಡಲಾಯ್ತು.
ದಿವಾಕರ್ ಗೆ ಸೂಟ್
''ಕೋಟು ಸೂಟು ಬೂಟು ಎಲ್ಲ ತೆಗೆದುಕೊಂಡು ಹೋಗಬಹುದಾ'' ಅಂತ 'ಬಿಗ್ ಬಾಸ್' ಗೆ ದಿವಾಕರ್ ಕೇಳಿಕೊಳ್ಳುತ್ತಿದ್ದರು. ಹೀಗಾಗಿ, ಫಿನಾಲೆ ದಿನ ದಿವಾಕರ್ ಧರಿಸಿದ್ದ ಸೂಟ್ ನ ತಮ್ಮ ಬಳಿಯೇ ಇಟ್ಟುಕೊಳ್ಳಲು ಸುದೀಪ್ ಅನುಮತಿ ನೀಡಿದರು.
ದಿವಾಕರ್ ಏನಂದರು.?
''ಚಂದನ್ ಶೆಟ್ಟಿ ವಿನ್ ಆಗಿದ್ದಕ್ಕೆ ಹಾಗೂ 106 ದಿನಗಳ ಕಾಲ ಕನ್ನಡಿಗರು ನನ್ನ ಉಳಿಸಿದ್ದಕ್ಕೆ ನನಗೆ ತುಂಬಾ ಸಂತೋಷ ಆಗುತ್ತಿದೆ'' ಎಂದರು ದಿವಾಕರ್.