Just In
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೇರ್ ಸ್ಟೈಲ್ ಜೊತೆಗೆ ದಿವಾಕರ್ ಬುದ್ಧಿ ಕೂಡ ಬದಲಾಗಿದೆ.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸ್ಪರ್ಧಿ ದಿವಾಕರ್ ಮೊದಲೆರಡು ವಾರ ಹೀಗಿರಲಿಲ್ಲ.
ಮೊದಲೆರಡು ವಾರ ದಿವಾಕರ್ ರವರಲ್ಲಿ ಮುಗ್ಧತೆ ಇತ್ತು. ಸ್ವಲ್ಪ ಒರಟು ಸ್ವಭಾವ ಇದ್ದರೂ, ಅನ್ಯಾಯದ ವಿರುದ್ಧ ದನಿ ಎತ್ತುತ್ತಿದ್ದರು. ತಮ್ಮ ಆಪ್ತ ಪರ ನಿಲ್ಲುತ್ತಿದ್ದರು. ಆದ್ರೀಗ, ದಿವಾಕರ್ ಹಾಗಿಲ್ಲ.!
ಮೊದಲಿನಿಂದಲೂ ತಮ್ಮ ಪರ ಇದ್ದ ರಿಯಾಝ್ ಜೊತೆ ದಿವಾಕರ್ ಜಗಳ ಮಾಡಿಕೊಂಡಿದ್ದಾರೆ. ತಮ್ಮ 'ಗಾರ್ಡನ್ ಏರಿಯಾ' ಗುಂಪಿನಲ್ಲಿ ಇರುವ ಜಯಶ್ರೀನಿವಾಸನ್ ಜೊತೆಗೂ ಕಿತ್ತಾಡಿಕೊಂಡಿದ್ದಾರೆ. ನಿವೇದಿತಾ ಮೇಲೆ ಸುಮ್ಮನೆ ಕೋಪಿಸಿಕೊಂಡಿದ್ದಾರೆ.
ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ.!
ದಿವಾಕರ್ ರವರ ಈ ವರ್ತನೆ ಬಗ್ಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಮಾತನಾಡಿದ್ದು ಹೀಗೆ....

ದಿವಾಕರ್-ನಿವೇದಿತಾ ನಡುವೆ ಅಗಿದ್ದೇನು.?
ಕಳೆದ ವಾರ ನಿವೇದಿತಾ ಕ್ಯಾಪ್ಟನ್ ಆಗಿದ್ದಾಗ, ನಿವೇದಿತಾ ಹಾಗೂ ದಿವಾಕರ್ ನಡುವೆ ಜಟಾಪಟಿ ನಡೆಯಿತು. ನಿವೇದಿತಾ 'ನಾನ್ ಸೆನ್ಸ್' ಎಂದಿದ್ದನ್ನ ತಪ್ಪಾಗಿ ಅರ್ಥೈಸಿದ ದಿವಾಕರ್, ''ಸ್ಟುಪಿಡ್'' ಎಂದು ಬೈದರು ಅಂತ ನಿವೇದಿತಾ ಮೇಲೆ ಮುನಿಸಿಕೊಂಡಿದ್ದರು. ಪದೇ ಪದೇ ನಿವೇದಿತಾ ಕ್ಷಮೆ ಕೇಳಿದರೂ, ದಿವಾಕರ್ ಕೋಪ ಕಮ್ಮಿ ಆಗಲಿಲ್ಲ. ಈ ಬಗ್ಗೆ ಸುದೀಪ್ ಹೇಳಿದ್ದು ಹೀಗೆ....
ರಿಯಾಝ್ ಹೇಳಿದ್ರಲ್ಲಿ ತಪ್ಪೇನಿದೆ.? ಸೆಲೆಬ್ರಿಟಿಗಳು ಮಾತ್ರ ಸರಿಯೇ.?

ನಾನ್ ಸೆನ್ಸ್ ಅಂದರೆ ಏನು.?
''ಸ್ಟುಪಿಡ್' ಅಂದ್ರೆ ಮೂರ್ಖ ಅಂತ. 'ನಾನ್ ಸೆನ್ಸ್' ಅಂದ್ರೆ ಅರಿವಿಲ್ಲದೇ.... ಈ ಪದಗಳ ಅರ್ಥ ನಿಮಗೆ ಗೊತ್ತಿಲ್ಲದೇ ಇದ್ದರೂ, ಅಷ್ಟೊಂದು ರೇಗಾಡಿದರಲ್ಲಾ.?'' ಎಂದು ದಿವಾಕರ್ ಗೆ ಸುದೀಪ್ ಪ್ರಶ್ನಿಸಿದರು. ಜೊತೆಗೆ ''ನಿವೇದಿತಾ ನಿಮ್ಮನ್ನ ಸ್ಟುಪಿಡ್ ಅಂತ ಕರೆಯಲೇ ಇಲ್ಲ'' ಎಂದು ದಿವಾಕರ್ ಗೆ ಸುದೀಪ್ ಮನವರಿಕೆ ಮಾಡಿದರು.
ದಿವಾಕರ್ ಬದಲಾಗಿದ್ದಾರಾ.? ರಿಯಾಝ್ ಗೆ ಅಷ್ಟು ಬೇಸರ ಯಾಕೆ.?

ದಿವಾಕರ್ ಗೆ ಸುದೀಪ್ ಹೇಳಿದ್ದೇನು.?
''ಒಟ್ನಲ್ಲಿ, ಏನೋ ಒಂದು ಹೇಳಿದರು'' ಅಂತ ದಿವಾಕರ್ ಹೇಳಿದಕ್ಕೆ, ''ಏನು ಹೇಳಿದರು ಅಂತ ತಿಳಿದುಕೊಳ್ಳದೇ ರೇಗಾಡಿದ್ರಿ. ನಿಮ್ಮನ್ನ ಯಾರೂ ಬೈಯ್ಯಲಿಲ್ಲ'' ಎಂದು ಸುದೀಪ್ ಹೇಳಿದರು.
ಹೊಚ್ಚ ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ 'ಸೇಲ್ಸ್ ಮ್ಯಾನ್' ದಿವಾಕರ್.!

ಬುದ್ಧಿ ಮಾತು ಹೇಳಿದ ಸುದೀಪ್
''ಬೇರೆಲ್ಲೋ ನಿಮಗೆ ಕಿರಿಕಿರಿ ಆಗಿದ್ದಕ್ಕೆ, ಈ ಸನ್ನಿವೇಶದಲ್ಲಿ ಹೊರ ಹಾಕಿದ್ರಿ ಅಂತ ಭಾವನೆ ಮೂಡಿತು. ನಿವೇದಿತಾ ನಿಮ್ಮ ಬಳಿ ಬಂದು ಕ್ಷಮೆ ಕೇಳಿದರೂ, ನಿಮ್ಮ ಕೋಪ ಕಮ್ಮಿ ಆಗಲಿಲ್ಲ. ದಿವಾಕರ್ ಅವರ ಹೇರ್ ಸ್ಟೈಲ್ ಮಾತ್ರ ಅಲ್ಲ, ದಿವಾಕರ್ ಬುದ್ಧಿ ಕೂಡ ಬದಲಾಗಿದೆ ಅಂತ ನೋಡುತ್ತಿರುವ ಜನರ ಮನಸ್ಸಲ್ಲಿ ಅನ್ಸಲ್ವಾ.?'' ಎಂದು ದಿವಾಕರ್ ಗೆ ಸುದೀಪ್ ಬುದ್ಧಿ ಮಾತು ಹೇಳಿದರು