ಮಹಾಭಾರತ/ರಾಮಾಯಣದ ಯಾವ ಪಾತ್ರಗಳು 'ಬಿಗ್ ಬಾಸ್' ಸ್ಪರ್ಧಿಗಳಿಗೆ ಸೂಕ್ತ.?
Recommended Video

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಪ್ರತಿ ದಿನ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದೆ. 'ಬಿಗ್ ಬಾಸ್' ಮನೆಯ ಸದಸ್ಯರು, ಅವರ ನಡವಳಿಕೆ, ವರ್ತನೆ, ಹಾಸ್ಯ ಮನೋಭಾವ... ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ವೀಕ್ಷಕರು ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ.
ಕೆಲ ವೀಕ್ಷಕರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ 'ಬಿಗ್ ಬಾಸ್' ಸ್ಪರ್ಧಿಗಳನ್ನ ರಾಮಾಯಣ/ಮಹಾಭಾರತದ ಕೆಲ ಪಾತ್ರಗಳಿಗೆ ಹೋಲಿಕೆ ಮಾಡಲು ಶುರು ಮಾಡಿದ್ದಾರೆ.
ಹಾಗಾದ್ರೆ, ಮಹಾಭಾರತ/ರಾಮಾಯಣದ ಯಾವ ಪಾತ್ರಗಳು 'ಬಿಗ್ ಬಾಸ್' ಸ್ಪರ್ಧಿಗಳಿಗೆ ಸೂಕ್ತ.? ಉತ್ತರ ಫೋಟೋ ಸ್ಲೈಡ್ ಗಳಲ್ಲಿ.......

'ಶ್ರೀರಾಮಚಂದ್ರ' ಯಾರು ಗೊತ್ತಾ.?
'ಬಿಗ್ ಬಾಸ್' ಮನೆಯಲ್ಲಿ ಲೈಟ್ ಆಗಿ ಲವ್ ಟ್ರ್ಯಾಕ್ ಶುರು ಮಾಡುತ್ತಿರುವ ಚಂದನ್ ಶೆಟ್ಟಿ 'ಶ್ರೀರಾಮಚಂದ್ರ' ಅಂತೆ.!

ಹಾಗಾದ್ರೆ, ರಾವಣ ಯಾರು.? ಲಕ್ಷ್ಮಣ ಯಾರು.?
ಚಂದನ್ ಶೆಟ್ಟಿ ಲವ್ ಟ್ರ್ಯಾಕ್ ಗೆ ವಿಲನ್ ಆಗಿರುವ ಜೆಕೆ 'ರಾವಣ' ಅಂತೆ. ಇನ್ನೂ ಎಲ್ಲರನ್ನೂ ಅಣ್ಣ-ತಂಗಿ ಮನೋಭಾವದಲ್ಲಿ ನೋಡುವ ದಿವಾಕರ್ ಗೆ 'ಲಕ್ಷ್ಮಣ' ಪಾತ್ರ ಸೂಕ್ತ ಎಂಬುದು ವೀಕ್ಷಕರ ಅಭಿಪ್ರಾಯ.

ಶ್ರೀಕೃಷ್ಣ ಯಾರು ಅಂತೀರಾ.?
ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ 'ಶ್ರೀಕೃಷ್ಣ' ಆದರೆ, 'ಭೀಷ್ಮಾಚಾರ್ಯ' ಸಮೀರಾಚಾರ್ಯ ಹಾಗೂ ರಿಯಾಝ್ 'ಕರ್ಣ'.

ರಾಕ್ಷಸರು ಯಾರ್ಯಾರು.?
ಸಿಹಿ ಕಹಿ ಚಂದ್ರು - ಬಕಾಸುರ
ಜಗನ್ - ಕೀಚಕ
ದಯಾಳ್ - ಭಸ್ಮಾಸುರ

ನಟಿಮಣಿಯರು.?
ಅನುಪಮಾ ಗೌಡ - ಮಂಥರೆ
ಆಶಿತಾ - ಶೂರ್ಪನಖಿ
ಶ್ರುತಿ ಪ್ರಕಾಶ್ - ರಂಭೆ
ತೇಜಸ್ವಿನಿ - ಊರ್ವಶಿ
ಕೃಷಿ - ಮೇನಕೆ
ನಿವೇದಿತಾ ಗೌಡ - ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ
ಅಷ್ಟಕ್ಕೂ, ಇದನ್ನೆಲ್ಲ ಗುರು ಪಾಟೀಲ್ ಎಂಬುವವರು ಕಲರ್ಸ್ ಸೂಪರ್ ಫೇಸ್ ಬುಕ್ ಪೇಜ್ ನಲ್ಲಿಯೇ ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











