'ಬಿಗ್ ಬಾಸ್' ಮನೆಯಲ್ಲಿ ನಡೆದಿದೆ ಏಳು ಕೊಲೆಗಳು.!
ಶೀರ್ಷಿಕೆ ನೋಡಿದ ತಕ್ಷಣ ಗಾಬರಿ ಪಡುವ ಅವಶ್ಯಕತೆ ಇಲ್ಲ. ಯಾಕಂದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಈ ವಾರ 'ಕೊಲೆ' ಮಾಡುವ ಚಟುವಟಿಕೆಯನ್ನೇ 'ಬಿಗ್ ಬಾಸ್' ನೀಡಿದ್ದಾರೆ.
ಜೈಲಿನಿಂದ ತಪ್ಪಿಸಿಕೊಂಡು ಬಂದ ಕೊಲೆಗಾರ ಮನೆಯನ್ನು ಸೇರಿಕೊಂಡಿದ್ದಾನೆ. ಮನೆ ಸದಸ್ಯರು ಹತ್ಯೆಗೀಡಾಗದಂತೆ ಎಚ್ಚರ ವಹಿಸಬೇಕು. ಕೊಲೆಗಾರ ತನ್ನ ಬುದ್ಧಿವಂತಿಕೆಯಿಂದ ಕೊಲೆ ಮಾಡುವಲ್ಲಿ ಯಶಸ್ವಿ ಆದರೆ, ಆ ಸದಸ್ಯರ ಹೆಸರನ್ನು ಘೋಷಿಸಲಾಗುವುದು ಎಂದು ವಿಶೇಷ ಚಟುವಟಿಕೆ ಬಗ್ಗೆ 'ಬಿಗ್ ಬಾಸ್' ವಿವರಿಸಿದರು.
ಈ ವಿಶೇಷ ಚಟುವಟಿಕೆಯಲ್ಲಿ ರಿಯಾಝ್ ಮತ್ತು ಅನುಪಮಾ ಗೌಡ 'ಕೊಲೆಗಾರರಾಗಿದ್ದರು'. ಯಾರನ್ನ ಹೇಗೆ ಕೊಲೆ ಮಾಡಬೇಕು ಎಂಬುದನ್ನ ಕಾಲ ಕಾಲಕ್ಕೆ ತಿಳಿಸುವ ಸಲುವಾಗಿ 'ಬಿಗ್ ಬಾಸ್' ಒಂದು ವಿಶೇಷ ದೂರವಾಣಿಯನ್ನೂ ರಿಯಾಝ್ ಗೆ ನೀಡಿದ್ದರು. ಮುಂದೆ ಓದಿರಿ....

ಸೈಲೆಂಟ್ ಆಗಿ ನಡೆಯುತ್ತಿತ್ತು ಕೊಲೆಗಳು
ಕೊಲೆ ಅಂದ ಕೂಡಲೆ 'ಬಿಗ್ ಬಾಸ್' ಮನೆಯಲ್ಲಿ ರಕ್ತ ಹರಿಯಲಿಲ್ಲ. ಲಾಂಗ್, ಮಚ್ಚು, ಚೂರಿ, ಚಾಕು.. ಎಲ್ಲೂ ಕಾಣಲಿಲ್ಲ. ಇದಾವುದೂ ಇಲ್ಲದಂತೆ 'ಟಾಸ್ಕ್' ಮೂಲಕ ಕೊಲೆ ಆಗುತ್ತಿತ್ತು. ಅಷ್ಟಕ್ಕೂ, ಕೊಲೆ ಹೇಗೆ ಆಗುತ್ತಿದೆ ಎಂಬುದು ಗೊತ್ತಾಗದ ಕಾರಣ ಕೆಲ ಸದಸ್ಯರು ಭಯಭೀತರಾಗಿದ್ದರು.

ಏಳು ಜನರ ಕೊಲೆ ಆಯ್ತು
ಲಾಸ್ಯ, ಜಯಶ್ರೀನಿವಾಸನ್, ಸಮೀರಾಚಾರ್ಯ, ನಿವೇದಿತಾ, ದಿವಾಕರ್, ಸಂಯುಕ್ತ ಹಾಗೂ ರಿಯಾಝ್ ಹತ್ಯೆಗೀಡಾದರು.

ರಿಯಾಝ್ ಮೇಲೆ ಅನುಮಾನ
ರಿಯಾಝ್ ಕೊಲೆಗಾರ ಎಂಬ ಅನುಮಾನ ಅನೇಕರಲ್ಲಿ ಮೂಡಿದ ಪರಿಣಾಮ, ಎಲ್ಲರ ದಿಕ್ಕು ತಪ್ಪಿಸಲು... ರಿಯಾಝ್ ರನ್ನೇ ಕೊಲೆ ಮಾಡಲು ಅನುಪಮಾ ಗೆ 'ಬಿಗ್ ಬಾಸ್' ಸೂಚಿಸಿದರು.

ಬಿಳಿ ಬಟ್ಟೆ
ಕೊಲೆಯಾದವರು ಬಿಳಿ ವಸ್ತ್ರ ಧರಿಸಿ ಗಾರ್ಡನ್ ಏರಿಯಾದಲ್ಲಿ ಇರಬೇಕಿತ್ತು. 'ಪಿಶಾಚಿ'ಗಳಾಗಿ ಜಯಶ್ರೀನಿವಾಸನ್ ಎಲ್ಲರನ್ನ ನಡುಗಿಸಲು ಆರಂಭಿಸಿದರು.

ಚಟುವಟಿಕೆ ಯಶಸ್ವಿ
'ಬಿಗ್ ಬಾಸ್' ಆದೇಶದಂತೆ ರಿಯಾಝ್ ಮತ್ತು ಅನುಪಮಾ ಏಳು ಸದಸ್ಯರನ್ನ ಕೊಲೆ ಮಾಡುವಲ್ಲಿ ಯಶಸ್ವಿ ಆದರು. ಹೀಗಾಗಿ, ಚಟುವಟಿಕೆ ಯಶಸ್ವಿಯಾಗಿ ಮುಕ್ತಾಯ ಆಯ್ತು.


Click it and Unblock the Notifications











