Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಲ್ಲ ಗುಟ್ಟು ರಟ್ಟಾಯ್ತು: ಯಾವ ಸೀಕ್ರೆಟ್ ಕೂಡ ಉಳಿದಿಲ್ಲ.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹನ್ನೊಂದನೇ ವಾರ ಟ್ವಿಸ್ಟ್ ಮೇಲೆ ಟ್ವಿಸ್ಟ್ ಗಳನ್ನ 'ಬಿಗ್ ಬಾಸ್' ನೀಡಿದರು. ಕನ್ಫೆಶನ್ ರೂಮ್ ಒಳಗೆ ಹೋದ ಜಯಶ್ರೀನಿವಾಸನ್, ಅಲ್ಲಿಂದ ವಾಪಸ್ ಬರಲೇ ಇಲ್ಲ.
ಮಧ್ಯರಾತ್ರಿ ಎಲಿಮಿನೇಟ್ ಆದ ಸಮೀರಾಚಾರ್ಯ ವಾರದ ಕೊನೆಯಲ್ಲಿ ವಾಪಸ್ ಬಂದರೆ, ದಿವಾಕರ್ ಔಟ್ ಆದರು. ಒಂದು ವಾರ ಸೀಕ್ರೆಟ್ ರೂಮ್ ನಲ್ಲಿ ಇದ್ದು ಬಂದ್ಮೇಲೆ, ''ಮನೆಗೆ ಹೋಗಿದ್ದೆ'' ಅಂತೆಲ್ಲ ದಿವಾಕರ್ ಓಳು ಬಿಟ್ಟಿದ್ದರು. ಅದನ್ನ ಸ್ಪರ್ಧಿಗಳು ಕೂಡ ನಂಬಿದ್ದರು. ಆದ್ರೆ, ದಿವಾಕರ್ ಗುಟ್ಟಾಗಿ ಇಟ್ಟಿದ್ದ ಸೀಕ್ರೆಟ್ ತುಂಬಾ ದಿನ ಉಳಿಯಲೇ ಇಲ್ಲ. ಸುದೀಪ್ ಮುಂದೆಯೇ ದಿವಾಕರ್ ಗುಟ್ಟು ರಟ್ಟಾಯ್ತು.
'ಬಿಗ್ ಬಾಸ್' ಮನೆಯಲ್ಲಿ ಹನ್ನೊಂದನೇ ವಾರ ಏನೇನ್ ಆಯ್ತು ಎಂಬ ಕ್ಲಾರಿಟಿ ಸದ್ಯ ಎಲ್ಲ ಸ್ಪರ್ಧಿಗಳಿಗೆ ಸಿಕ್ಕಿದೆ. ಮುಂದೆ ಓದಿರಿ...
ಸುದೀಪ್ ಮುಂದೆ ತಗಲಾಕೊಂಡ ದಿವಾಕರ್.!
ಎಲ್ಲ ಸ್ಪರ್ಧಿಗಳ ಕುಟುಂಬದವರಿಗೆ ಕಳೆದ ವಾರ 'ಬಿಗ್ ಬಾಸ್' ಮನೆಯೊಳಗೆ ಎಂಟ್ರಿಕೊಡುವ ಅವಕಾಶ ಇತ್ತು. ಮೂರು ತಿಂಗಳ ಬಳಿಕ ಮನೆಯವರನ್ನ ಭೇಟಿ ಮಾಡಿದ ಅನುಭವ ಹೇಗಿತ್ತು ಎಂದು ಎಲ್ಲರಿಗೂ ಸುದೀಪ್ ಕೇಳಿದಾಗ, ''ನನ್ನ ಹೆಂಡತಿಯನ್ನ ಬಿಟ್ಟು ಮೂರು ತಿಂಗಳು ಇದ್ದದ್ದು ಇದೇ ಮೊದಲು. ಹೀಗಾಗಿ ತುಂಬಾ ಮಾತನಾಡಿದೆ'' ಎಂದುಬಿಟ್ಟು ತಗಲಾಕೊಂಡರು ದಿವಾಕರ್.
ಬರೀ ಓಳು ಬಿಟ್ಟು ಚೆನ್ನಾಗಿ ಕಾಗೆ ಹಾರಿಸಿದ ದಿವಾಕರ್.!
ಇಕ್ಕಟ್ಟಿಗೆ ಸಿಲುಕಿಸಿದ ಸುದೀಪ್
''ಕಳೆದ ವಾರ ಮನೆಗೆ ಹೋಗಿ ಬಂದ್ರಲ್ಲ.! ಮನೆಗೆ ಹೋಗಿದ್ರಿ, ಆದ್ರೆ ಹೆಂಡತಿ ಸಿಕ್ಕಿರಲಿಲ್ಲ.! ಓಕೆ'' ಎಂದು ಹೇಳಿ ಅದಾಗಲೇ ಓಳು ಬಿಟ್ಟಿದ್ದ ದಿವಾಕರ್ ಅವರನ್ನ ಇಕ್ಕಟ್ಟಿಗೆ ಸಿಲುಕಿಸಿದರು ದಿವಾಕರ್.
ಎಷ್ಟೇ ತಿರುಗುಮುರುಗು ಮಾಡಿದರೂ ಸ್ಪರ್ಧಿಗಳ ಲೆಕ್ಕಾಚಾರ ಕರೆಕ್ಟ್ ಆಗಿದೆ.!
'ಬಿಗ್ ಬಾಸ್' ಮನೆಯೊಳಗೆ ಸುದೀಪ್ ಬಂದಾಗ...
ಇನ್ನೂ 'ಬಿಗ್ ಬಾಸ್' ಮನೆಯೊಳಗೆ ಸುದೀಪ್ ಬಂದಾಗ, ಸೀಕ್ರೆಟ್ ರೂಮ್ ನಲ್ಲಿ ಇದ್ದ ಅನುಭವವನ್ನ ದಿವಾಕರ್ ಅವರೇ ಬಿಚ್ಚಿಟ್ಟರು. ಹಾಗೇ, ಹೊಸ ವರ್ಷದ ದಿನ ವೈನ್ ಗಾಗಿ ದಿವಾಕರ್ ಇಟ್ಟ ಬೇಡಿಕೆಯನ್ನ ಸುದೀಪ್ ಅನುಕರಣೆ ಮಾಡಿದರು. ಅಲ್ಲಿಗೆ, ದಿವಾಕರ್ ಔಟ್ ಆಗಿರಲಿಲ್ಲ.. ಸೀಕ್ರೆಟ್ ರೂಮ್ ನಲ್ಲಿ ಇದ್ದರು ಎಂಬ ಸತ್ಯ ಎಲ್ಲರಿಗೂ ಗೊತ್ತಾಯ್ತು.
'ಬಿಗ್ ಬಾಸ್' ಮುಂದೆ 'ಕಾಮನ್ ಮ್ಯಾನ್' ದಿವಾಕರ್ ಇಟ್ಟಿರುವ 'ದೊಡ್ಡ' ಬೇಡಿಕೆ ಏನ್ಗೊತ್ತಾ.?
ಯಾವುದೇ ಗುಟ್ಟು ಗುಟ್ಟಾಗಿ ಉಳಿದಿಲ್ಲ
ಜಯಶ್ರೀನಿವಾಸನ್ ಎಲಿಮಿನೇಷನ್ ಬಗ್ಗೆ ಕೂಡ ಸುದೀಪ್ ಬಾಯ್ಬಿಟ್ಟರು. ಹಾಗೇ, ಜಯಶ್ರೀನಿವಾಸನ್ ಜೊತೆಗೆ ಸಮೀರಾಚಾರ್ಯ ಸೀಕ್ರೆಟ್ ರೂಮ್ ನಲ್ಲಿ ಇದ್ದದ್ದು ಅದಾಗಲೇ ಸ್ಪರ್ಧಿಗಳಿಗೆ ಗೊತ್ತಾಗಿದೆ. ಹೀಗಾಗಿ, ಸದ್ಯ 'ಬಿಗ್ ಬಾಸ್' ಮನೆಯೊಳಗೆ ಯಾವುದೇ ಗುಟ್ಟು ಗುಟ್ಟಾಗಿ ಉಳಿದಿಲ್ಲ. ಎಲ್ಲವೂ ರಟ್ಟಾಗಿದೆ.!