Just In
Don't Miss!
- News
ಕರ್ನಾಟಕ ಬಜೆಟ್ 2021: ಆರೋಗ್ಯ ಕ್ಷೇತ್ರಕ್ಕೆ ಯಡಿಯೂರಪ್ಪ ಘೋಷಿಸಿದ ಕೊಡುಗೆಗಳು
- Sports
ಕರ್ನಾಟಕ ಬಜೆಟ್: ಮಂಡ್ಯ ಕ್ರೀಡಾಂಗಣ ಅಭಿವೃದ್ಧಿಗೆ 10 ಕೋ.ರೂ. ಘೋಷಣೆ
- Finance
ಕರ್ನಾಟಕ ರಾಜ್ಯ ಬಜೆಟ್: ಕೃಷಿ ವಲಯಕ್ಕೆ 31,021 ಕೋಟಿ ರೂಪಾಯಿ ಅನುದಾನ
- Automobiles
ಪ್ರತಿ ಚಾರ್ಜ್ಗೆ 240 ಕಿ.ಮೀ ಮೈಲೇಜ್ ನೀಡುವ ಓಲಾ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ
- Lifestyle
ಸೂಪರ್ ಫುಡ್ ಆಗಿರುವ ಟೆಫ್ ಬಗ್ಗೆ ನಿಮಗೆಷ್ಟು ಗೊತ್ತು?
- Education
Women's Day 2021 Google Doodle: ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶಾಕ್ ಆಗಲ್ಲ ಅಂದವ್ರೇ ಶಾಕ್ ಆದ್ರು: ರಿಯಾಝ್ ನ ಮಿಸ್ ಮಾಡ್ತಾವ್ರೆ ಆಚಾರ್ಯರು.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಹದಿಮೂರನೇ ವಾರ ಎಲಿಮಿನೇಟ್ ಆಗಿದ್ದು 'ಕಾಮನ್ ಮ್ಯಾನ್' ರಿಯಾಝ್ ಬಾಷಾ. ರಿಯಾಝ್ ಔಟ್ ಆಗಿದ್ದಕ್ಕೆ ವೀಕ್ಷಕರ ಬಳಗದಿಂದ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ. ರಿಯಾಝ್ ಇಷ್ಟು ಬೇಗ ಔಟ್ ಆಗುವ ಸ್ಪರ್ಧಿಯೇ ಅಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟರೆ, ಇನ್ನೂ ಕೆಲವರು ರಿಯಾಝ್ ಔಟ್ ಆಗಿದ್ದು ಒಳ್ಳೇದಾಯ್ತು ಅಂತಿದ್ದಾರೆ.
ವೀಕ್ಷಕರ ಮಾತು ಹಾಗಿರಲಿ, ''ಬಿಗ್ ಬಾಸ್' ಮನೆಯಿಂದ ಈ ವಾರ ಯಾರು ಔಟ್ ಆದರೆ ನಿಮಗೆ ಶಾಕ್ ಆಗುತ್ತೆ.?'' ಅಂತ ಸಮೀರಾಚಾರ್ಯ ಅವರಿಗೆ ಚಂದನ್ ಶೆಟ್ಟಿ ಪ್ರಶ್ನೆ ಮಾಡಿದ್ದರು. ಆಗ, ''ನಾನು, ನಿವೇದಿತಾ ಹಾಗೂ ರಿಯಾಝ್... ಔಟ್ ಆದರೆ ಏನೂ ಅನಿಸಲ್ಲ. ಶಾಕ್ ಆಗಲ್ಲ'' ಅಂತ ಸಮೀರಾಚಾರ್ಯ ಉತ್ತರಿಸಿದ್ದರು.
''ರಿಯಾಝ್ ಔಟ್ ಆದರೆ ಶಾಕ್ ಆಗಲ್ಲ'' ಅಂತ ಹೇಳಿದ್ದ ಸಮೀರಾಚಾರ್ಯ, ಅದೇ ''ರಿಯಾಝ್ ಎಲಿಮಿನೇಟ್ ಆಗಿದ್ದಾರೆ'' ಎಂದು ಸುದೀಪ್ ಘೋಷಿಸಿದಾಗ ಒಂದು ಕ್ಷಣ ಶಾಕ್ ಆದರು.
ರಿಯಾಝ್ ಔಟ್ ಆಗಿದ್ದು ಯಾಕೆ.? ವೀಕ್ಷಕರೇ ಕೊಟ್ಟ ಹತ್ತು ಕಾರಣಗಳಿವು.!
ವೀಕ್ಷಕರ ಎಸ್.ಎಂ.ಎಸ್ ಆಧಾರದ ಮೇರೆಗೆ ಬಾಟಂ 2 ತಲುಪಿದ್ದವರು ಸಮೀರಾಚಾರ್ಯ ಹಾಗೂ ರಿಯಾಝ್. ಇಬ್ಬರ ಪೈಕಿ ಸಮೀರ್ ಸೇಫ್ ಆದರು, ರಿಯಾಝ್ ಔಟ್ ಆದರು. ರಿಯಾಝ್ ಎಲಿಮಿನೇಟ್ ಆಗಿದ್ದಕ್ಕೆ ಸಮೀರಾಚಾರ್ಯ ಅವರಿಗೆ ಬೇಸರ ಆಗಿರುವುದಂತೂ ಸತ್ಯ.
ಸದ್ಯ 'ಬಿಗ್ ಬಾಸ್' ಮನೆಯೊಳಗೆ ರಿಯಾಝ್ ಅವರನ್ನ ಮಿಸ್ ಮಾಡಿಕೊಳ್ಳುತ್ತಿರುವವರು ಸಮೀರಾಚಾರ್ಯ ಮಾತ್ರ.! ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯೊಳಗೆ ಸಮೀರಾಚಾರ್ಯ ಜೊತೆಗೆ ರಿಯಾಝ್ ಹೆಚ್ಚು ಕಾಲ ಕಳೆದಿದ್ದರು. ಈಗ ರಿಯಾಝ್ ಇಲ್ಲದ ಕಾರಣ ಸಮೀರಾಚಾರ್ಯ ಅವರಿಗೆ ಏನೋ ಕಳೆದುಕೊಂಡಂತಹ ಭಾವನೆ.