Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಷ್ಟರಲ್ಲೇ ಜಸ್ಟ್ ಮಿಸ್ ಆದ ಚಂದನ್: ಈ ವಾರವೂ ಶೆಟ್ರಿಗೆ ತಲೆನೋವಿಲ್ಲ.!
Recommended Video
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆಗಿ ಮೂರು ವಾರಗಳು ಕಳೆದಿವೆ. ನಾಲ್ಕನೇ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಆದರೂ, ಇಲ್ಲಿಯವರೆಗೂ ಒಂದೇ ಒಂದು ಬಾರಿ ಕೂಡ ಚಂದನ್ ಶೆಟ್ಟಿ ನಾಮಿನೇಟ್ ಆಗಿಲ್ಲ.
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸತತವಾಗಿ ನಾಲ್ಕು ವಾರ ನಾಮಿನೇಟ್ ಆಗದೆ ಸೇಫ್ ಆಗಿರುವ ಏಕೈಕ ವ್ಯಕ್ತಿ ಅಂದ್ರೆ ಅದು ಚಂದನ್ ಶೆಟ್ಟಿ.
ಹಾಗ್ನೋಡಿದ್ರೆ, ಈ ವಾರ ಇಮ್ಯೂನಿಟಿ ಪಡೆಯದೆ, ಯಾರಿಂದ ನಾಮಿನೇಟ್ ಕೂಡ ಆಗದೆ ಇರುವುದು ಚಂದನ್ ಶೆಟ್ಟಿ ಮಾತ್ರ.! ಮುಂದೆ ಓದಿರಿ...
ಇಲ್ಲಿಯವರೆಗೂ ಡೇಂಜರ್ ಝೋನ್ ಗೆ ಬಂದಿಲ್ಲ
ಸೆಲೆಬ್ರಿಟಿ ಸ್ಪರ್ಧಿಗಳ ಜೊತೆಗೆ ಚಂದನ್ ಶೆಟ್ಟಿ ಅಷ್ಟಾಗಿ ಸೇರಲ್ಲ. ಕೃಷಿ ತಾಪಂಡ, ಅನುಪಮಾ ಗೌಡ ಜೊತೆಗೆ ಭಿನ್ನಾಭಿಪ್ರಾಯ ಇದ್ದರೂ, ಇಲ್ಲಿಯವರೆಗೂ ಡೇಂಜರ್ ಝೋನ್ ಗೆ ಚಂದನ್ ಶೆಟ್ಟಿ ಬಂದಿಲ್ಲ.
ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಚಂದನ್
ಜನಸಾಮಾನ್ಯ ಸ್ಪರ್ಧಿಗಳ ಜೊತೆಗೆ ಹೆಚ್ಚು ಕಾಲ ಕಳೆಯುವ ಚಂದನ್ ಶೆಟ್ಟಿ, ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಯಾವುದೇ ವಾದ, ವಿವಾದ, ಗುಂಪನ್ನು ಪ್ರತಿನಿಧಿಸದೆ ಚಂದನ್ ಶೆಟ್ಟಿ ಪ್ರಜ್ಞಾಪೂರ್ವಕವಾಗಿ, ಅಷ್ಟೇ ಸೇಫ್ ಆಗಿ ಆಟ ಆಡುತ್ತಿದ್ದಾರೆ.
ಈ ವಾರವೂ ಚಂದನ್ ಶೆಟ್ಟಿಗೆ ತಲೆಬಿಸಿ ಇಲ್ಲ
ಅಷ್ಟಕ್ಕೂ, ಈ ವಾರ ಚಂದನ್ ಶೆಟ್ಟಿ ರವರನ್ನ ಅನುಪಮಾ ಗೌಡ ನಾಮಿನೇಟ್ ಮಾಡಿದ್ರು. ಆದ್ರೆ, ತಮಗೆ ಸಿಕ್ಕ ಸೂಪರ್ ಅಧಿಕಾರವನ್ನು ಬಳಸಿದ ಸಮೀರಾಚಾರ್ಯ, ಅನುಪಮಾ ಗೌಡ ಮಾಡಿದ ವೋಟುಗಳನ್ನು ರದ್ದುಗೊಳಿಸಿದರು. ಹೀಗಾಗಿ, ಚಂದನ್ ಶೆಟ್ಟಿಗೆ ಈ ವಾರ ಕೂಡ ಎಲಿಮಿನೇಷನ್ ತಲೆಬಿಸಿ ಇಲ್ಲ.
ಮೂರು ವಾರ ಸೇಫ್ ಆಗಿದ್ದ ತೇಜಸ್ವಿನಿ
ನಿಜ ಹೇಳ್ಬೇಕಂದ್ರೆ, ನಟಿ ತೇಜಸ್ವಿನಿ ಕೂಡ ಮೂರು ವಾರಗಳ ಕಾಲ ನಾಮಿನೇಟ್ ಆಗಿರಲಿಲ್ಲ. ಆದ್ರೆ, ನಾಲ್ಕನೇ ವಾರ ತೇಜಸ್ವಿನಿ ಡೇಂಜರ್ ಝೋನ್ ಗೆ ಬಂದಿದ್ದಾರೆ.